Please enable javascript.Kollapur Temple Festival,ಚಿತ್ರದುರ್ಗದ ಕೊಲ್ಲಾಪುರದಮ್ಮ ಜಾತ್ರೆಯಲ್ಲಿ ಜನವೋ ಜನ; ಕೊರೊನಾ ಭೀತಿಗೆ ಡೋಂಟ್‌ಕೇರ್‌! - people neglected corona rules in kollapuradamma temple festival - Vijay Karnataka

ಚಿತ್ರದುರ್ಗದ ಕೊಲ್ಲಾಪುರದಮ್ಮ ಜಾತ್ರೆಯಲ್ಲಿ ಜನವೋ ಜನ; ಕೊರೊನಾ ಭೀತಿಗೆ ಡೋಂಟ್‌ಕೇರ್‌!

Vijaya Karnataka Web 17 Apr 2021, 11:24 am
Embed
ಚಿತ್ರದುರ್ಗ: ಕೋವಿಡ್ ಮಾರ್ಗಸೂಚಿ ಗಾಳಿಗೆ ತೂರಿ ಸಾವಿರಾರು ಜನರು ಭಾಗವಹಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಪರುಶುರಾಂಪುರ ಗ್ರಾಮದ ಕೊಲ್ಲಾಪುರದಮ್ಮ ಜಾತ್ರೆಯ ಹಿನ್ನಲೆ ಶುಕ್ರವಾರ ಬೃಹತ್ ರಥೋತ್ಸವ ಅದ್ದೂರಿಯಾಗಿ ನಡೆಯಿತು. ಆದರೇ ದೇಶಾದ್ಯಂತ ಹೆಚ್ಚುತ್ತಿರುವ ಕೊರೋನಾ ಎರಡನೆ ಅಲೆಗೆ ಜನರು ಮತ್ತೆ ತತ್ತರಿಸುತ್ತಿದ್ದು ಸರ್ಕಾರ ಕೋವಿಡ್ ಸೋಂಕು ಹರಡುವಿಕೆ ತಡೆಯಲು ಹರಸಾಹಸ ಪಡುತ್ತಿದೆ. ಅಲ್ಲದೇ ಜನರನ್ನ ಕೋವಿಡ್ ಸೋಂಕಿನಿಂದ ರಕ್ಷಿಸೋಕೆ ಹಲವು ಮಾರ್ಗಸೂಚಿಗಳನ್ನ ಅಳವಡಿಸಿದೆ. ಆದರೂ ಎಚ್ಚೆತ್ತುಕೊಳ್ಳದ ಜನರು ಕೋವಿಡ್ ಮಾರ್ಗ ಸೂಚಿ ಉಲ್ಲಂಘಿಸುತ್ತಿದ್ದಾರೆ.

ಇದಕ್ಕೆ ಸಾಕ್ಷಿ ಎಂಬಂತೆ ಚಿತ್ರದುರ್ಗ ಜಿಲ್ಲೆಯಲ್ಲಿ

ರಂಜಾನ್‌ ಹಬ್ಬಕ್ಕೆ ಕೂಡಿಟ್ಟ ಹಣ ಬೆಂಕಿಗಾಹುತಿ: ದಾವಣಗೆರೆಯಲ್ಲೊಂದು ಮನ ಕಲಕುವ ಘಟನೆ!

ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಜಾತ್ರೆ ಹಬ್ಬಗಳನ್ನ ಸಾರ್ವಜನಿಕವಾಗಿ ಆಚರಿಸಿ ಜನರು ಸೇರುವುದಕ್ಕೆ ನಿಷೇಧ ಹೇರಿ ಆದೇಶ ಮಾಡಿದ್ದಾರೆ. ಆದರೂ ಜಿಲ್ಲಾಧಿಕಾರಿಗಳ ಕಟ್ಟು ನಿಟ್ಟಿನ ಆದೇಶ ಗಾಳಿಗೆ ತೂರಿ ಪರುಶುರಾಂಪುರ ಕೊಲ್ಲಾಪುರದಮ್ಮ ರಥೋತ್ಸವಕ್ಕೆ ಭಾಗವಹಿಸಿದ್ದಾರೆ. ಅಲ್ಲದೆ ರಥೋತ್ಸವದ ಸಂಭ್ರಮದಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಮರೆತು ಜಿಲ್ಲೆ, ಅಂತರ್ಜಿಲ್ಲೆ ಸೇರಿದಂತೆ ಹಲವಾರು ಭಾಗಗಳ ಜನತು ಭಾಗವಹಿಸಿದ್ದಿ ಕೋವಿಡ್ ಸೋಂಕು ಹರಡಲು ಅನುವು‌ ಮಾಡಿಕೊಟ್ಟಂತಾಗಿದೆ.

ಆದರೇ ಇದನ್ನ ನಿಯಂತ್ರಿಸಿ ಮಾರ್ಗಸೂಚಿ ಪಾಲಿಸಬೇಕಿದ್ದ ಜಿಲ್ಲಾಡಳಿತ ಹಾಗೂ ಪೋಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದದ್ದು ಹೇಳೋರಿಲ್ಲ ಕೇಳೋರಿಲ್ಲ ಅನ್ನುವಂತಾಗಿದೆ.