ಆ್ಯಪ್ನಗರ

ಚಿತ್ರದುರ್ಗ: ಬೆಂಕಿ ನಂದಿಸುವ ಅಗ್ನಿಶಾಮಕ ವಾಹನಕ್ಕೆ ನೀರೇ ಇಲ್ಲ..! ಮೊಳಕಾಲ್ಮುರು ಠಾಣೆಗೆ ಜಲಕ್ಷಾಮ..!

ಮೊಳಕಾಲ್ಮುರು ಅಗ್ನಿಶಾಮಕ ಠಾಣೆಗೆ ಜಲಕ್ಷಾಮ ಬಂದಿದ್ದು, ಬೆಂಕಿ ನಂದಿಸುವ ಫೈರ್‌ ಇಂಜಿನ್‌ಗೆ ನೀರೇ ಇಲ್ಲದಂತಾಗಿದೆ. ಒಂದೇ ಒಂದು ವಾಹನದ ಮೂಲಕ ಇಡೀ ತಾಲೂಕಿನಲ್ಲಿ ಆಗುವ ಅಗ್ನಿ ದುರಂತಗಳನ್ನು ತಪ್ಪಿಸುವ ಅನಿವಾರ್ಯತೆ ಇಲ್ಲಿನ ಸಿಬ್ಬಂದಿಗೆ ಬಂದಿದೆ.

Vijaya Karnataka Web 22 Jan 2021, 10:30 am
ಕೊಂಡ್ಲಹಳ್ಳಿ ಮಹಾದೇವ ಮೊಳಕಾಲ್ಮುರು (ಚಿತ್ರದುರ್ಗ)
Vijaya Karnataka Web fire-brigade-pti
ಅಗ್ನಿಶಾಮಕ ವಾಹನ

''ಏನಿದ್ದರೇನು ಮೀನಿಗೆ ನೀರಿಲ್ಲದಿದ್ದರೆ.. ಏನಿದ್ದರೇನು ಅಗ್ನಿ ಶಾಮಕ ಠಾಣೆಗೆ ನೀರಿಲ್ಲದಿದ್ದರೆ''ಎನ್ನುವಂತಾಗಿದೆ ಪಟ್ಟಣದಲ್ಲಿನ ಅಗ್ನಿ ಶಾಮಕ ಠಾಣೆ ವಾಹನ ಪರಿಸ್ಥಿತಿ!

ಹೌದು, ತಾಲೂಕಿನಲ್ಲಿರುವ ಏಕೈಕ ಅಗ್ನಿ ಶಾಮಕ ಠಾಣೆ ಇದಾಗಿದ್ದು ಸುತ್ತಲೂ ಸುಮಾರು ಮೂವತ್ತು ಕಿಮೀ ವ್ಯಾಪ್ತಿ ಒಳಗೊಂಡಿರುವ ಈ ಠಾಣೆಯು ತಾಲೂಕಿನ ಯಾವ ಭಾಗದಲ್ಲಿ ಬೆಂಕಿ ಅವಘಡಗಳು ಸಂಭವಿಸಿದರೂ ಆ ಸ್ಥಳಕ್ಕೆ ತೆರಳಲು ಇಲ್ಲಿನ ಸಿಬ್ಬಂದಿ ಸದಾ ಸಿದ್ಧರಿದ್ದಾರೆ. ಆದರೆ ಇಲ್ಲಿ ಕೇವಲ ಒಂದು ಜಲವಾಹನ ಮಾತ್ರ ಲಭ್ಯವಿದೆ. ಈ ವಾಹನಕ್ಕೂ ಕಳೆದ ಆರು ತಿಂಗಳಿನಿಂದಲೂ ನೀರಿನ ಸಮಸ್ಯೆ ಕಾಡುತ್ತಿದೆ.

ಹಾನಗಲ್‌ ಗ್ರಾಪಂ ವ್ಯಾಪ್ತಿಯಲ್ಲಿರುವ ಈ ಠಾಣೆಗೆ ಕೊರೆಸಿದ್ದ ಕೊಳವೆ ಬಾವಿಯನ್ನು ಕಳೆದ ವರ್ಷ ನೀರಿನ ಅಭಾವ ಹಿನ್ನೆಲೆಯಲ್ಲಿ ಗ್ರಾಪಂವನರು ವಶಪಡಿಸಿಕೊಂಡು ಗ್ರಾಮವೊಂದಕ್ಕೆ ನೀರು ನೀಡಿದ್ದಾರೆ. ಠಾಣೆ ಆವರಣದಲ್ಲಿದ್ದ ಕೊಳವೆಬಾವಿ ಕಳೆದ ಆರು ತಿಂಗಳ ಹಿಂದೆ ಮೋಟಾರ್‌ ಸುಟ್ಟು ಕಾರ್ಯ ಸ್ಥಗಿತಗೊಳಿಸಿದ ಕಾರಣ ನೀರಿನ ಕೊರತೆ ಹೆಚ್ಚಾಗಿ ಕಾಡುತ್ತಿದೆ.

ರಂಗಯ್ಯನದುರ್ಗ ಜಲಾಶಯದಿಂದ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಪೈಪ್‌ಲೈನ್‌ ಠಾಣೆ ಮುಂಭಾಗದಿಂದ ಹಾದು ಹೋಗಿದ್ದು ಸದ್ಯಕ್ಕೆ ಈ ಪೈಪ್‌ಲೈನ್‌ಗೆ ವಾಲ್‌ ಅಳವಡಿಸಿಕೊಂಡು ತಾತ್ಕಾಲಿಕವಾಗಿ ಪಪಂಯು ನೀರಿನ ಸೌಲಭ್ಯ ಕಲ್ಪಿಸಿ ಸಹಕರಿಸಿದೆ. ವರ್ಷದಲ್ಲಿ ಠಾಣೆ ವ್ಯಾಪ್ತಿಯಲ್ಲಿಸುಮಾರು 40 ರಿಂದ 50 ಬೆಂಕಿ ಅವಘಡ ನಡೆಯುತ್ತಿರುತ್ತವೆ.
ಚಿತ್ರದುರ್ಗ ನಗರದಲ್ಲಿ 1001 ಮನೆ ನಿರ್ಮಾಣಕ್ಕೆ ಅನುಮೋದನೆಒಮ್ಮೊಮ್ಮೆ ತಾಲೂಕಿನ ಎರಡೂ ಕಡೆ ಒಂದೇ ಸಮಯದಲ್ಲಿ ಅವಘಡಗಳು ನಡೆದಲ್ಲಿ ಅಧಿಕಾರಿಗಳ ಪರದಾಟ ಹೇಳ ತೀರದಾಗಿರುತ್ತದೆ. ಈ ಸಮಯದಲ್ಲಿ ದೂರದ ಚಳ್ಳಕೆರೆಯಿಂದ ವಾಹನ ಕರೆಸಿಕೊಂಡು ಕರ್ತವ್ಯ ನಿರ್ವಹಿಸುವ ಅನಿವಾರ್ಯತೆ ಇಲ್ಲಿನ ಸಿಬ್ಬಂದಿ, ಅಧಿಕಾರಿಗಳದ್ದಾಗಿದೆ. ಹಾನಗಲ್‌ ಗ್ರಾಪಂಗೆ ಈ ಠಾಣೆಯಿಂದ ಪ್ರತಿ ವರ್ಷವೂ 23 ಸಾವಿರ ರೂ. ತೆರಿಗೆ ನೀಡಲಾಗುತ್ತಿದೆ. ಆದರೂ ಸ್ಥಳೀಯ ಗ್ರಾಪಂ ಇಲ್ಲಿ ನೀರಿನ ವ್ಯವಸ್ಥೆ ಮಾಡುವಲ್ಲಿ ವಿಫಲರಾಗಿದ್ದಾರೆ.

ನಮ್ಮಲ್ಲಿಒಂದು ಜಲವಾಹನ ಇದೆ. ನೀರಿನ ಕೊರತೆ ಹೆಚ್ಚಿದೆ. ಕೆಲವೊಮ್ಮೆ ಎರಡೂ ಕಡೆ ಬೆಂಕಿ ಕಾಣಿಸಿಕೊಂಡಾಗ ನಾವು ಚಳ್ಳಕೆರೆಯಿಂದ ವಾಹನ ತರಿಸಿಕೊಂಡು ಸಾರ್ವಜನಿಕರ ಕಷ್ಟಕ್ಕೆ ಸ್ಪಂದಿಸಿದ್ದೇವೆ. ನೀರಿನ ಸಮಸ್ಯೆ ಬಗೆಹರಿದಲ್ಲಿ ಹೆಚ್ಚು ಅನುಕೂಲವಾಗಲಿದೆ.
ಜಿ.ಸುಬಾನ್‌ ಸಾಬ್‌, ಅಗ್ನಿಶಾಮಕ ಠಾಣಾಧಿಕಾರಿ, ಮೊಳಕಾಲ್ಮುರು

ಇದು ಅಗ್ನಿ ಶಾಮಕ ಠಾಣೆಯವರಿಗೆ ಸೀಜನ್‌ ಸಮಯ, ಡಿಸೆಂಬರ್‌ನಿಂದ ಮೇ ತಿಂಗಳವರೆಗೂ ಅಗ್ನಿ ಅವಘಡಗಳು ಹೆಚ್ಚಾಗಿ ನಡೆಯುವ ಸಂಭವ ಇರುತ್ತದೆ. ಈ ಆವರಣದಲ್ಲಿ ಒಟ್ಟು 14 ಸಿಬ್ಬಂದಿ ವಾಸಿಸುತ್ತಿದ್ದಾರೆ. ಇವರಿಗೂ ಕುಡಿವ ನೀರಿನ ಸಮಸ್ಯೆ ಕಾಡುತ್ತಿದೆ. ಕೆಲವೊಮ್ಮೆ ಬೆಂಕಿ ನಂದಿಸಲು ವಾಹನ ತೆರಳಿ ವಾಪಸಾಗುವಾಗ ದಾರಿ ಮಧ್ಯದ ತೋಟಗಳಲ್ಲಿ ನೀರು ದೊರೆತಲ್ಲಿ ಅಲ್ಲಿಯೇ ಟ್ಯಾಂಕ್‌ ಫುಲ್‌ ಮಾಡಿಕೊಂಡು ಸಿಬ್ಬಂದಿ ಮುಂದಿನ ಅವಘಡದ ಬೆಂಕಿ ನಂದಿಸಲು ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಇಲ್ಲಿ ಸಾಮಾನ್ಯ ಸಂಗತಿಯಾಗಿದೆ.
ಮೊಳಕಾಲ್ಮೂರು: ಸಂಕ್ರಾಂತಿಯ ರಂಗೋಲಿ ಸ್ಪರ್ಧೆಯಿಂದಾಗಿ ಇಡೀ ಗ್ರಾಮವೇ ಸ್ವಚ್ಛ‌, ಹೇಗೆ ಗೊತ್ತಾ?ಈ ಠಾಣೆಗೆ ಮತ್ತೊಂದು ವಾಹನದ ವ್ಯವಸ್ಥೆಯ ಜತೆ ಜರೂರಾಗಿ ನೀರಿನ ಸೌಕರ್ಯ ಮಾಡುವ ಅವಶ್ಯಕತೆ ಹೆಚ್ಚಿದೆ. ಈಗಾಗಲೇ ಸುಡು ಬಿಸಿಲು ಹೆಚ್ಚಾಗುತ್ತಿದ್ದು, ಸಂಭವನೀಯ ಬೆಂಕಿ ಅನಾಹುತ ಹತ್ತಿಕ್ಕಲು ಮೇಲಾಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಸಮಸ್ಯೆಗೆ ಬ್ರೇಕ್‌ ಹಾಕಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ