ಆ್ಯಪ್ನಗರ

ರಾತ್ರಿ ಪೊಲೀಸ್‌ ಬೀಟ್‌ ವ್ಯವಸ್ಥೆ ಆಗಲಿ

ರಾಮಗಿರಿ ಪೊಲೀಸ್‌ ಉಪಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕೊಲೆ, ಸುಲಿಗೆ, ಕಳ್ಳತನ, ರೌಡಿಸಂ ಹೆಚ್ಚಾಗುತ್ತಿದ್ದು, ರಾಮಗಿರಿ ಹಾಗೂ ಸುತ್ತಲಿನ ಹಳ್ಳಿಗಳ ಜನ ಭಯಭೀತರಾಗಿದ್ದಾರೆ. ಹಾಗಾಗಿ ಪೊಲೀಸ್‌ ವರಿಷ್ಠಾಧಿಕಾರಿಗಳು ಕೂಡಲೇ ಈ ಉಪಠಾಣೆಗೆ ಎಎಸ್‌ಐ ಹುದ್ದೆ, ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ಸಾರ್ವಜನಿಕರ ರಕ್ಷ ಣೆಗೆ ಮುಂದಾಗಬೇಕು ಎಂದು ತಾಪಂ ಮಾಜಿ ಸದಸ್ಯ ರಾಮಗಿರಿ ರಾಮಣ್ಣ ಒತ್ತಾಯಿಸಿದ್ದಾರೆ.

Vijaya Karnataka 3 Dec 2018, 5:00 am
ಹೊಳಲ್ಕೆರೆ : ರಾಮಗಿರಿ ಪೊಲೀಸ್‌ ಉಪಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕೊಲೆ, ಸುಲಿಗೆ, ಕಳ್ಳತನ, ರೌಡಿಸಂ ಹೆಚ್ಚಾಗುತ್ತಿದ್ದು, ರಾಮಗಿರಿ ಹಾಗೂ ಸುತ್ತಲಿನ ಹಳ್ಳಿಗಳ ಜನ ಭಯಭೀತರಾಗಿದ್ದಾರೆ. ಹಾಗಾಗಿ ಪೊಲೀಸ್‌ ವರಿಷ್ಠಾಧಿಕಾರಿಗಳು ಕೂಡಲೇ ಈ ಉಪಠಾಣೆಗೆ ಎಎಸ್‌ಐ ಹುದ್ದೆ, ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ಸಾರ್ವಜನಿಕರ ರಕ್ಷ ಣೆಗೆ ಮುಂದಾಗಬೇಕು ಎಂದು ತಾಪಂ ಮಾಜಿ ಸದಸ್ಯ ರಾಮಗಿರಿ ರಾಮಣ್ಣ ಒತ್ತಾಯಿಸಿದ್ದಾರೆ.
Vijaya Karnataka Web may be night police beat system
ರಾತ್ರಿ ಪೊಲೀಸ್‌ ಬೀಟ್‌ ವ್ಯವಸ್ಥೆ ಆಗಲಿ


ತಾಲೂಕಿನ ರಾಮಗಿರಿ ಗ್ರಾಮದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಐದಾರು ತಿಂಗಳಲ್ಲಿ ಮೂರು ಬಾರಿ ಸರಣಿ ಕಳ್ಳತನ ನಡೆದಿವೆ. ಅದಕ್ಕೂ ಮೊದಲು ದನ ಕರುಗಳ ಕಳ್ಳತನ ನಡೆದಿತ್ತು. ನ.30ರಂದು ವಿದ್ಯುತ್‌ ಮರು ಪ್ರಸರಣ ಕೇಂದ್ರದ ಬಳಿಯ ಒಕ್ಕಲುಕಣದಲ್ಲಿ ಬಿಲಿಗೆ ಹಾಕಿದ್ದ ಅಡಿಕೆಯಲ್ಲಿ ಎರಡು ಚೀಲ ಕಳ್ಳತನ ಮಾಡಲಾಗಿದೆ ಎಂದರು.

ನ.28ರಂದು ಕೊಲೆ: ಗ್ರಾಮದ ಬಸ್‌ ನಿಲ್ದಾಣದ ಮನೆಯಲ್ಲಿ ನ.28ರಂದು ರಾತ್ರಿ 9.30ರ ಸುಮಾರಿಗೆ ಜ್ಯುವೆಲರಿ ವರ್ತಕರ ಹತ್ಯೆಯಾಗಿದೆ. ಇದರಿಂದ ಗ್ರಾಮದಲ್ಲಿ ಆತಂಕದ ವಾತಾವರಣವಿದ್ದು, ಮಹಿಳೆಯರು, ಮಕ್ಕಳು ವ್ಯಾಪಾರಸ್ಥರು ಆತಂಕಗೊಂಡಿದ್ದಾರೆ.

ಬ್ಲೇಡ್‌ನಿಂದ ಹಲ್ಲೆ: ಇನ್ನು 18 ವರ್ಷ ತುಂಬದ ಚೋಟಾ ಹುಡುಗರು ಗ್ರಾಮದ ಬಸ್‌ ನಿಲ್ದಾಣದಲ್ಲಿ ಬ್ಲೇಡ್‌ ಹಿಡಿದು ತಿರುಗಾಡುತಿದ್ದಾರೆ. ಶುಕ್ರವಾರ ಮಧ್ಯಾಹ್ನ ಒಬ್ಬ ಬಾಲಕನಿಗೆ ಇನ್ನೊಬ್ಬ ಹುಡುಗ ಬ್ಲೇಡ್‌ನಿಂದ ಹತ್ತಾರು ಬಾರಿ ಕೊಯ್ದಿದ್ದಾನೆ. ಗಾಯಗೊಂಡ ಬಾಲಕ ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಇದರಿಂದ ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆ.

ಪೊಲೀಸ್‌ ಬೀಟ್‌ ವ್ಯವಸ್ಥೆ ಮಾಡಿ: ರಾಮಗಿರಿ ದೊಡ್ಡ ಹೋಬಳಿ ಕೇಂದ್ರವಾಗಿದ್ದು, ಶಾಲಾ, ಕಾಲೇಜುಗಳು, ಸರಕಾರಿ ಕಚೇರಿಗಳು, ಆಸ್ಪತ್ರೆ, ರೈಲ್ವೆ ನಿಲ್ದಾಣ, ನಾಲ್ಕು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಸರ್ಕಲ್‌ ಇದಾಗಿದ್ದು, ಸದಾ ಜನ ಸಂದಣೆ ಹೆಚ್ಚಿರುತ್ತದೆ. ಈಗಿರುವ ಸಿಬ್ಬಂದಿಗಳಲ್ಲಿ ಹಳ್ಳಿಗಳ ಕಡೆ ಗಲಾಟೆಗಳು, ಕಾರ್ಯಕ್ರಮಗಳು ನಡೆದಲ್ಲಿ ಅಲ್ಲಿಗೆ ತೆರಳುತ್ತಾರೆ. ಆಗ ಕೇಂದ್ರ ಸ್ಥಾನದಲ್ಲಿ ಯಾರು ಇಲ್ಲದಂತಾಗುತ್ತದೆ. ಹಾಗಾಗಿ ಎಎಸ್‌ಐ ಹಾಗೂ ಹೆಚ್ಚುವರಿ ಪೊಲೀಸ್‌ ಸಿಬ್ಬಂದಿ ನಿಯೋಜಿಸಬೇಕು. ಅಲ್ಲದೆ ರಾತ್ರಿ ಪಾಳಿಯಲ್ಲಿ ಬೀಟ್‌ ವ್ಯವಸ್ಥೆ ಕೂಡ ಮಾಡಬೇಕು ಎಂದು ಒತ್ತಾಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ