ಆ್ಯಪ್ನಗರ

ಮೇದಾರ ಗುರುಪೀಠಕ್ಕೆ ನೂತನ ಸ್ವಾಮೀಜಿ ಆಯ್ಕೆ

ಮೇದಾರ ಗುರುಪೀಠಕ್ಕೆ ನೂತನ ಸ್ವಾಮೀಜಿಯನ್ನಾಗಿ ನೇಮಿಸಲು ಬಿ.ಮಂಜುನಾಥರನ್ನು ಮೇದಾರ ಸಮುದಾಯ ಆಯ್ಕೆ ಮಾಡಿ ಘೋಷಿಸಿದೆ. ಈ ಸನ್ನಿವೇಶಕ್ಕೆ ನಾನಾ ಮಠಾಧೀಶರು ಸಾಕ್ಷಿಯಾದರು.

Vijaya Karnataka 11 Dec 2018, 5:00 am
Vijaya Karnataka Web new swamiji elected to major gurupat
ಮೇದಾರ ಗುರುಪೀಠಕ್ಕೆ ನೂತನ ಸ್ವಾಮೀಜಿ ಆಯ್ಕೆ
ಚಿತ್ರದುರ್ಗ: ಮೇದಾರ ಗುರುಪೀಠಕ್ಕೆ ನೂತನ ಸ್ವಾಮೀಜಿಯನ್ನಾಗಿ ನೇಮಿಸಲು ಬಿ.ಮಂಜುನಾಥರನ್ನು ಮೇದಾರ ಸಮುದಾಯ ಆಯ್ಕೆ ಮಾಡಿ ಘೋಷಿಸಿದೆ. ಈ ಸನ್ನಿವೇಶಕ್ಕೆ ನಾನಾ ಮಠಾಧೀಶರು ಸಾಕ್ಷಿಯಾದರು.

ಶ್ರೀಬಸವಪ್ರಭು ಕೇತೇಶ್ವರ ಸ್ವಾಮೀಜಿಯವರ ಶಿಷ್ಯ ಮಂಜುನಾಥÜರನ್ನೇ ಹೊಸ ಗುರುವನ್ನಾಗಿ ಆಯ್ಕೆ ಮಾಡಿದ್ದಕ್ಕೆ ವೇದಿಕೆ ಮೇಲಿದ್ದ ಮಠಾಧೀಶರು ಸಮ್ಮತಿ ಸೂಚಿಸಿದರು. ನಾವೆಲ್ಲರೂ ಮುರುಘಾಮಠದ ಪರಂಪರೆಯಿಂದ ಬಂದವರು. ಆ ಪರಂಪರೆ ಉಳಿಯಬೇಕು. ಡಾ.ಶಿವಮೂರ್ತಿ ಮುರುಘಾ ಶರಣರಿಂದಲೇ ನೂತನ ಸ್ವಾಮೀಜಿಗೆ ಧೀಕ್ಷೆ ಕೊಡಿಸಬೇಕು ಎಂದರು.

ನಗರದ ಕನಕ ವೃತ್ತದ ಕೇತೇಶ್ವರ ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಕೇತೇಶ್ವರ ಜಯಂತಿ, ಮೇದಾರ ಸಂಸ್ಕೃತಿ ವೈಭವ ಹಾಗೂ ಹನುಮಂತಯ್ಯ ಕೇತೇಶ್ವರ ಸ್ವಾಮೀಜಿಯ 30ನೇ ಪುಣ್ಯ ಸ್ಮರಣೋತ್ಸವದಲ್ಲಿ ಈ ಆಯ್ಕೆ ಘೋಸಿಸಲಾಯಿತು.

ಶ್ರೀಗುರು ಮೇದಾರ ಕೇತೇಶ್ವರ ಟ್ರಸ್ಟ್‌ನ ಅಧ್ಯಕ್ಷ ಸಿ.ಪಿ.ಪಾಟೀಲ್‌ ಮಾತನಾಡಿ, ರಾಜ್ಯದಲ್ಲಿ ಸುಮಾರು ಐದು ಲಕ್ಷ ಜನಸಂಖ್ಯೆ ಇರುವ ನಮ್ಮ ಸಮುದಾಯಕ್ಕೆ ಕುಲ ಗುರುಗಳನ್ನಾಗಿ ಬಿ.ಮಂಜುನಾಥ ಅವರನ್ನು ನೇಮಕ ಮಾಡಲಾಗಿದೆ. ಇದಕ್ಕೆ ನಿಮ್ಮೆಲ್ಲರ ಒಪ್ಪಿಗೆ ಇದೆಯಾ ಎಂದು ಸಮುದಾಯದವರಿಗೆ ಕೇಳಿದ್ದಕ್ಕೆ ಎಲ್ಲರೂ ಕೈ ಎತ್ತುವ ಮೂಲಕ ಒಪ್ಪಿಗೆ ಸೂಚಿಸಿದರು.

ಬಳಿಕ ಬಿಳಿ ವಸ್ತ್ರ ಧರಿಸಿದ್ದ ಮಂಜುನಾಥರಿಗೆ ನಾನಾ ಮಠಾಧೀಶರು ಆಶೀರ್ವದಿಸಿ ಕಾವಿ ವಸ್ತ್ರ ನೀಡಿದಾಗ, ಕಾವಿ ಧರಿಸಿಕೊಂಡು ಬಂದು ಆಸೀನರಾದರು. ನೂತನ ಶ್ರೀಗೆ ಅಭಿನವ ಬಸವಪ್ರಭು ಕೇತೇಶ್ವರ ಸ್ವಾಮೀಜಿ ಎಂದು ನಾಮಕರಣ ಮಾಡಿ ಕುಂಚಿಟಿಗ ಗುರುಪೀಠದ ಶಾಂತವೀರ ಸ್ವಾಮೀಜಿ ಘೋಷಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ