ಆ್ಯಪ್ನಗರ

ತಲೆಯೆತ್ತಿ ಬಾಳುವಂತ ಜೀವನ ನಿಮ್ಮದಾಗಲಿ

'ಇಂದಿನ ದಿನಗಳಲ್ಲಿ ನೈತಿಕ ನೆಲೆಗಟ್ಟನ್ನು ಭದ್ರಪಡಿಸಿಕೊಂಡು ತಲೆಯೆತ್ತಿ ಬಾಳುವಂತ ಜೀವನ ನಿಮ್ಮದಾಗಬೇಕು' ಎಂದು ಹೊಸದುರ್ಗ ಸಾಣೇಹಳ್ಳಿ ತರಳಬಾಳು ಶಾಖಾಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

Vijaya Karnataka 29 Jan 2019, 5:00 am
ಚಿತ್ರದುರ್ಗ : 'ಇಂದಿನ ದಿನಗಳಲ್ಲಿ ನೈತಿಕ ನೆಲೆಗಟ್ಟನ್ನು ಭದ್ರಪಡಿಸಿಕೊಂಡು ತಲೆಯೆತ್ತಿ ಬಾಳುವಂತ ಜೀವನ ನಿಮ್ಮದಾಗಬೇಕು' ಎಂದು ಹೊಸದುರ್ಗ ಸಾಣೇಹಳ್ಳಿ ತರಳಬಾಳು ಶಾಖಾಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
Vijaya Karnataka Web lets live up to life
ತಲೆಯೆತ್ತಿ ಬಾಳುವಂತ ಜೀವನ ನಿಮ್ಮದಾಗಲಿ


ನಗರದ ರಂಗಯ್ಯನ ಬಾಗಿಲು ಸಮೀಪವಿರುವ ಎಸ್‌ಜಿ ಪ್ಯಾರಾಮೆಡಿಕಲ್‌ ಕಾಲೇಜು ಕ್ಯಾಂಪಸ್‌ನಲ್ಲಿ ಚಿತ್ರದುರ್ಗ ನರ್ಸಿಂಗ್‌ ಮತ್ತು ಪ್ಯಾರಾಮೆಡಿಕಲ್‌ ಫೆಡರೇಷನ್‌ನಿಂದ ಸೋಮವಾರ ಆಯೋಜಿಸಿದ್ದ 'ನರ್ಸಿಂಗ್‌ ಮತ್ತು ಪ್ಯಾರಾಮೆಡಿಕಲ್‌ ಎಕ್ಸ್‌ಪೋ 2019 ಕಾರ್ಯಕ್ರಮ'ದ ಸಾನ್ನಿಧ್ಯ ವಹಿಸಿ ಮಾತನಾಡಿದರು.

'ನಾವು ಎಷ್ಟೆಷ್ಟು ಎತ್ತರದ ಸ್ಥಾನಕ್ಕೆ ಹೋಗುತ್ತಿದ್ದೇವೊ ಅದಕ್ಕಿಂತ ಪ್ರಪಾತಕ್ಕೆ ಇಳಿಯುತ್ತೇವೆ ಎನ್ನುವುದನ್ನ ಮರೆಯಬಾರದು'. 'ಇವತ್ತು ನಮ್ಮ ಧಾರ್ಮಿಕ, ರಾಜಕೀಯ ಕ್ಷೇತ್ರವನ್ನು ಗಮನಿಸಿ, ಮೊನ್ನೆ ತಾನೆ ರೆಸಾರ್ಟ್‌ ರಾಜಕೀಯ ಮಾಡಿದಂತ ರಾಜಕಾರಣಿಗಳು ಅಲ್ಲಿ ಕುಡಿದು ಏನೆಲ್ಲ ಅವಾಂತರ ಮಾಡಿಕೊಂಡರು. ಹಾಗೆಯೇ ನಮ್ಮ ವಿದ್ಯಾರ್ಥಿಗಳು ಅದರಲ್ಲೂ ನಮ್ಮ ಮೆಡಿಕಲ್‌, ಎಂಜಿನಿಯರ್‌ ಕಾಲೇಜು ಸೇರಿದಂತೆ ಮತ್ತಿತರ ಕೋರ್ಸ್‌ ಓದುವಂತ ವಿದ್ಯಾರ್ಥಿಗಳು ದುಶ್ಚಟಗಳಿಗೆ ದಾಸರಾಗಿ ಎಲ್ಲೇಲ್ಲೋ ಬಿದ್ದು ಕೊನೆಗೆ ಪ್ರಾಣವನ್ನೇ ಕಳೆದುಕೊಳ್ಳುವುದನ್ನು ಗಮನಿಸಿದ್ದೇವೆ. ಅದರಲ್ಲೂ ಅತ್ಯಂತ ಶ್ರೀಮಂತ ಮನೆತನದ ಹೆಣ್ಣು, ಗಂಡು ಇದರಲ್ಲಿ ಭೇದವೇ ಇಲ್ಲ ಎಂಬವಂತ ಸ್ಥಿತಿ ನಿರ್ಮಾಣ ಆಗಿದೆ. ಇಬ್ಬರು ಕೂಡ ಮಾದಕ ವಸ್ತುಗಳಿಗೆ ಬಲಿಯಾಗಿ ತಮ್ಮ ಬದುಕನ್ನು ತಾವೇ ನರಕ ಮಾಡಿಕೊಳ್ಳುತ್ತಿದ್ದಾರೆ' ಎಂದು ಬೇಸರ ವ್ಯಕ್ತಪಡಿಸಿದರು.

'ಒಬ್ಬ ಅಧ್ಯಾಪಕ ಎಷ್ಟು ಅಭ್ಯಾಸ ಮಾಡುತ್ತಾನೊ ವಿದ್ಯಾರ್ಥಿಗಳು ಅದಕ್ಕಿಂತ ಹೆಚ್ಚು ಅಧ್ಯಯನ ಮಾಡಬೇಕಾದ ಅಗತ್ಯ ವಿದ್ಯಾರ್ಥಿಗಳಿಗೆ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ದೃಶ್ಯ ಮಾಧ್ಯಮಗಳ ಹಾವಳಿಗೆ ಒಳಗಾಗಿ ಅದರಲ್ಲೇ ಬದುಕನ್ನ ಕಳೆದುಕೊಳ್ಳುವ ಬಹಳ ಮಂದಿ ಇದ್ದಾರೆ. ನಾವು ಎಲ್ಲಿ ಕುಳಿತಿದ್ದೇವೆ ಎಂಬ ಅರಿವಿಲ್ಲದೇ ಮೊಬೈಲ್‌ನಲ್ಲೇ ನಿಮ್ಮನ್ನು ನೀವು ಮುಳುಗಿಸಿ ಕೊಂಡಿರುತ್ತೀರಿ, ಹಾಗಾಗಿ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಬಂದ ತಕ್ಷ ಣವೇ ಮೊಬೈಲ್‌ ಜಾಮ್‌ ಮಾಡುವಂತ ವ್ಯವಸ್ಥೆ ಆಗಬೇಕು' ಎಂದರು.

'ನೀವು ಆದರ್ಶ ಜೀವನ ಮೈಗೂಡಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನ ಬಂಗಾರದ ಜೀವನ. ಅದನ್ನು ಕಬ್ಬಿಣದ ಜೀವನ ಮಾಡಿಕೊಂಡರೆ ಹೇಗೆ. ಎಲ್ಲೂ ಕೂಡ ನೈತಿಕವಾಗಿ ಎಡವದಾಗೆ ಬಹಳ ಎಚ್ಚರಿಕೆಯಿಂದ ನಿಮ್ಮ ಶಿಕ್ಷ ಣ ಮುಂದುವರೆಸಬೇಕು. ಜತೆಯಲ್ಲಿ ಅಧ್ಯಯನ ಆಸಕ್ತಿ ಬೆಳೆಸಿಕೊಳ್ಳಬೇಕು. ಹೊಸ ಹೊಸ ಶೋಧನೆ ಮಾಡಬೇಕು. ವಿಜ್ಞಾನ ತುಂಬಾ ಬೆಳೆದಿದೆ. ವಿಜ್ಞಾನ ಬೆಳೆಯುವುದರ ಜತೆ ನಾವು ಬೆಳೆಯದಿದ್ದರೆ ಹೇಗೆ ? ವಿಜ್ಞಾನ ಬೆಳೆಯುವುದೇ ನಮ್ಮ ಬೆಳವಣಿಗೆ ಮೂಲಕ, ಹಾಗಾಗಿ ವಿದ್ಯಾರ್ಥಿಗಳು ಯಾವಾಗಲೂ ಚಿಂತನೆ ಮಾಡುತ್ತಿರಬೇಕು. ಪ್ರತಿಯೊಂದನ್ನ ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ನಾನು ಸಮಾಜಕ್ಕೆ ಏನು ಕೊಡಬಲ್ಲೆ ಎಂಬ ಪ್ರಶ್ನೆ ಹಾಕಿಕೊಂಡು ಹೊಸ ಶೋಧಗಳಿಗೆ ಕಾರಣ ಆಗಬೇಕು. ಶ್ರದ್ಧೆ, ಸದ್ಭಾವನೆ ಮೈಗೂಡಿಸಿಕೊಳ್ಳಬೇಕು. ನಿಮ್ಮ ಚಟುವಟಿಕೆಗಳು ಸದಾ ಕ್ರಿಯಾಶೀಲ, ಸಕಾರಾತ್ಮವಾಗಿ ಇರಲಿ, ಚಟುವಟಿಕೆಗಳಿಂದ ಕೂಡಿರಲಿ' ಎಂದು ಹಾರೈಸಿದರು.

ಜಿಲ್ಲಾ ಸರ್ಜನ್‌ ಡಾ.ಎನ್‌.ಜಯಪ್ರಕಾಶ್‌, ಬೆಂಗಳೂರು ಕೆಎನ್‌ಸಿ ರಿಜಿಸ್ಟ್ರಾರ್‌ ಬಿ.ಜ್ಯೋತಿ ವೇದಿಕೆಯಲ್ಲಿದ್ದರು.

ವಿಜ್ಞಾನ ವಸ್ತು ಪ್ರದರ್ಶನ
ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅವರು ಜಿಲ್ಲೆಯ ನಾನಾ ನರ್ಸಿಂಗ್‌ ಮತ್ತು ಪ್ಯಾರಾಮೆಡಿಕಲ್‌ ಕಾಲೇಜು ವಿದ್ಯಾರ್ಥಿಗಳು ತಯಾರಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ವೀಕ್ಷಿಸಿ, ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ