ಆ್ಯಪ್ನಗರ

ಮೈನಿಂಗ್‌ ಲಾರಿ ಸಂಚಾರಕ್ಕೆ ವಿರೋಧ

ತಾಲೂಕಿನ ಹಿರೇಗುಂಟನೂರಿನಲ್ಲಿ ಮಂಗಳವಾರ ಗ್ರಾಮಸ್ಥರು ಮೈನಿಂಗ್‌ ಲಾರಿ ಸಂಚಾರ ವಿರೋಧಿಸಿ ರಸ್ತೆ ತಡೆ ನಡೆಸಿದರು.

Vijaya Karnataka 10 Jul 2019, 5:00 am
ಚಿತ್ರದುರ್ಗ : ತಾಲೂಕಿನ ಹಿರೇಗುಂಟನೂರಿನಲ್ಲಿ ಮಂಗಳವಾರ ಗ್ರಾಮಸ್ಥರು ಮೈನಿಂಗ್‌ ಲಾರಿ ಸಂಚಾರ ವಿರೋಧಿಸಿ ರಸ್ತೆ ತಡೆ ನಡೆಸಿದರು.
Vijaya Karnataka Web opposition to mining truck traffic
ಮೈನಿಂಗ್‌ ಲಾರಿ ಸಂಚಾರಕ್ಕೆ ವಿರೋಧ


ಕಳೆದ ತಿಂಗಳು ಹಿರೇಗುಂಟನೂರು ಬಳಿ ಮೈನಿಂಗ್‌ ಲಾರಿ ಡಿಕ್ಕಿಯಾಗಿ ಒಂಬತ್ತು ತಿಂಗಳ ಗರ್ಭಿಣಿ ಸಹಿತ ಮೂರು ಜನ ಸ್ಥಳದಲ್ಲೇ ಮೃತಪಟ್ಟ ಪರಿಣಾಮ, ಈ ಭಾಗದಲ್ಲಿ ಮೈನಿಂಗ್‌ ಲಾರಿಗಳನ್ನು ಸಂಪೂರ್ಣ ನಿಷೇಧಿಸವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಹಿರೇಗುಂಟನೂರು, ಭೀಮಸಮುದ್ರ, ಬೊಮ್ಮನಹಳ್ಳಿ, ಹಳಿಯೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಜನರು ಪ್ರತಿಭಟನೆ ಹಾಗೂ ಧರಣಿ ನಡೆಸಿದ್ದರು. ಇದರ ಪರಿಣಾಮ ಜಿಲ್ಲಾಧಿಕಾರಿಗಳು ಒಂದು ತಿಂಗಳ ಕಾಲ ಲಾರಿ ಸಂಚಾರಕ್ಕೆ ನಿಷೇಧ ಹೇರಿದ್ದರು. ಒಂದು ತಿಂಗಳ ನಂತರ ಸಭೆ ಸೇರಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು. ಅಲ್ಲಿಯವರೆಗೆ ಮೈನಿಂಗ್‌ ಲೋಡಿಂಗ್‌ ಪರವಾನಿಗೆ ನೀಡದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಆದೇಶ ನೀಡಿದ್ದರು. ಆದರೆ, ಜಿಲ್ಲಾಧಿಕಾರಿಗಳ ಆದೇಶವಿದ್ದರೂ ಕಳೆದ 3-4 ದಿನಗಳಿಂದ ಅಧಿಕಾರಿಗಳು ಮೈನಿಂಗ್‌ ಲಾರಿಗಳ ಲೋಡಿಂಗ್‌ ಪರವಾನಗೆ ನೀಡಿ, ರಸ್ತೆ ಸಂಚಾರಕ್ಕೂ ಅವಕಾಶ ನೀಡಿರುವ ಕ್ರಮ ಖಂಡಿಸಿ ಗ್ರಾಮಸ್ಥರು ಮೈನಿಂಗ್‌ ಲಾರಿ ತಡೆದು ಪ್ರತಿಭಟನೆ ನಡೆಸಿದರು.

ಹಿರೇಗುಂಟನೂರು ತಾಪಂ ಸದಸ್ಯ ಸುರೇಶ್‌, ಭೀಮಸಮುದ್ರ ತಾಪಂ ಸದಸ್ಯ ಸುರೇಶ್‌ ನಾಯ್ಕ್‌, ಹಿರೇಗುಂಟನೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊನ್ನೂರಪ್ಪ, ಹಿರೇಗುಂಟನೂರು ಗ್ರಾಪಂ ಸದಸ್ಯರಾದ ಮಂಜುನಾಥ, ವಸಂತ್‌ ಸೇರಿದಂತೆ ಗ್ರಾಮಸ್ಥರು ಪ್ರತಿಭಟನೆಯಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ