ಆ್ಯಪ್ನಗರ

ಭದ್ರಾ ಮೇಲ್ದಂಡೆ ತ್ವರಿತ ಕಾಮಗಾರಿಗೆ ಸೂಚನೆ

ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳ್ಳುವವರೆಗೆ ಅಧಿಕಾರಿಗಳು ನಿದ್ರಿಸಲು ಬಿಡುವುದಿಲ್ಲ. ಯೋಜನೆಯ ಕಾಮಗಾರಿ ಸ್ಥಿತಿಗತಿ ಪೂರ್ಣವಾಗಿ ಅರಿಯುವ ಉದ್ದೇಶದಿಂದಲೇ ತರೀಕೆರೆ, ಅಜ್ಜಂಪುರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರವಣಪ್ಪ ಹೇಳಿದರು.

Vijaya Karnataka 17 Aug 2018, 3:40 pm
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳ್ಳುವವರೆಗೆ ಅಧಿಕಾರಿಗಳು ನಿದ್ರಿಸಲು ಬಿಡುವುದಿಲ್ಲ. ಯೋಜನೆಯ ಕಾಮಗಾರಿ ಸ್ಥಿತಿಗತಿ ಪೂರ್ಣವಾಗಿ ಅರಿಯುವ ಉದ್ದೇಶದಿಂದಲೇ ತರೀಕೆರೆ, ಅಜ್ಜಂಪುರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರವಣಪ್ಪ ಹೇಳಿದರು.
Vijaya Karnataka Web notice for quick work on bhadra top
ಭದ್ರಾ ಮೇಲ್ದಂಡೆ ತ್ವರಿತ ಕಾಮಗಾರಿಗೆ ಸೂಚನೆ


ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ,'ನಾಲೆಗಾಗಿ ನಿರ್ಮಿಸುತ್ತಿರುವ ಸುರಂಗಮಾರ್ಗದಲ್ಲಿ ಖುದ್ದು ನಾನೇ ಹೋಗಿ ವೀಕ್ಷಿಸಿದ್ದೇನೆ. ಇನ್ನು 80 ಮೀಟರ್‌ ಸುರಂಗ ಮಾರ್ಗದ ಕೆಲಸ ಮಾತ್ರ ಬಾಕಿ ಇದೆ. ಆದಷ್ಟು ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ' ಎಂದರು.

ಡಿಸೆಂಬರ್‌ ವೇಳಗೆ ಭದ್ರಾ ನೀರು ಬರದಿದ್ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ರಾಜೀನಾಮೆ ನೀಡುತ್ತಾರಾ? ಎಂದು ಬಿಜೆಪಿ ಮುಖಂಡರು ಪ್ರಶ್ನಿಸಿರುವ ಕುರಿತು ಗಮನಸೆಳೆದಾಗ 'ಭದ್ರಾ ನೀರು ತರುವುದರ ಕುರಿತು ನಾನು ಹೇಳುತ್ತಿರುವುದು ಸುಳ್ಳೋ ನಿಜವೋ ಎಂಬುದು ವರ್ಷದ ಕೊನೆಗೆ ತಿಳಿಯಲಿದೆ. ಈ ಕುರಿತು ಬಿಜೆಪಿಯವರೇ ನೇರವಾಗಿ ನನ್ನನ್ನು ಪ್ರಶ್ನಿಸಲಿ, ಉತ್ತರಿಸುತ್ತೇನೆ ಎಂದು ಸಚಿವರು, ಚುನಾವಣೆಯ ನೀತಿಸಂಹಿತೆ ಇದ್ದುದರಿಂದ ಯಾವ ಜನಪ್ರತಿನಿಧಿಗಳಿಗೂ ಆಹ್ವಾನ ನೀಡಿರಲಿಲ್ಲ' ಎಂದು ಪ್ರತಿಕ್ರಿಯೆ ನೀಡಿದರು.

ಅಭಿವೃದ್ಧಿಗೆ ಪಕ್ಷ ಬೇಧ ಬೇಡ:
ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಬಿಜೆಪಿ ಶಾಸಕರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಪಕ್ಷಬೇಧ ಮಾಡುವುದಿಲ್ಲ. ಒಗ್ಗೂಡಿ ಕೆಲಸ ಮಾಡುತ್ತೇವೆ. ಸ್ಥಳೀಯ ಸಂಸ್ಥೆಗಳ ಚುಣಾವಣೆ ಮುಗಿದ ಬಳಿಕ ಕೆಡಿಪಿ ಸಭೆ ನಡೆಸಲಾಗುವುದು. ಜಿಲ್ಲಾಡಳಿತಕ್ಕೂ ಚುರುಕು ಮುಟ್ಟಿಸಲಾಗುವುದು ಎಂದರು.

ಸಂಸದ ಬಿ.ಎನ್‌.ಚಂದ್ರಪ್ಪ, ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌, ಜಿಪಂ ಸದಸ್ಯರಾದ ನರಸಿಂಹ, ನಾಗೇಂದ್ರನಾಯ್ಕ್‌, ಶಿವಮೂರ್ತಿ, ಕೆ.ಟಿ.ಗುರುಮೂರ್ತಿ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ