ಆ್ಯಪ್ನಗರ

ಕಾರ್ಮಿಕರ ಹಕ್ಕು ಮೊಟಕಿಗೆ ವಿರೋಧ

ಕೇಂದ್ರ ಸರಕಾರ ಕಾರ್ಮಿಕರ ಹಿತಾಸಕ್ತಿಗೆ ಮಾರಕವಾಗಿರುವ ಕಾಯಿದೆ ತಿದ್ದುಪಡಿ ಮಾಡಿ, ಕಾರ್ಮಿಕರ ಹಕ್ಕುಗಳನ್ನು ...

Vijaya Karnataka 2 May 2018, 5:00 am
ಚಿತ್ರದುರ್ಗ: ಕೇಂದ್ರ ಸರಕಾರ ಕಾರ್ಮಿಕರ ಹಿತಾಸಕ್ತಿಗೆ ಮಾರಕವಾಗಿರುವ ಕಾಯಿದೆ ತಿದ್ದುಪಡಿ ಮಾಡಿ, ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸುತ್ತಿರುವುದರ ವಿರುದ್ಧ ಹೋರಾಟ ಮಾಡಬೇಕಿದೆ ಎಂದು ಜಿಲ್ಲಾ ಚಕ್ರ ವಾಹನಗಳ ಮೆಕ್ಯಾನಿಕ್‌ಗಳ ಸಂಘದ ಜಿಲ್ಲಾಧ್ಯಕ್ಷ ಅಲ್ತಾಫ್‌ಹುಸೇನ್‌ ಹೇಳಿದರು.
Vijaya Karnataka Web opposition to workers rights
ಕಾರ್ಮಿಕರ ಹಕ್ಕು ಮೊಟಕಿಗೆ ವಿರೋಧ


ನಗರದ ಸಂತೆ ಮೈದಾನದಲ್ಲಿರುವ ಜಿಲ್ಲಾ ದ್ವಿಚಕ್ರ ವಾಹನಗಳ ಮೆಕ್ಯಾನಿಕ್‌ಗಳ ಸಂಘ ಸಿಐಟಿಯುನಿಂದ ಮಂಗಳವಾರ ಆಯೋಜಿಸಿದ್ದ ಮೇ ದಿನಾಚರಣೆಯಲ್ಲಿ ಮಾತನಾಡಿ, 'ಪ್ರಧಾನಿ ಮೋದಿ ನೋಟು ಅಮಾನ್ಯೀಕರಣ ಮಾಡಿದ್ದರಿಂದ ಕಾರ್ಮಿಕರು, ಬಡವರು, ಮಧ್ಯಮ ವರ್ಗದವರು ಅತೀವ ಸಂಕಷ್ಟ ಎದುರಿಸುತ್ತಿದ್ದಾರೆ. ಜಿಎಸ್‌ಟಿ ಜಾರಿಗೊಳಿಸಿರುವುದು ಕಾರ್ಮಿಕರಿಗೆ ಪಾಲಿಗೆ ಕರಾಳ ಶಾಸನವಾಗಿದೆ' ಎಂದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲಿಯಪ್ಪ ಮಾತನಾಡಿ, ಕಾರ್ಮಿಕರನ್ನು ಸಮಯದ ಪರಿವೆ ಇಲ್ಲದೇ ದಿನವಿಡೀ ದುಡಿಸಿಕೊಳ್ಳುವ ಪ್ರವೃತ್ತಿಗೆ ಆಕ್ಷೇಪ ವ್ಯಕ್ತಪಡಿಸಿ, ಬಂಡವಾಳಶಾಹಿಗಳು, ಕಾರ್ಖಾನೆ ಮಾಲೀಕರ ವಿರುದ್ಧ ಹೋರಾಟ ನಡೆಸಿ ಪ್ರಾಣತ್ಯಾಗ ಮಾಡಿದ ನೆನಪಿಗೆ ಮೇ ದಿನಾಚರಣೆ ಆಚರಿಸಲಾಗುತ್ತಿದೆ' ಎಂದರು.

ಜಿಲ್ಲಾ ದ್ವಿಚಕ್ರ ವಾಹನ ಮೆಕ್ಯಾನಿಕ್‌ಗಳ ಸಂಘದ ಗೌರವಾಧ್ಯಕ್ಷ ಎಂ.ಕೆ.ಗಾಂಧಿ, ಉಪಾಧ್ಯಕ್ಷ ಪಿ.ಗೀರೀಶ್‌ ಮೂರ್ತಿ, ಜೈನುಲ್ಲಾಬ್ದಿನ್‌, ಎಲ್‌.ಟಿ.ನಾಗರಾಜ್‌, ಸೈಯದ್‌ ಜಾವೀದ್‌, ಖಜಾಂಚಿ ರಂಗಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಾಜುಲ್ಲಾ ರಫೀನ್‌, ಕಾರ್ಯದರ್ಶಿಗಳಾದ ಮೊಹಮದ್‌ ಸನಾವುಲ್ಲಾ, ದಾದಾಪೀರ್‌, ಸೀರಾಜ್‌ಬೇಗ್‌, ಇರ್ಫಾನ್‌, ಅನ್ವರ್‌, ತಾಜ್‌, ಆಜಾಂ, ಉಮರ್‌, ಮಕ್ಸೂದ್‌ ಅಹಮದ್‌, ಷರೀಫ್‌, ನಿಂಗಮ್ಮ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ