ಆ್ಯಪ್ನಗರ

ಹಣ ಗಳಿಕೆಯಿಂದ ನೆಮ್ಮದಿ ಸಿಗದು: ಸಾಣೇಹಳ್ಳಿ ಶ್ರೀಗಳು

ಸಮಾಜಮುಖಿ ಚಿಂತನೆಗಳತ್ತ ವ್ಯಕ್ತಿಗತ ಬದಲಾವಣೆಯಾದಾಗ ಸಮಾಜವು ಸುಧಾರಣೆಯಾಗುತ್ತದೆ ಎಂದು ಸಾಣೇಹಳ್ಳಿ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Vijaya Karnataka 12 Dec 2018, 5:00 am
ಹೊಸದುರ್ಗ : ಸಮಾಜಮುಖಿ ಚಿಂತನೆಗಳತ್ತ ವ್ಯಕ್ತಿಗತ ಬದಲಾವಣೆಯಾದಾಗ ಸಮಾಜವು ಸುಧಾರಣೆಯಾಗುತ್ತದೆ ಎಂದು ಸಾಣೇಹಳ್ಳಿ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
Vijaya Karnataka Web money can not be solved sanehalli srees
ಹಣ ಗಳಿಕೆಯಿಂದ ನೆಮ್ಮದಿ ಸಿಗದು: ಸಾಣೇಹಳ್ಳಿ ಶ್ರೀಗಳು


ಮುಂಬೈ ನಗರದಲ್ಲಿ ಥಾನೆ ಕಲಾಸೇವಾಕೇಂದ್ರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಇವತ್ತಿನ ಜನರು ನಾಲ್ಕು ತಲೆಮಾರುಗಳಿಗೆ ಸಾಕಾಗುವಷ್ಟು ಆಸ್ತಿ ಸಂಪಾದನೆ ಮಾಡಿರುತ್ತಾರೆ. ಎಷ್ಟೋ ಜನರಿಗೆ ಹಣದ ಮುಂದೆ ಸಾಹಿತ್ಯ, ಸಂಗೀತ, ಕಲೆ ಗೌಣವಾಗಿ ಬಿಟ್ಟಿರುತ್ತದೆ. ಮನುಷ್ಯನಿಗೆ ಹಣ ಇದ್ದರೇ ಸಾಲದು, ಜತೆಯಲ್ಲಿ ಬಂಧು ಬಳಗ, ಕುಟುಂಬ ಇರಬೇಕು. ನಾಲ್ಕು ಜನರ ವಿಶ್ವಾಸ ಗಳಿಸಿಕೊಳ್ಳಬೇಕು. ವಿಶ್ವಾಸ, ಪ್ರೀತಿ ಸಂಪಾದನೆ ಮಾಡಲಿಕ್ಕೆ ಸಾಹಿತ್ಯ, ಸಂಗೀತ, ಕಲೆಯ ಒಲವು ಬೇಕು. ಕೇವಲ ಹಣಗಳಿಕೆಯಿಂದ ನೆಮ್ಮದಿ ಸಿಗುವುದಿಲ್ಲ ಎಂದರು.

ಡಿಸೆಂಬರ್‌ 31ರಂದು ಶ್ರೀಮಠದಲ್ಲಿ 'ವರ್ಷದ ಹರ್ಷ' ಎನ್ನುವ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಸಂಜೆ 6ಗಂಟೆಗೆ ಪ್ರಾರಂಭವಾಗುವ ಕಾರ್ಯಕ್ರಮದಲ್ಲಿ ಕಲೆ, ಸಾಹಿತ್ಯ, ಸಂಗೀತ, ಮಕ್ಕಳ ನೃತ್ಯ, ಉಪನ್ಯಾಸ ಮತ್ತಿತರ ಚಟುವಟಿಕೆಗಳಿರುತ್ತವೆ. ನಂತರ ನಾಟಕ ಅಥವಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.

ಶ್ರೀನಿವಾಸ ಜಿ ಕಪ್ಪಣ್ಣ, ಭರತ್‌ಕುಮಾರ್‌, ರುದ್ರಣ್ಣ, ರಾಜಣ್ಣ ಮಾತನಾಡಿದರು. ವೇದಿಕೆಯ ಮೇಲೆ ಈ ಬಾರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕವಿ ಚಂದ್ರಶೇಖರ ತಾಳ್ಯ, ಕನ್ನಡ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ