ಆ್ಯಪ್ನಗರ

ಬಿಸಿಯೂಟದಲ್ಲಿ ಸತ್ತ ಹಲ್ಲಿ? ಚಿತ್ರದುರ್ಗದ ಚನ್ನಬಸಯ್ಯನ ಹಟ್ಟಿಯ 65ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

ಬಿಸಿಯೂಟ ತಿಂದು ಚಿತ್ರದುರ್ಗ ಜಿಲ್ಲೆಯ ಸರಕಾರಿ ಶಾಲೆಯೊಂದರ 65ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದಾರೆ. ಮಕ್ಕಳನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಹಾರದಲ್ಲಿ ಸತ್ತ ಹಲ್ಲಿ ಬಿದ್ದಿತ್ತು ಎಂದೂ ವರದಿಯಾಗಿದೆ.

TNN & Agencies 6 Nov 2019, 2:58 pm
ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನ ಚನ್ನಬಸಯ್ಯನ ಹಟ್ಟಿ ಗ್ರಾಮದ ಸರಕಾರಿ ಶಾಲೆಯ 65ಕ್ಕೂ ಹೆಚ್ಚು ಮಕ್ಕಳು ಬಿಸಿಯೂಟ ತಿಂದು ಅಸ್ವಸ್ಥರಾಗಿರುವ ಘಟನೆ ನಡೆದಿದೆ. ಅಸ್ವಸ್ಥ ಮಕ್ಕಳು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
Vijaya Karnataka Web many kids fell ill after midday meal in karnataka s chitradurga district
ಬಿಸಿಯೂಟದಲ್ಲಿ ಸತ್ತ ಹಲ್ಲಿ? ಚಿತ್ರದುರ್ಗದ ಚನ್ನಬಸಯ್ಯನ ಹಟ್ಟಿಯ 65ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ


ಮಂಡ್ಯದಲ್ಲಿ ಹಲ್ಲಿ ಬಿದ್ದ ಆಹಾರ ಸೇವಿಸಿ 10 ಪುಟಾಣಿ ಮಕ್ಕಳು ಅಸ್ವಸ್ಥ

ಮಂಗಳವಾರ ಮಧ್ಯಾಹ್ನ 125ಕ್ಕೂ ಅಧಿಕ ಮಕ್ಕಳಿಗೆ ಚನ್ನಬಸಯ್ಯನ ಹಟ್ಟಿ ಗ್ರಾಮದ ಸರಕಾರಿ ಶಾಲೆಯಲ್ಲಿ ಊಟ ಬಡಿಸಲಾಗಿತ್ತು. ಊಟ ಮಾಡಿದ ಮಕ್ಕಳು ಹೊಟ್ಟೆನೋವು ಹಾಗೂ ವಾಂತಿಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಅಲ್ಲದೆ, ತನಗೆ ನೀಡಿದ ಆಹಾರದಲ್ಲಿ ಸತ್ತ ಹಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ನಾನು ದೂರು ನೀಡಿದ್ದೆ ಎಂದೂ ವಿದ್ಯಾರ್ಥಿಯೊಬ್ಬರು ಹೇಳಿಕೊಂಡಿದ್ದಾರೆ.


ಐಸ್‌ಕ್ರೀಂ ತಿಂದ 6 ಮಕ್ಕಳು ಅಸ್ವಸ್ಥ

ನಂತರ ಆಹಾರದ ಮಾದರಿಯನ್ನು ಲ್ಯಾಬ್‌ಗೆ ಕಳಿಸಲಾಗಿದೆ. ಇನ್ನೊಂದೆಡೆ, ಜುಲೈ 17ರಂದು ಸಹ ಇದೇ ಶಾಲೆಯಲ್ಲಿ ವಿಷಾಹಾರ ಸೇವನೆ ಘಟನೆ ವರದಿಯಾಗಿತ್ತು ಎಂದೂ ತಿಳಿದುಬಂದಿದೆ.

ಖಾಸಗಿ ಕನ್ನಡ ಶಾಲೆಗಳಿಗೂ ಬಿಸಿಯೂಟ: ಎಸ್ . ಸುರೇಶ್ ಕುಮಾರ್

ಇನ್ನು, ಶಾಲಾ ಆಡಳಿತ ಮಂಡಳಿ ತಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕು ಎಂದೂ ಮಕ್ಕಳ ಪೋಷಕರು ಆಗ್ರಹಿಸಿದ್ದಾರೆ. ನಾವು ಬಡ ಜನರು. ಆಹಾರವನ್ನು ತಯಾರಿಸುವ ಶಾಲ ಆಡಳಿತ ಹಾಗೂ ಅಡುಗೆಯವರು ಈ ಘಟನೆಯ ಹೊಣೆ ಹೊರಬೇಕು. ಸದ್ಯ,, ದೇವರ ದಯೆಯಿಂದ ಮಕ್ಕಳು ಆರೋಗ್ಯವಾಗಿರಬಹುದು. ಆದರೆ, ಏನಾದರೂ ತಪ್ಪಾದರೆ ಯಾರು ಹೊಣೆ? ಈ ಶಾಲೆಯಲ್ಲಿ 200ಕ್ಕೂ ಅಧಿಕ ಮಕ್ಕಳು ಓದುತ್ತಿದ್ದಾರೆ ಎಂದೂ ಈ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಯೊಬ್ಬರ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.

ಶಾಲಾ ಅಡುಗೆ ಸಿಬ್ಬಂದಿಗೂ ಪ್ರಧಾನಮಂತ್ರಿ ಪಿಂಚಣಿ ಯೋಜನೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ