ಆ್ಯಪ್ನಗರ

ವಿಕ ವರದಿ ಇಂಪ್ಯಾಕ್ಟ್‌: ಗುಣಮಟ್ಟದ ಪೈಪ್‌ ಪೂರೈಕೆ, ಗಂಗಾ ಕಲ್ಯಾಣ ಫಲಾನುಭವಿಗಳು ಖುಷ್‌

ಗಂಗಾ ಕಲ್ಯಾಣ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯ ಐದು ಹಳ್ಳಿಗಳಿಗೆ 1 ಲಾರಿ ಲೋಡ್‌ ಅಪೊಲೊ ಕಂಪನಿಯ ಕಬ್ಬಿಣದ ಪೈಪ್‌ಗಳನ್ನು ಪೂರೈಕೆ ಮಾಡಲಾಗಿತ್ತು. ಅದರಲ್ಲಿ ಬಹುತೇಕ ಎಲ್ಲವೂ ತುಕ್ಕು ಹಿಡಿದು ಹೋಗಿದ್ದವು. ಅದಕ್ಕೆ ಬಣ್ಣಬಳಿದು ಫಲಾನುಭವಿ ರೈತರಿಗೆ ವಿತರಿಸಲಾಗಿತ್ತು.

Vijaya Karnataka 21 Feb 2022, 5:52 pm
ಭರಮಸಾಗರ: ಸಮೀಪದ ಕೋಗುಂಡೆ ಗ್ರಾಪಂ ವ್ಯಾಪ್ತಿಯ ಐದು ಹಳ್ಳಿಗಳ 'ಗಂಗಾ ಕಲ್ಯಾಣ' ಯೋಜನೆ ಫಲಾನುಭವಿಗಳಿಗೆ ಪೂರೈಕೆಯಾಗಿದ್ದ ಕಳಪೆ ಪೈಪ್‌, ಪಂಪ್‌ಸೆಟ್‌ ಪೂರೈಕೆ ಸುದ್ದಿ 'ವಿಕ'ದಲ್ಲಿ ಪ್ರಕಟವಾಗುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.
Vijaya Karnataka Web ಸಂಗ್ರಹ ಚಿತ್ರ
ಸಂಗ್ರಹ ಚಿತ್ರ


ಗಂಗಾ ಕಲ್ಯಾಣ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯ ಐದು ಹಳ್ಳಿಗಳಿಗೆ 1 ಲಾರಿ ಲೋಡ್‌ ಅಪೊಲೊ ಕಂಪನಿಯ ಕಬ್ಬಿಣದ ಪೈಪ್‌ಗಳನ್ನು ಪೂರೈಕೆ ಮಾಡಲಾಗಿತ್ತು. ಅದರಲ್ಲಿ ಬಹುತೇಕ ಎಲ್ಲವೂ ತುಕ್ಕು ಹಿಡಿದು ಹೋಗಿದ್ದವು. ಅದಕ್ಕೆ ಬಣ್ಣಬಳಿದು ಫಲಾನುಭವಿ ರೈತರಿಗೆ ವಿತರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ'ಗಂಗಾ ಕಲ್ಯಾಣ ಉಚಿತ, ಸಾಲವೂ ಖಚಿತ!' (ಫೆ.19) ರಂದು ವಿಕ ಸುದ್ದಿ ಪ್ರಕಟಿಸಿತ್ತು. ನಂತರ ಎಚ್ಚೆತ್ತ ಚಿತ್ರದುರ್ಗದ ಗಂಗಾ ಕಲ್ಯಾಣ ಯೋಜನೆ ಅಧಿಕಾರಿಗಳು ಕೋಗುಂಡೆ , ಬಹದ್ದೂರ್‌ ಘಟ್ಟ ಫಲಾನುಭವಿ ರೈತರಿಗೆ ಗುಣಮಟ್ಟದ ನೂತನ ಪೈಪ್‌ಗಳನ್ನು ಭಾನುವಾರ ಸಂಜೆ ಪೂರೈಕೆ ಮಾಡಿದ್ದಾರೆ. ಕಳಪೆ ಪೈಪ್‌ ಪೂರಕೈ ಸಂಬಂಧ ಸುದ್ದಿ ಪ್ರಕಟಿಸಿದ್ದ ವಿಜಯ ಕರ್ನಾಟಕ ಪತ್ರಿಕೆಗೆ ಫಲಾನುಭವಿಗಳು ಧನ್ಯವಾದ ಅರ್ಪಿಸಿದ್ದಾರೆ.

ದಕ್ಷಿಣ ಭಾರತದಲ್ಲೇ ವಿಶಿಷ್ಟ ಕರ್ಪೂರದ ಆರತಿ ಕಾರ್ಯಕ್ರಮ ₹64,500 ರೂಗೆ ಹರಾಜು

ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ಕಳಪೆ ಪೈಪ್‌ ರವಾನಿಸಲಾಗಿದ್ದ ಪೈಪ್‌ಗಳ ಬಗ್ಗೆ ಸುದ್ದಿ ಪ್ರಕಟವಾಗಿ ಎರಡನೇ ದಿನಗಳಲ್ಲಿ ಫಲಾನುಭವಿ ರೈತರಿಗೆ ಹೊಸ ಗುಣಮಟ್ಟದ ಪೈಪ್‌ಗಳು ಸರಬರಾಜಾಗಿವೆ. ಸುದ್ದಿ ಪ್ರಕಟಸಿ, ರೈತರ ಧ್ವನನಿಯಾಗಿರುವ 'ವಿಕ'ಗೆ ಧನ್ಯವಾದಗಳು ಎಂದು ಕೋಗುಂಡೆ ರೈತ ಬಿಜ್ಜಳಗೌಡ ತಿಳಿಸಿದ್ದಾರೆ.

ಕಳಪೆ ಗುಣಮಟ್ಟದ ಪೈಪ್‌ ಪೂರೈಕೆ ಮಾಡಲಾಗಿತ್ತು. ಐಎಸ್‌ಐ ಮಾರ್ಕ್ ಇರಲಿಲ್ಲ. ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಕನ್ನಡಿಯಂತಿತ್ತು. 'ವಿಕ' ಸುದ್ದಿ ಪ್ರಕಟವಾದ ಬಳಿಕ ಎಚ್ಚೆತ್ತ ಅಧಿಕಾರಿಗಳು ಗುಣಮಟ್ಟದ ಐಎಸ್‌ಐ ಮುದ್ರೆಯಿರುವ ಪೈಪ್‌ ತಂದು ಮನೆ ಬಾಗಿಲಿಗೆ ಇಳಿಸಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಗೆ ಧನ್ಯವಾದಗಳು ಎಂದು ಕೋಗುಂಡೆ ಗ್ರಾಮರ ರೈತರ ಆರ್‌. ರುದ್ರಪ್ಪ ತಿಳಿಸಿದ್ದಾರೆ.

ಆಕಸ್ಮಿಕ ಬೆಂಕಿ: ರೈತ ನೋಡನೋಡುತ್ತಿದ್ದಂತೆ ಬಾಳೆ ಗಿಡಗಳು ಅಗ್ನಿಗಾಹುತಿ

ಭರಮಸಾಗರದ ಕೋಗುಂಡೆ ಗ್ರಾಪಂ ವ್ಯಾಪ್ತಿಯ ಐದು ಹಳ್ಳಿಗಳಿಗೆ ಗಂಗಾ ಕಲ್ಯಾಣ ಯೋಜನೆ ಫಲಾನುಭವಿಗಳಿಗೆ ನೂತನ ಗುಣಮಟ್ಟದ ಪೈಪ್‌ ಪೂರೈಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹಲವಾರು ಕಡೆಗಳಲ್ಲಿ ಸಮೀಕ್ಷೆ ನಡೆಸಿ ಗುಣಮಟ್ಟದ ಪೈಪ್‌ಗಳನ್ನು ಅಳವಡಿಸಲಾಗುವುದು ಎಂದು ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ