ಆ್ಯಪ್ನಗರ

ಚಿತ್ರದುರ್ಗ: ಅಲೆಮಾರಿಗಳಿಗೆ 3 ಸಾವಿರ ಮನೆ, ಸಚಿವ ಸೋಮಣ್ಣ ಭರವಸೆ

ಚಿತ್ರದುರ್ಗ ಜಿಲ್ಲೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ವಾಸಿಸುತ್ತಿರುವ ಅಲೆಮಾರಿಗಳಿಗೆ ತಾಲೂಕಿಗೆ 500 ಮನೆಗಳಂತೆ ಆರು ತಾಲೂಕುಗಳಿಂದ ಮೂರು ಸಾವಿರ ಮನೆ ಮಂಜೂರು ಮಾಡಲಾಗುವುದು ಎಂದು ಸಚಿವ ಸೋಮಣ್ಣ ಭರವಸೆ ನೀಡಿದ್ದಾರೆ.

Vijaya Karnataka Web 27 Jun 2020, 2:02 pm
ಚಿತ್ರದುರ್ಗ: ಜಿಲ್ಲೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ವಾಸಿಸುತ್ತಿರುವ ಅಲೆಮಾರಿಗಳಿಗೆ ಸೂರು ಕಲ್ಪಿಸಬೇಕು ಎನ್ನುವ ಶಾಸಕರ ಮನವಿಗೆ ಸ್ಪಂದಿಸಿರುವ ವಸತಿ ಸಚಿವ ಸೋಮಣ್ಣ ಮೂರು ಸಾವಿರ ಮಂಜೂರು ಮಾಡುವುದಾಗಿ ಭರವಸೆ ನೀಡಿದರು.
Vijaya Karnataka Web somanna


ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿವಿಧ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆಯಲ್ಲಿ ಭಾಗವಹಿಸಿದ್ದ ಶಾಸಕರು ವಸತಿ ಸೌಲಭ್ಯ ವಂಚಿತರಾಗಿರುವ ಅಲೆಮಾರಿಗಳ ಸಮಸ್ಯೆ ಮೇಲೆ ಬೆಳಕು ಚೆಲ್ಲಿದರು. ಇದಕ್ಕೆ ಸ್ಪಂದಿಸಿದ ಸಚಿವರು ತಾಲೂಕಿಗೆ 500 ಮನೆಗಳಂತೆ ಆರು ತಾಲೂಕುಗಳಿಂದ ಮೂರು ಸಾವಿರ ಮನೆ ಮಂಜೂರು ಮಾಡಲಾಗುವುದು ಎಂದರು.

ಅನರ್ಹರಿಗೆ ವಸತಿ ಸೌಲಭ್ಯ ಪಡೆಯುವುದಕ್ಕೆ ತಡೆ ಹಾಕಬೇಕು. ಆಗ ಮಾತ್ರ ಅರ್ಹರಿಗೆ ವಸತಿ ಸೌಲಭ್ಯ ಸಿಗಲಿದೆ. ಪ್ರಧಾನಿ ಮೋದಿ ಆಶಯದಂತೆ 2022ರೊಳಗೆ ಸರ್ವರಿಗೂ ಸೂರು ಸಿಗಲಿದೆ. ಅನರ್ಹರಿಗೆ ವಸತಿ ಸೌಲಭ್ಯ ಸಿಗದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚರವಹಿಸಬೇಕು ಎಂದು ಹೇಳಿದರು.

ಕಾನೂನು ಕ್ರಮ ಜರುಗಿಸಿ:
ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಮಾತನಾಡಿ, ತಮ್ಮ ಕ್ಷೇತ್ರದ ಗ್ರಾಪಂ ಒಂದರ ಪಿಡಿಒ ಬೋಗಸ್‌ ವಸತಿ ಹೆಸರಲ್ಲಿನಾಲ್ಕು ಕೋಟಿ ರೂ. ವಂಚಿಸಿ, ಯಾವುದೇ ಹೆದರಿಕೆ ಇಲ್ಲದೇ ಓಡಾಡುತ್ತಿದ್ದಾರೆ. ಇವರಿಗೆ ಶಿಕ್ಷೆಯಾಗಬೇಕು. ಅದು ವಂಚನೆ ಮಾಡುವವರಿಗೆ ಎಚ್ಚರಿಕೆ ಗಂಟೆಯಾಗಬೇಕು. ಮೊದಲು ಎಫ್‌ಐಆರ್‌ ದಾಖಲಿಸಿ ಎಂದು ಒತ್ತಾಯಿಸಿದರು.

ಹೊಳಲ್ಕೆರೆ ಪಟ್ಟಣದ ಬಳಿ 20 ಎಕರೆ ಜಾಗದಲ್ಲಿನಿವೇಶನಗಳ ಅಭಿವೃದ್ಧಿ ಹಾಗೂ ವಿವಿಧ ಯೋಜನೆಗಳಲ್ಲಿಮನೆ ನೀಡುವ ಬಗ್ಗೆ ಶಾಸಕ ಚಂದ್ರಪ್ಪ ಪ್ರಸ್ತಾಪಿಸಿದರು. ಭೂಮಿಯನ್ನು ನಮಗೆ ಹಸ್ತಾಂತರಿಸಿದಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡುವುದಾಗಿ ಸಚಿವರು ಭರವಸೆ ನೀಡಿದರು.

ಜಿಲ್ಲೆಗೆ ಹೆಚ್ಚು ಮನೆ ಮಂಜೂರು ಮಾಡುವಂತೆ ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು ಮನವಿ ಮಾಡಿದರು. ಸಭೆಯಲ್ಲಿಸಂಸದರು, ಜಿಪಂ ಅಧ್ಯಕ್ಷರು ಸೇರಿದಂತೆ ಎಲ್ಲ ಶಾಸಕರು ತಮ್ಮ ಕ್ಷೇತ್ರಗಳಲ್ಲಿಆಗಿರುವ ವಸತಿ ಯೋಜನೆಯ ಸಮಸ್ಯೆಗಳು, ಬೇಡಿಕೆ ಮಂಡಿಸಿದರು.

ಶಾಸಕರಾದ ಗೂಳಿಹಟ್ಟಿ ಡಿ.ಶೇಖರ್‌, ಟಿ.ರಘುಮೂರ್ತಿ, ಎಂಎಲ್ಸಿ ಜಯಮ್ಮ ಬಾಲರಾಜ್‌, ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ, ರಾಜೀವ್‌ ವಸತಿ ನಿಗಮದ ಮಹದೇವ್‌ ಪಸಾದ್‌ ಸೇರಿದಂತೆ ಅಧಿಕಾರಿಗಳು ಇದ್ದರು.

ವಸತಿಗೆ ಹತ್ತು ಸಾವಿರ ಕೋಟಿ
ರಾಜ್ಯದಲ್ಲಿ ಪ್ರಗತಿಯಲ್ಲಿರುವ ವಸತಿ ಯೋಜನೆಗಳನ್ನು ಪೂರ್ಣಗೊಳಿಸಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕೊರೊನಾ ಸಂಕಷ್ಟದ ಸಂದರ್ಭದಲ್ಲೂ ಕೂಡ 10,124 ಕೋಟಿ ರೂ. ಗಳನ್ನು ಬಿಡುಗಡೆ ಮಾಡಲು ಸಂಪುಟದಲ್ಲಿ ಒಪ್ಪಿಗೆ ನೀಡಿದ್ದಾರೆ. ವಸತಿ ಯೋಜನೆಗಳ ತ್ವರಿತ ಅನುಷ್ಟಾನಕ್ಕೆ ಇದು ಸಹಾಯಕವಾಗಿದೆ. ವಸತಿ ಇಲಾಖೆಯ ಇತಿಹಾಸದಲ್ಲೇ ಇಷ್ಟು ದೊಡ್ಡ ಮೊತ್ತ ಬಿಡುಗಡೆ ಆಗಿರಲಿಲ್ಲ ಎಂದು ಸಚಿವರು ಹೇಳಿದರು. ಇದೇ ವಿಚಾರ ಪ್ರಸ್ತಾಪಿಸಿ ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಸಿಎಂ ಹಾಗೂ ಸಚಿವರಿಗೆ ಅಭಿನಂದಿಸಿದರು.

1.20 ಲಕ್ಷ ನಿವೇಶನ ಹಂಚಿಕೆ
ರಾಜ್ಯದಲ್ಲಿ 5500 ಎಕರೆ ಭೂಮಿ ಬ್ಯಾಂಕ್‌ ಮಾಡಲಾಗಿದ್ದು, 1.20 ಲಕ್ಷ ನಿವೇಶನಗಳನ್ನು ಹಂಚುವ ಪ್ರಕ್ರಿಯೆ ಆರಂಭವಾಗಿದೆ. ಇದಕ್ಕಾಗಿ 800 ಕೋಟಿ ರೂ. ಹಣ ಬೇಕಾಗಿದ್ದು, 200 ಕೋಟಿ ರೂ. ನಮ್ಮ ಬಳಿ ಇದೆ. ಇನ್ನೂ 600 ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿರುವ 10 ಸಾವಿರ ಕೋಟಿ ರೂ.ಗಳಲ್ಲಿ ಬಳಸಿಕೊಳ್ಳಲಾಗುವುದು ಎಂದು ಸಚಿವರು ಸಭೆಗೆ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ