ಆ್ಯಪ್ನಗರ

ಚಿತ್ರದುರ್ಗ: 4 ಎಕರೆ ಭೂಮಿಯಲ್ಲಿ ಗಾಂಜಾ ಬೆಳೆದಿದ್ದ ಖದೀಮರು, 4 ಕೋಟಿ ಮೌಲ್ಯದ ಗಿಡ ಪೊಲೀಸ್‌ ವಶಕ್ಕೆ!

ಆಗಸ್ಟ್ 4 ರಂದು ರಾಂಪುರ ಪೊಲೀಸರು ತೋಟಕ್ಕೆ ದಾಳಿ ನಡೆಸಿ ಬರೋಬ್ಬರಿ 871.73 ಕೆ.ಜಿ ತೂಕದ 8250 ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿ ವೇಳೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಈ ವೇಳೆ ಜಮೀನನ್ನು ಲೀಸ್‌ಗೆ ಪಡೆದಿದ್ದ ಆರೋಪಿ ರುದ್ರೇಶ್ ತಲೆ ಮರೆಸಿಕೊಂಡಿದ್ದ. ನಂತರ ರುದ್ರೇಶ್‌ನನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Agencies 17 Sep 2020, 10:21 am
ಚಿತ್ರದುರ್ಗ: ಬರೋಬ್ಬರಿ 4 ಕೋಟಿ ರೂ. ಮೌಲ್ಯದ ಗಾಂಜಾ ಗಿಡ ಬೆಳೆದಿದ್ದ ಖದೀಮರು ಈಗ ಪೊಲೀಸರ ಅತಿಥಿಯಾಗಿದ್ದಾರೆ. ಈ ಘಟನೆ ಚಿತ್ರದುರ್ಗ ಜಿಲ್ಲೆಯ ರಾಂಪುರದಲ್ಲಿ ನಡೆದಿದ್ದು, 4 ಎಕರೆ ಭೂಮಿ ಗುತ್ತಿಗೆ ಪಡೆದುಕೊಂಡು ವಿಶಾಲವಾಗಿ ಗಾಂಜಾವನ್ನು ನೆಟ್ಟಿದ್ದರು.
Vijaya Karnataka Web EiFjwClX0AYZ-bD


ಇನ್ನು ಆಗಸ್ಟ್ 4 ರಂದು ರಾಂಪುರ ಪೊಲೀಸರು ತೋಟಕ್ಕೆ ದಾಳಿ ನಡೆಸಿ ಬರೋಬ್ಬರಿ 871.73 ಕೆ.ಜಿ ತೂಕದ 8250 ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿ ವೇಳೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಈ ವೇಳೆ ಜಮೀನನ್ನು ಲೀಸ್‌ಗೆ ಪಡೆದಿದ್ದ ಆರೋಪಿ ರುದ್ರೇಶ್ ತಲೆ ಮರೆಸಿಕೊಂಡಿದ್ದ. ನಂತರ ರುದ್ರೇಶ್‌ನನ್ನು ಕೂಡ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಅಂತಾಪುರ ಕೊರಚರಹಟ್ಟಿ ನಿವಾಸಿಯಾಗಿರು ರುದ್ರೇಶ್, ರಾಂಪುರದ ಬಳಿ ಜಮೀನು ಗುತ್ತಿಗೆ ಪಡೆದು ಗಾಂಜಾ ಬೆಳೆದಿದ್ದ. ಇದನ್ನು ನೋಡಿಕೊಳ್ಳಲು ಕೆಲಸದವರನ್ನು ಇಟ್ಟುಕೊಂಡಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ರಾಂಪುರ ಠಾಣೆ ಪಿಎಸ್ಐ ಗುಡ್ಡಪ್ಪ ನೇತೃತ್ವದ ತಂಡ, ಜಮೀನು ಮಾಲೀಕರು, ಮಧ್ಯವರ್ತಿ ಸೇರಿದಂತೆ ಪ್ರಮುಖ ಆರೋಪಿ ರುದ್ರೇಶ್ ನನ್ನು ಬಂಧಿಸಿದ್ದಾರೆ. ಬಂಧಿತ ಐವರ ವಿರುದ್ಧ NDPS ಆ್ಯಕ್ಟ್ ಕಲಂ 8 ಹಾಗಾ 20(a)(b) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ