ಆ್ಯಪ್ನಗರ

ಮೋದಿ ಆಗಮನಕ್ಕೆ ದುರ್ಗದಲ್ಲಿ ಭರದ ಸಿದ್ಧತೆ

ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ರಾಜ್ಯದ ನಾನಾ ಕಡೆ ನಡೆಯುವ ರಾರ‍ಯಲಿಗಳಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು, ಪಕ್ಷದ ವತಿಯಿಂದ ವ್ಯಾಪಕ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಜಿ ಗೃಹ ಸಚಿವ ಲೋಕಸಭಾ ಚುನಾವಣೆ ರಾಜ್ಯ ಉಸ್ತುವಾರಿ ಆರ್‌.ಅಶೋಕ್‌ ಹೇಳಿದರು.

Vijaya Karnataka 31 Mar 2019, 5:00 am
ಚಿತ್ರದುರ್ಗ : ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ರಾಜ್ಯದ ನಾನಾ ಕಡೆ ನಡೆಯುವ ರಾರ‍ಯಲಿಗಳಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು, ಪಕ್ಷದ ವತಿಯಿಂದ ವ್ಯಾಪಕ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಜಿ ಗೃಹ ಸಚಿವ ಲೋಕಸಭಾ ಚುನಾವಣೆ ರಾಜ್ಯ ಉಸ್ತುವಾರಿ ಆರ್‌.ಅಶೋಕ್‌ ಹೇಳಿದರು.
Vijaya Karnataka Web preparing for modis arrival in dungeon
ಮೋದಿ ಆಗಮನಕ್ಕೆ ದುರ್ಗದಲ್ಲಿ ಭರದ ಸಿದ್ಧತೆ


ನಗರಕ್ಕೆ ಏ.8ರಂದು ಪ್ರಧಾನಿ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಸಿದ್ಧತೆ ಪರಿಶೀಲನೆ ನಂತರ ಜೆಸಿಆರ್‌ ರಸ್ತೆಯಲ್ಲಿರುವ ಎಂಆರ್‌ಪಿ ಬಿಲ್ಡಿಂಗ್‌ ಎದುರು ಪಕ್ಷದ ಕಚೇರಿ ಉದ್ಘಾಟಿಸಿ ಮಾತನಾಡಿದರು.

ಕಲಬುರಗಿ, ಹುಬ್ಬಳ್ಳಿ ರಾರ‍ಯಲಿಗೆ ಅಭೂತಪೂರ್ವ ಸ್ಪಂದನೆ ದೊರೆತಿದೆ. ಚಿತ್ರದುರ್ಗ, ಮೈಸೂರು, ಉಡುಪಿ, ಚಿಕ್ಕಮಗಳೂರು, ಮಂಗಳೂರು, ಬೆಂಗಳೂರಿನಲ್ಲಿ ರಾರ‍ಯಲಿ ನಡೆಯಲಿದೆ. ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮನದಿಂದ ಪಕ್ಷದ ಕಾರ್ಯಕರ್ತರು, ಮುಖಂಡರಲ್ಲಿ ಹೊಸ ಭರವಸೆ ಹುಟ್ಟಿಸಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಏ.2 ರಂದು ಬೆಂಗಳೂರಿನಲ್ಲಿ ರೋಡ್‌ ಷೋ ನಡೆಸಲಿದ್ದಾರೆ ಎಂದರು.

ರಾಜ್ಯ ಸಮ್ಮಿಶ್ರ ಸರಕಾರ ಗೊಂದಲದ ಗೂಡಾಗಿದ್ದು, ಬಂಡಾಯದ ಕೂಗು ಎದ್ದಿದೆ. ಅಧಿಕಾರಕ್ಕಾಗಿ ಎರಡು ಪಕ್ಷಗಳ ಮುಖಂಡರು ಹೊಂದಾಣಿಕೆ ಮಾಡಿಕೊಂಡಿದ್ದಾರೆಯೇ ವಿನಃ ಕಾರ್ಯಕರ್ತರಿಗೆ ಮೈತ್ರಿ ಇಷ್ಟವಿಲ್ಲ. ಮಂಡ್ಯದಲ್ಲಿ ಸುಮಲತಾ ಎನ್ನುವ ಹೆಸರಿನ ನಾಲ್ವರನ್ನು ಕಣಕ್ಕಿಳಿಸಿದ್ದಾರೆ. ಮತದಾರರು ಇಂಥ ಕುತಂತ್ರ ರಾಜಕಾರಣ ಅರಿಯದವರಲ್ಲ. ನಾವು ಸುಮಲತಾರನ್ನು ಬೆಂಬಲಿಸಿದ್ದೇವೆ ಎಂದು ಹೇಳಿದರು.

ಬಿ.ಎಸ್‌.ಯಡಿಯೂರಪ್ಪರ ಪುತ್ರ ಬಿ.ವೈ. ರಾಘವೇಂದ್ರ ಸುಮಾರು ಎರಡು ದಶಕಗಳ ಕಾಲ ಚುನಾವಣಾ ಏಜೆಂಟರಾಗಿ ಕೆಲಸ ಮಾಡಿ, ಪಕ್ಷದ ಕಾರ್ಯಕರ್ತರ ಒಡನಾಟ ಇಟ್ಟುಕೊಂಡಿದ್ದ ಕಾರಣ ಸಂಸದರಾಗಿ ಆಯ್ಕೆಯಾಗಿದ್ದರು. ಜೆಡಿಎಸ್‌ನ ಆಗುಹೋಗುಗಳಲ್ಲಿ ಎಂದೂ ತೊಡಗಿಸಿಕೊಳ್ಳದ ದೇವೇಗೌಡರ ಮೊಮ್ಮಕ್ಕಳು ದಿಢೀರ್‌ ಲೋಕಸಭೆ ಅಭ್ಯರ್ಥಿಗಳಾದರೆ, ಜನ ಹೇಗೆ ಸ್ವೀಕರಿಸುತ್ತಾರೆ? ಎಂದು ಪ್ರಶ್ನಿಸಿದರು.

ಪ್ರಧಾನಿ ಮೋದಿ ಮಾ.31ರಂದು ದೇಶದ 543 ಲೋಕಸಭಾ ಕ್ಷೇತ್ರಗಳಲ್ಲಿಯೂ ನೇರವಾಗಿ ವೀಡಿಯೋ ಕಾನ್ಫರೆನ್ಸ್‌ನಲ್ಲಿ ದೇಶದ ಜನತೆಯನ್ನು ಕುರಿತು ಮಾತನಾಡಲಿದ್ದಾರೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೂ ಉಸ್ತುವಾರಿ ನೇಮಕ ಮಾಡಿದ್ದೇವೆ. ಚಿತ್ರದುರ್ಗ ಕ್ಷೇತ್ರದ ಅಭ್ಯರ್ಥಿ ಆನೇಕಲ್‌ ನಾರಾಯಣಸ್ವಾಮಿ ಅವರನ್ನು ಗೆಲ್ಲಿಸಿ ಪಾರ್ಲಿಮೆಂಟ್‌ಗೆ ಕಳಿಸಿಕೊಡಿ ಎಂದು ಮನವಿ ಮಾಡಿದರು.

ಶಾಸಕರಾದ ಜಿ.ಎಚ್‌.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ವಿಭಾಗೀಯ ಸಹ ಪ್ರಭಾರಿ ಜಿ.ಎಂ.ಸುರೇಶ್‌, ಡಾ.ಎ.ಎಚ್‌.ಶಿವಯೋಗಿಸ್ವಾಮಿ, ಅಭ್ಯರ್ಥಿ ಆನೇಕಲ್‌ ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್‌.ನವೀನ್‌ ಇದ್ದರು.

**

ಬಾಕ್ಸ್‌/

ಬಿಜೆಪಿಯಲ್ಲಿ ವಂಶಪಾರಂಪರ್ಯ ರಾಜಕಾರಣವಿಲ್ಲ


ದೇಶದಲ್ಲಿ ತ್ರಿಜಿ, ಫೋರ್‌ಜಿ ವಂಶ ಪಾರಂಪರ್ಯ ರಾಜಕಾರಣ ನಡೆಯುತ್ತಿದ್ದು, ಬಿಜೆಪಿಯಲ್ಲಿ ವಂಶಪಾರಂಪರ್ಯ ರಾಜಕಾರಣವಿಲ್ಲ ಮಾಜಿ ಡಿಸಿಎಂ ಆರ್‌.ಅಶೋಕ್‌ ಹೇಳಿದರು.

ಪಕ್ಷ ದ ಪೋಸ್ಟರ್‌ಗಳಲ್ಲೂ ಎಂದೂ ಕಾಣಿಸಿಕೊಳ್ಳದ ನಿಖಿಲ್‌ನನ್ನು ಚುನಾವಣೆಗೆ ನಿಲ್ಲಿಸುವ ಮೂಲಕ ಜೆಡಿಎಸ್‌ ತ್ರಿಜಿ(ತಾತಾ, ಮಕ್ಕಳು, ಮೊಮ್ಮಕ್ಕಳು)ಯಾಗಿದ್ದರೆ, ಕಾಂಗ್ರೆಸ್‌ ರಾಹುಲ್‌ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುವ ಮೂಲಕ (ತಂದೆ, ಮಗಳು, ಮಕ್ಕಳು, ಮೊಮ್ಮಕ್ಕಳು)ಫೋರ್‌ ಜಿ ಆಗಿದೆ ಎಂದು ಲೇವಡಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ