ಆ್ಯಪ್ನಗರ

ಬಡವರ ಆರೋಗ್ಯ ರಕ್ಷ ಣೆ ಉಚಿತ ಸೇವೆ

'ಬಡವರ ಸಾರ್ವತ್ರಿಕ ಆರೋಗ್ಯ ರಕ್ಷ ಣೆಗಾಗಿ ಸರಕಾರದ ಆರೋಗ್ಯ ಇಲಾಖೆಯಿಂದ ಆಯುಷ್ಮಾನ್‌ ಭಾರತ, ಆರೋಗ್ಯ ಕರ್ನಾಟಕ ಯೋಜನೆ ಜಾರಿಗೊಳಿಸಲಾಗಿದ್ದು, ಸಾರ್ವಜನಿಕರಿಗೆ ಉಚಿತ ಚಿಕಿತ್ಸೆ ದೊರೆಯಲಿದೆ' ಎಂದು ಡಿಎಚ್‌ಇಒ ಎನ್‌.ಎಸ್‌.ಮಂಜುನಾಥ್‌ ಹೇಳಿದರು.

Vijaya Karnataka 1 Dec 2018, 5:00 am
ಚಿತ್ರದುರ್ಗ : 'ಬಡವರ ಸಾರ್ವತ್ರಿಕ ಆರೋಗ್ಯ ರಕ್ಷ ಣೆಗಾಗಿ ಸರಕಾರದ ಆರೋಗ್ಯ ಇಲಾಖೆಯಿಂದ ಆಯುಷ್ಮಾನ್‌ ಭಾರತ, ಆರೋಗ್ಯ ಕರ್ನಾಟಕ ಯೋಜನೆ ಜಾರಿಗೊಳಿಸಲಾಗಿದ್ದು, ಸಾರ್ವಜನಿಕರಿಗೆ ಉಚಿತ ಚಿಕಿತ್ಸೆ ದೊರೆಯಲಿದೆ' ಎಂದು ಡಿಎಚ್‌ಇಒ ಎನ್‌.ಎಸ್‌.ಮಂಜುನಾಥ್‌ ಹೇಳಿದರು.
Vijaya Karnataka Web poor health care is free service
ಬಡವರ ಆರೋಗ್ಯ ರಕ್ಷ ಣೆ ಉಚಿತ ಸೇವೆ


ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗ್ರಾಪಂ ಅನ್ನೇಹಾಳ್‌ ಮತ್ತು ಹ್ಯಾಂಡ್ಸ್‌ ತರಬೇತಿ ಸಂಸ್ಥೆ ಸಹಯೋಗದಲ್ಲಿ ಅನ್ನೇಹಾಳ್‌ ಗ್ರಾಪಂ ವ್ಯಾಪ್ತಿಯ ಕಕ್ಕೇಹರಿವು ಗ್ರಾಮದ ಅಂಬೇಡ್ಕರ್‌ ಭವನದಲ್ಲಿ ಆಯೋಜಿಸಿದ್ದ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಉದ್ಯೋಗ ನಿರ್ವಹಣೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಪ್ರಮುಖ ಅಂಶವಾಗಿದೆ. ಸಮರ್ಥ ಕೆಲಸ ನಿರ್ವಹಿಸಲು ಆರೋಗ್ಯವಂತರಾಗಿರಲೇಬೇಕು. ಇದರಿಂದ ದುಡಿಮೆ ಮಾಡುವ ಅವಧಿಯ ಸಂಪೂರ್ಣ ಉಪಯೋಗವಾಗಿ, ಗುಣಾತ್ಮಕ ಮತ್ತು ಉತ್ಪಾದಿತ ಕೆಲಸಗಳಾಗುತ್ತವೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಿಂದ ಆಯುಷ್ಮಾನ್‌ ಭಾರತ, ಅರೋಗ್ಯ ಕರ್ನಾಟಕ ಯೋಜನೆಗಳ ಉಪಯೋಗ ಪಡೆದುಕೊಳ್ಳಬೇಕು ಎಂದರು.

ಗ್ರಾಮೀಣ ಬಡ ಕುಟುಂಬಗಳಿಗೆ ನಗರವಾಸಿ ಬಡ ಕುಟುಂಬಗಳಿಗೆ ಆರ್ಥಿಕ ಸಾಮಾಜಿಕ ಜಾತಿಗಣತಿ ಆಧಾರದ ಮೇಲೆ ಈ ಹಿಂದೆ ಆರ್‌ಎಸ್‌ಬಿವೈ ಯೋಜನೆಯ ಎಲ್ಲ ಫಲಾನುಭವಿಗಳಿಗೆ ಸದಸ್ಯರ ಮಿತಿಯಿಲ್ಲದೆ ಕುಟುಂಬದ ಎಲ್ಲ ಸದಸ್ಯರಿಗೆ ಐದು ಲಕ್ಷ ರೂ. ತನಕ ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಹಂತದ ಚಿಕಿತ್ಸಾ ವೆಚ್ಚ ಭರಿಸುವ ಯೋಜನೆಯಾಗಿದೆ ಎಂದರು.

ಗ್ರಾಪಂ ಅಧ್ಯಕ್ಷೆ ಚಂದ್ರಮ್ಮ ಅಧ್ಯಕ್ಷ ತೆ ವಹಿಸಿದ್ದರು. ಸದಸ್ಯ ಕೆ.ಮಂಜುನಾಥ್‌, ವೃತ್ತ ಕೃಷಿ ಅಧಿಕಾರಿ ಎಚ್‌.ಶಿವಲಿಂಗಪ್ಪ ಸಿರಿಧಾನ್ಯಗಳ ಮಹತ್ವ ಕುರಿತು ಮಾತನಾಡಿದರು. ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಎಮ್‌. ಖಾಸಿಂಸಾಬ್‌ ಎಚ್‌1ಎನ್‌1 ರೋಗ ನಿಯಂತ್ರಣ ಕುರಿತು ತಿಳಿಸಿದರು.

ಹ್ಯಾಂಡ್ಸ್‌ ಸಂಸ್ಥೆ ವ್ಯವಸ್ಥಾಪಕ ಕೆ.ಎಸ್‌. ಹಡಪದ್‌, ಸಿದ್ದೇಶ್‌, ಮಧು, ಹೇಮಲತಾ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ