ಆ್ಯಪ್ನಗರ

ಅಮೃತ ಮಹೋತ್ಸವ ನೆನಪಿಗೆ ನೂತನ ಕಟ್ಟಡ

ಬಿಸಿನೀರು ಮುದ್ದಪ್ಪ ಸರಕಾರಿ ಪ್ರೌಢಶಾಲೆಯ ಅಮೃತ ಮಹೋತ್ಸವ ನೆನಪಿಗಾಗಿ ಎರಡು ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲಾಗುವುದು. ಈಗಾಗಲೇ ಅನುದಾನವೂ ಬಿಡುಗಡೆ ಮಾಡಿಸಲಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

Vijaya Karnataka 17 Jun 2019, 5:00 am
ಚಳ್ಳಕೆರೆ : ಬಿಸಿನೀರು ಮುದ್ದಪ್ಪ ಸರಕಾರಿ ಪ್ರೌಢಶಾಲೆಯ ಅಮೃತ ಮಹೋತ್ಸವ ನೆನಪಿಗಾಗಿ ಎರಡು ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲಾಗುವುದು. ಈಗಾಗಲೇ ಅನುದಾನವೂ ಬಿಡುಗಡೆ ಮಾಡಿಸಲಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
Vijaya Karnataka Web new building commemorating the amrita jubilee
ಅಮೃತ ಮಹೋತ್ಸವ ನೆನಪಿಗೆ ನೂತನ ಕಟ್ಟಡ


ನಗರದ ಬಿಸಿನೀರು ಮುದ್ದಪ್ಪ ಪ್ರೌಢಶಾಲೆ ಆವರಣದಲ್ಲಿ ಭಾನುವಾರ ಹಳೇ ವಿದ್ಯಾರ್ಥಿಗಳಿಂದ ನೂತನ ಗಣಪತಿ ವಿಗ್ರಹ ಪ್ರತಿಷ್ಠಾಪನೆ, ಉದ್ಘಾಟನೆ ಮತ್ತು ಶಾಲೆಯ ಅಮೃತ ಮಹೋತ್ಸವದ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು.

ಕಳೆದ ವರ್ಷ ಈ ಶಾಲೆಯ ಮುಖ್ಯಶಿಕ್ಷ ಕರು ಅಮೃತ ಮಹೋತ್ಸವದ ಹೊಸ್ತಿಲಲ್ಲಿದೆ ಎಂದು ನೆನಪಿಸಿದ್ದರಿಂದ ಹೊಸ ಕಟ್ಟಡ ನಿರ್ಮಿಸಬೇಕೆಂಬ ಸಂಕಲ್ಪ ಮಾಡಿ, ಶಾಸಕರ ಅನುದಾನ ಒಂದು ಕೋಟಿ ಹಾಗೂ ಡಿಎಂಎಫ್‌ ಯೋಜನೆಯಡಿ ಒಂದು ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿದ್ದು, ಈಗಾಗಲೇ ಕಟ್ಟಡದ ನೀಲನಕ್ಷೆ ತಯರಿಸಲಾಗಿದೆ. ಕೆಲ ತಿಂಗಳಲ್ಲಿ ನೂತನ ಕಟ್ಟಡದಲ್ಲೇ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಸಬಹುದು ಎಂದು ಭರವಸೆ ನೀಡಿದರು.

ಇದು ಸರಕಾರಿ ಪ್ರೌಢಶಾಲೆಯಾಗಿದ್ದರೂ ಚಳ್ಳಕೆರೆಗೆ ಪ್ರತಿಷ್ಟಿತ ಶಾಲೆಯಾಗಿ ಗುರುತಿಸಿಕೊಂಡಿದೆ. ಅಮೃತ ಮಹೋತ್ಸವದ ನೆನಪಿನಲ್ಲಿ ಸಾವಿರಾರು ಹಳೆಯ ವಿದ್ಯಾರ್ಥಿಗಳು, ತಮ್ಮ ವಿದ್ಯಾರ್ಥಿ ಜೀವನದ ನೆನಪು ಮಾಡಿಕೊಳ್ಳಲು ಅಮೃತ ಗಳಿಗೆಯಾಗುವುದು. ಆದ್ದರಿಂದ ಯಾವುದೇ ಗೊಂದಲಗಳಿಲ್ಲದಂತೆ ಸಮಿತಿ ರಚಿಸುವಂತೆ ಸಲಹೆ ನೀಡಿದರು.

ಪ್ರಾಥಮಿಕ ಮತ್ತು ಪ್ರೌಢಶಾಲೆ ಹಂತದಲ್ಲಿ ಓದಿದ ಸ್ನೇಹಿತರ ನಡುವೆ ಎಂದೆಂದಿಗೂ ಮರೆಯದ ಗಾಡವಾದ ಪ್ರೀತಿ, ವಿಶ್ವಾಸದ ಜತೆಗೆ ಶಾಲೆ ಬಗ್ಗೆ ವಿಶೇಷವಾದ ಮಮಕರವಿರುತ್ತದೆ. ಹೀಗಾಗಿ ನಾನು ಓದಿದ ಕಡುಬನಕಟ್ಟೆಯ ಪ್ರಾಥಮಿಕ ಶಾಲೆ ಶತಮನೋತ್ಸವ ಆಚರಣೆ ನಡೆಸಬೇಕೆಂಬ ಸಂಕಲ್ಪ ಮಾಡಿದ್ದೇವೆ ಎಂದು ತಿಳಿಸಿದರು.

ಶಾಲೆ ಮುಖ್ಯಶಿಕ್ಷ ಕ ಈ.ಸಂಪತ್‌ಕುಮಾರ್‌ ಮಾತನಾಡಿ, ಎಲ್ಲ ಹಳೆ ವಿದ್ಯಾರ್ಥಿಗಳ ಸಹಕಾರದೊಂದಿಗೆ ಅಮೃತ ಮಹೋತ್ಸವ ನಡೆಸುವ ಕುರಿತು ಸಮಿತಿ ರಚಿಸಲಾಗುವುದು. ಇದಕ್ಕಾಗಿ ಸಲಹಾ ಪೆಟ್ಟಿಗೆಯನ್ನು ಮಾಡಿದ್ದು, ಹಳೆಯ ವಿದ್ಯಾರ್ಥಿಗಳ ನನೆಪುಗಳು ಮತ್ತು ಕಾರ್ಯಕ್ರಮದ ಕುರಿತು ಮಾಹಿತಿ ಹಂಚಿಕೊಳ್ಳಬಹುದು ಎಂದು ತಿಳಿಸಿದರು.

ನಗರಸಭೆ ಸದಸ್ಯರಾದ ಕೆ.ಸಿ.ನಾಗರಾಜ್‌, ರಮೇಶ್‌, ವೀರಭದ್ರಯ್ಯ, ವಿರುಪಾಕ್ಷ , ತಾಪಂ ಸದಸ್ಯ ವೀರೇಶ್‌, ಪುರಸಭೆ ಮಾಜಿ ಸದಸ್ಯ ಪ್ರಸನ್ನಕುಮಾರ್‌, ತಾಪಂ ಮಾಜಿ ಸದಸ್ಯ ಶ್ರೀನಿವಾಸ್‌, ನಾಟಕ ಅಕಾಡಮಿ ಮಾಜಿ ಸದಸ್ಯ ತಿಪ್ಪೇಸ್ವಾಮಿ, ಶಾಲೆಯ ಹಿರಿಯ ನಿವೃತ್ತ ಶಿಕ್ಷ ಕರಾದ ಅನಂತಪ್ರಸಾದ್‌, ವಿಶ್ವನಾಥಯ್ಯ, ಮಲ್ಲಿಕಾರ್ಜುನಯ್ಯ, ಹಳೆ ವಿದ್ಯಾರ್ಥಿ ವೃತ್ತ ಪೊಲೀಸ್‌ ಅಧಿಕಾರಿ ಸೈಯದ್‌ ಇಸಾಕ್‌, ಯಾತೀಶ್‌, ಸುರೇಶ್‌ ಆಚಾರ್ಯ, ನರಸಿಂಹಯ್ಯ, ಬಸಣ್ಣ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ