ಚಿತ್ರದುರ್ಗ : ಯಾವುದೇ ಇಲಾಖೆಯಾಗಲೀ ಸಾರ್ವಜನಿಕರ ಸಹಬಾಗಿತ್ವ ಇಲ್ಲದೆ ಯೋಜನೆಗಳು ಪರಿಪೂರ್ಣಗೊಳ್ಳುವುದಿಲ್ಲ ಎಂದು ಅರಣ್ಯ ಇಲಾಖೆಯ ಉಪಅರಣ್ಯ ಸಂರಕ್ಷ ಣಾಧಿಕಾರಿ ಮಳವಳ್ಳಿ ಹೇಳಿದರು.
ನಗರದ ತರಾಸು ರಂಗಮಂದಿರದಲ್ಲಿ ಭಾನುವಾರ ನಾಟ್ಯರಂಜನಿ ನೃತ್ಯ ಕಲಾ ಕೇಂದ್ರ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಪರಿಸರೋತ್ಸವ ವಿಶೇಷ ನೃತ್ಯ ರೂಪಕ ವೃಕ್ಷೋ ರಕ್ಷ ತಿ ರಕ್ಷಿತಃ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪರಿಸರದ ಬಗ್ಗೆ ಜಿಲ್ಲೆಯಲ್ಲಿ ಇರುವಷ್ಟು ಕಾಳಜಿ ಬೇರೆ ಯಾವ ಜಿಲ್ಲೆಯಲ್ಲೂ ಕಾಣುವುದು ಕಷ್ಟ. ನಾನಾ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಆಸಕ್ತಿ ವಹಿಸಿ ಪರಿಸರದ ಉಳಿವಿಗೆ ಶ್ರಮಿಸುತ್ತಿರುವುದು ಉತ್ತಮ ಕಾರ್ಯ. ಜಿಲ್ಲೆಗೆ ಬರದನಾಡು ಎಂಬ ಹಣೆಪಟ್ಟಿ ಇದೆ. ಆದರೆ ಸಮೀಪದ ಜೋಗಿಮಟ್ಟಿ ಹಾಗೂ ಆಡುಮಲ್ಲೇಶ್ವರ ನೋಡಿದರೆ ಯಾರು ಈ ಮಾತನ್ನು ಹೇಳುವುದಿಲ್ಲ. ಆಡುಮಲ್ಲೇಶ್ವರದ ಮೃಗಾಲಯದಲ್ಲಿ ಚಿರತೆ, ಹೆಬ್ಬಾವು, ಕರಡಿ ಹೀಗೆ ನಾನಾ ಪ್ರಾಣಿ ಪಕ್ಷಿಗಳನ್ನೂ ನೋಡಬಹುದು. ಮುಂದಿನ ದಿನಗಳಲ್ಲಿ ಮೃಗಾಲಯದ ಅಭಿವೃದ್ಧಿ ಮಾಡಿ ಉತ್ತಮ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು ಎಂದರು.
ಸಾನ್ನಿಧ್ಯ ವಹಿಸಿದ ಸದ್ಗುರು ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ, ವೃಕ್ಷ ವನ್ನು ಮನುಷ್ಯ ರಕ್ಷಿಸಿದರೆ ವೃಕ್ಷ ಮನುಷ್ಯನನ್ನು ರಕ್ಷಿಸುತ್ತದೆ. ಸಿದ್ದರಾಜು ಜೋಗಿ ಹಾಗೂ ಪಿ.ವಿ.ಮಲ್ಲಿಕಾರ್ಜುನಯ್ಯ ಅವರು ಬರದನಾಡಿನಲ್ಲಿ ಹಸಿರು ಕ್ರಾಂತಿ ಮಾಡುತ್ತಿದ್ದಾರೆ. ಹಿಂದೆ ಜಿಲ್ಲಾಧಿಕಾರಿಯಾಗಿದ್ದÜ ಅಮರನಾರಾಯಣ ಅವರು ಪರಿಸರದ ಬಗ್ಗೆ ಉತ್ತಮ ಕೆಲಸ ಮಾಡಿದ್ದರು. ಮನುಷ್ಯನ ಆರೋಗ್ಯಕ್ಕೆ ಮರಗಿಡಗಳನ್ನು ಸಂರಕ್ಷ ಣೆ ಮಾಡುವುದು ಸರ್ವರ ಜವಾಬ್ದಾರಿಯಾಗಿದೆ. ನಾಟ್ಯರಂಜನಿ ನೃತ್ಯ ಕಲಾ ಕೇಂದ್ರವು ಪರಿಸರದ ಬಗ್ಗೆ ನೃತ್ಯ ರೂಪಕ ಮಾಡಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಪರಿಸರವಾದಿ ಸಿದ್ದರಾಜು ಜೋಗಿ ಹಾಗೂ ಪಿ.ವಿ.ಮಲ್ಲಿಕಾರ್ಜುನಯ್ಯರನ್ನು ಸನ್ಮಾನಿಸಲಾಯಿತು.
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಾಡಿದ ಭರತನಾಟ್ಯ ಪ್ರಕಾರ ತನಿ ಅವರ್ತನಂ ನೃತ್ಯ ಜನರನ್ನು ರಂಜಿಸಿತ್ತು. ಚೇಲಾಪುರಿ ವೈಭವ, ಮೋಹಿನಿ ಅಟ್ಟಂ, ಅಂಗಿಕಂ ಭುವನಂಯಸ್ಯ, ಗುಮ್ಮನ ಕರೆಯದಿರೆ, ಪಂಚಮಿ ಹಬ್ಬ, ಅಲರಿಪು, ನಟೇಶ ಕೌತ್ವಂ, ತ್ರಿಮಾತಾ ಕೌತ್ವಂ, ವೃಕ್ಷೋ ರಕ್ಷ ತಿ ರಕ್ಷಿತಃ ನೃತ್ಯ ರೂಪಕಗಳು ಜನಗಳ ಮೆಚ್ಚುಗೆ ಪಡೆದವು.
ಅರಣ್ಯ ಇಲಾಖೆಯ ಸಹಾಯಕ ಉಪಅರಣ್ಯ ಸಂರಕ್ಷ ಣಾಧಿಕಾರಿ ರಾಘವೇಂದ್ರ ರಾವ್, ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್ನ ಅಧ್ಯಕ್ಷ ಜೆ.ವಿ.ಮಂಜುನಾಥ, ಇನ್ನರ್ ವ್ಹೀಲ್ ಕ್ಲಬ್ ಚಿತ್ರದುರ್ಗ ಫೋರ್ಟ್ನ ಅಧ್ಯಕ್ಷೆ ರೇಖಾ ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.
ನಗರದ ತರಾಸು ರಂಗಮಂದಿರದಲ್ಲಿ ಭಾನುವಾರ ನಾಟ್ಯರಂಜನಿ ನೃತ್ಯ ಕಲಾ ಕೇಂದ್ರ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಪರಿಸರೋತ್ಸವ ವಿಶೇಷ ನೃತ್ಯ ರೂಪಕ ವೃಕ್ಷೋ ರಕ್ಷ ತಿ ರಕ್ಷಿತಃ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪರಿಸರದ ಬಗ್ಗೆ ಜಿಲ್ಲೆಯಲ್ಲಿ ಇರುವಷ್ಟು ಕಾಳಜಿ ಬೇರೆ ಯಾವ ಜಿಲ್ಲೆಯಲ್ಲೂ ಕಾಣುವುದು ಕಷ್ಟ. ನಾನಾ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಆಸಕ್ತಿ ವಹಿಸಿ ಪರಿಸರದ ಉಳಿವಿಗೆ ಶ್ರಮಿಸುತ್ತಿರುವುದು ಉತ್ತಮ ಕಾರ್ಯ. ಜಿಲ್ಲೆಗೆ ಬರದನಾಡು ಎಂಬ ಹಣೆಪಟ್ಟಿ ಇದೆ. ಆದರೆ ಸಮೀಪದ ಜೋಗಿಮಟ್ಟಿ ಹಾಗೂ ಆಡುಮಲ್ಲೇಶ್ವರ ನೋಡಿದರೆ ಯಾರು ಈ ಮಾತನ್ನು ಹೇಳುವುದಿಲ್ಲ. ಆಡುಮಲ್ಲೇಶ್ವರದ ಮೃಗಾಲಯದಲ್ಲಿ ಚಿರತೆ, ಹೆಬ್ಬಾವು, ಕರಡಿ ಹೀಗೆ ನಾನಾ ಪ್ರಾಣಿ ಪಕ್ಷಿಗಳನ್ನೂ ನೋಡಬಹುದು. ಮುಂದಿನ ದಿನಗಳಲ್ಲಿ ಮೃಗಾಲಯದ ಅಭಿವೃದ್ಧಿ ಮಾಡಿ ಉತ್ತಮ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು ಎಂದರು.
ಸಾನ್ನಿಧ್ಯ ವಹಿಸಿದ ಸದ್ಗುರು ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ, ವೃಕ್ಷ ವನ್ನು ಮನುಷ್ಯ ರಕ್ಷಿಸಿದರೆ ವೃಕ್ಷ ಮನುಷ್ಯನನ್ನು ರಕ್ಷಿಸುತ್ತದೆ. ಸಿದ್ದರಾಜು ಜೋಗಿ ಹಾಗೂ ಪಿ.ವಿ.ಮಲ್ಲಿಕಾರ್ಜುನಯ್ಯ ಅವರು ಬರದನಾಡಿನಲ್ಲಿ ಹಸಿರು ಕ್ರಾಂತಿ ಮಾಡುತ್ತಿದ್ದಾರೆ. ಹಿಂದೆ ಜಿಲ್ಲಾಧಿಕಾರಿಯಾಗಿದ್ದÜ ಅಮರನಾರಾಯಣ ಅವರು ಪರಿಸರದ ಬಗ್ಗೆ ಉತ್ತಮ ಕೆಲಸ ಮಾಡಿದ್ದರು. ಮನುಷ್ಯನ ಆರೋಗ್ಯಕ್ಕೆ ಮರಗಿಡಗಳನ್ನು ಸಂರಕ್ಷ ಣೆ ಮಾಡುವುದು ಸರ್ವರ ಜವಾಬ್ದಾರಿಯಾಗಿದೆ. ನಾಟ್ಯರಂಜನಿ ನೃತ್ಯ ಕಲಾ ಕೇಂದ್ರವು ಪರಿಸರದ ಬಗ್ಗೆ ನೃತ್ಯ ರೂಪಕ ಮಾಡಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಪರಿಸರವಾದಿ ಸಿದ್ದರಾಜು ಜೋಗಿ ಹಾಗೂ ಪಿ.ವಿ.ಮಲ್ಲಿಕಾರ್ಜುನಯ್ಯರನ್ನು ಸನ್ಮಾನಿಸಲಾಯಿತು.
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಾಡಿದ ಭರತನಾಟ್ಯ ಪ್ರಕಾರ ತನಿ ಅವರ್ತನಂ ನೃತ್ಯ ಜನರನ್ನು ರಂಜಿಸಿತ್ತು. ಚೇಲಾಪುರಿ ವೈಭವ, ಮೋಹಿನಿ ಅಟ್ಟಂ, ಅಂಗಿಕಂ ಭುವನಂಯಸ್ಯ, ಗುಮ್ಮನ ಕರೆಯದಿರೆ, ಪಂಚಮಿ ಹಬ್ಬ, ಅಲರಿಪು, ನಟೇಶ ಕೌತ್ವಂ, ತ್ರಿಮಾತಾ ಕೌತ್ವಂ, ವೃಕ್ಷೋ ರಕ್ಷ ತಿ ರಕ್ಷಿತಃ ನೃತ್ಯ ರೂಪಕಗಳು ಜನಗಳ ಮೆಚ್ಚುಗೆ ಪಡೆದವು.
ಅರಣ್ಯ ಇಲಾಖೆಯ ಸಹಾಯಕ ಉಪಅರಣ್ಯ ಸಂರಕ್ಷ ಣಾಧಿಕಾರಿ ರಾಘವೇಂದ್ರ ರಾವ್, ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್ನ ಅಧ್ಯಕ್ಷ ಜೆ.ವಿ.ಮಂಜುನಾಥ, ಇನ್ನರ್ ವ್ಹೀಲ್ ಕ್ಲಬ್ ಚಿತ್ರದುರ್ಗ ಫೋರ್ಟ್ನ ಅಧ್ಯಕ್ಷೆ ರೇಖಾ ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.