ಆ್ಯಪ್ನಗರ

ಸಾವಿಗಿಂತ ಮೊದಲು ಬದುಕು ಸಾರ್ಥಕ ಮಾಡಿಕೊಳ್ಳಿ

ಮನುಷ್ಯ ಸಮಾಜದಲ್ಲಿ ವ್ಯವಹಾರಿಕ ಬದುಕಿಗೆ ಹೆಚ್ಚು ಒತ್ತು ನೀಡುತ್ತಿದ್ದರಿಂದ ಜನರ ಮಧ್ಯೆ ಕಂದಕ ಸೃಷ್ಟಿಯಾಗುತ್ತಿರುವುದು ನೋವಿನ ಸಂಗತಿ ಎಂದು ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿ ವಿಷಾದಿಸಿದರು.

Vijaya Karnataka 28 Apr 2019, 5:00 am
ಚಿತ್ರದುರ್ಗ : ಮನುಷ್ಯ ಸಮಾಜದಲ್ಲಿ ವ್ಯವಹಾರಿಕ ಬದುಕಿಗೆ ಹೆಚ್ಚು ಒತ್ತು ನೀಡುತ್ತಿದ್ದರಿಂದ ಜನರ ಮಧ್ಯೆ ಕಂದಕ ಸೃಷ್ಟಿಯಾಗುತ್ತಿರುವುದು ನೋವಿನ ಸಂಗತಿ ಎಂದು ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿ ವಿಷಾದಿಸಿದರು.
Vijaya Karnataka Web make a living before death
ಸಾವಿಗಿಂತ ಮೊದಲು ಬದುಕು ಸಾರ್ಥಕ ಮಾಡಿಕೊಳ್ಳಿ


ತಾಲೂಕಿನ ಅನ್ನೇಹಾಳ್‌ ಗ್ರಾಮದ ಕರಿಯಮ್ಮ ದೇವಸ್ಥಾನ ಆವರಣದಲ್ಲಿ ಶನಿವಾರ ಮಹರ್ಷಿ ವಾಲ್ಮೀಕಿ ಕಂಚಿನ ಪುತ್ಥಳಿ ಅನಾವರಣ ಮತ್ತು ಕರಿಯಮ್ಮ ದೇವಿ ಜಾತ್ರೆ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾವಿಗಿಂತ ಮೊದಲು ಬದುಕು ಸಾರ್ಥಕ ಮಾಡಿಕೊಳ್ಳದಿದ್ದರೆ ಬದುಕಿದ್ದು ವ್ಯರ್ಥ ಎಂಬುದನ್ನು ಅರಿಯಬೇಕು. ಬೇಟೆಯಾಡಿ ಜೀವನ ಸಾಗಿಸುತ್ತಿದ್ದ ಗುರುವಿನ ತತ್ವದಿಂದ ಬದಲಾವಣೆಯಾದ ಮಹಾನ್‌ ವ್ಯಕ್ತಿ ವಾಲ್ಮೀಕಿ. ಜೀವನ ಎಂಬುದು ಗಾಳಿಗೆ ಇಟ್ಟ ದೀಪ ಎಂದು ಅರಿತುಕೊಳ್ಳಬೇಕು. ದೇಹದೊಳಗಿನ ದೀಪ ಎಂದು ನಂದಿ ಹೋಗುತ್ತದೆ ಎಂದು ತಿಳಿಯಲ್ಲ. ಅದಕ್ಕಾಗಿ ಎಲ್ಲರೂ ಒಗ್ಗಟ್ಟಾಗಿರಿ. ಭಗವಂತ ಮಳೆ ನೀಡಿಲ್ಲ ಅದಕ್ಕಾಗಿ ಮೊದಲು ಭಗವಂತನ ಪ್ರಾರ್ಥನೆ ಮಾಡಿ. ಸಾವಿರಾರು ಎಕರೆ ತೋಟಗಳು ಒಣಗುತ್ತಿದ್ದು ರೈತರ ಬದುಕು ತುಂಬಾ ಕಷ್ಟವಾಗಿದೆ. ಮಳೆ ಬರುವಿಕೆಗಾಗಿ ನಾನು ಸಹ ಬೇಡಿಕೊಳ್ಳುವೆ ಎಂದರು.

ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಮಾತನಾಡಿ, ವಾಲ್ಮೀಕಿ ಒಂದು ಜನಾಂಗಕ್ಕೆ ಸಿಮೀತರಲ್ಲ. ಅವರು ಬರೆದಿರುವ ವಾಲ್ಮೀಕಿ ರಾಮಾಯಣದಲ್ಲಿ ನಿತ್ಯ ಎದುರಿಸುವ ಸಮಸ್ಯೆಗಳಿಗೆ ಅಂದೆ ಪರಿಹಾರ ಬರೆದಿಟ್ಟುರುವ ಮಹಾನ್‌ ನಾಯಕ ವಾಲ್ಮೀಕಿ. ನಾಯಕ ಜನಾಂಗದವರು ಕೆರೆ ಕಟ್ಟೆ, ಕೋಟೆಗಳನ್ನು ಕಟ್ಟಿ ಎಲ್ಲ ಸಮಾಜದವರನ್ನು ರಕ್ಷ ಣೆ ಮಾಡಿದ್ದಾರೆ ಎಂದರು.

ತಾಲೂಕು ನಾಯಕ ಸಮಾಜದ ಅಧ್ಯಕ್ಷ ಬಿ.ಕಾಂತರಾಜ್‌ ಮಾತನಾಡಿ, ಸಮಾಜದ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ತಂದೆ ತಾಯಿಗಳು ಶ್ರಮಿಸಬೇಕು. ಸಮಾಜ ಶೈಕ್ಷ ಣಿಕ, ಆರ್ಥಿಕ, ಸಾಮಾಜಿಕವಾಗಿ ಬಲಿಷ್ಠವಾಗಬೇಕು. ಆದಿಕವಿ ಮಹರ್ಷಿ ವಾಲ್ಮೀಕಿ ಅವರು ಸಮಾಜದ ಆಸ್ತಿಯಾಗಿದ್ದಾರೆ ಎಂದರು.

ವಾಲ್ಮೀಕಿ ಮಹಾಸಭಾದ ವೀರೇಂದ್ರಸಿಂಹ ಉಪನ್ಯಾಸ ನೀಡಿದರು. ಮಾಚಿದೇವ ಮಹಾ ಸಂಸ್ಥಾನದ ಗುರುಪೀಠದ ಮಡಿವಾಳ ಮಾಚಿದೇವ ಮಹಾಪ್ರಭು ಸ್ವಾಮೀಜಿ, ಚಿತ್ರದುರ್ಗ ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ಎಚ್‌.ಜೆ. ಕೃಷ್ಣಮೂರ್ತಿ, ಗ್ರಾಪಂ ಸದಸ್ಯರಾದ ಲತಾ ಲೋಕೇಶ್‌, ಜಿ.ಪಿ.ಮಂಜುನಾಥ್‌, ಜಿ.ಪ್ರಶಾಂತ, ತಾಪಂ ಸದಸ್ಯೆ ಪ್ರತಿಭಾ, ಗ್ರಾಪಂ ಅಧ್ಯಕ್ಷೆ ಚಂದ್ರಕಲಾ ವರದರಾಜ್‌, ರಂಗಣ್ಣ, ಕರಿಯಣ್ಣ ಮತ್ತಿತರರಿದ್ದರು.

=====

ಟ್ಯಾಂಕರ್‌ಗೆ ನೀಡುವ ವೆಚ್ಚ ಹೆಚ್ಚಿಸಿ

ಇಂದು ಅಧಿಕಾರಿಗಳು ಜನರಿಗೆ ನೀರೊದಗಿಸುವ ಕೆಲಸ ಮಾಡಬೇಕಾಗಿದೆ. ಮಂತ್ರಿಗಳು ವಿಡಿಯೋ ಕಾನ್ಫರೆನ್ಸ್‌ ಮಾಡಿ ಅಧಿಕಾರಿಗಳ ಜತೆ ಮಾತನಾಡಿದರೆ ಸಾಲದು. ಜನರಿಗೆ ಅಧಿಕಾರಿಗಳು ಮೊದಲು ನೀರು ಕೊಡಬೇಕು. ಡಿಸಿ, ಸಿಇಒ ಹೆಚ್ಚು ಶ್ರಮವಹಿಸಿ ನೀರು ನೀಡಬೇಕು. ಟ್ಯಾಂಕರ್‌ ನೀರಿಗೆ ನೀಡುತ್ತಿರುವ ಹಣ ಸಾಲದು, ಹಳೆಯ ಹಣ ಪಾವತಿಸಿದರೆ ಟ್ಯಾಂಕರ್‌ ಮಾಲೀಕರು ಹೊಸದಾಗಿ ನೀರು ಪೂರೈಸಲು ಮುಂದೆ ಬರುತ್ತಾರೆ. ಟ್ಯಾಂಕರ್‌ಗೆ ನೀಡುತ್ತಿರುವ ವೆಚ್ಚ ಹೆಚ್ಚಿಸಬೇಕು ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ