ಆ್ಯಪ್ನಗರ

ತೇರುಬೀದಿ ವಿಸ್ತರಣೆಗೆ ಪಪಂ ಕೊಕ್ಕೆ!

ಮಧ್ಯ ಕರ್ನಾಟಕದ ಆರಾಧ್ಯದೈವ ಶ್ರೀತಿಪ್ಪೇರುದ್ರಸ್ವಾಮಿ ತೇರು ಬೀದಿ ಅಗಲೀಕರಣಕ್ಕೆ ಯೋಜನೆ ರೂಪಿಸಲಾಗಿದೆ. ಆದರೆ, ಪಟ್ಟಣ ಪಂಚಾಯಿತಿ ಎಡವಟ್ಟಿನಿಂದಾಗಿ ಕಾಮಗಾರಿ ಸ್ಥಗಿತಗೊಂಡಿದೆ.

Vijaya Karnataka 12 Oct 2019, 5:00 am
ನಾಯಕನಹಟ್ಟಿ: ಮಧ್ಯ ಕರ್ನಾಟಕದ ಆರಾಧ್ಯದೈವ ಶ್ರೀತಿಪ್ಪೇರುದ್ರಸ್ವಾಮಿ ತೇರು ಬೀದಿ ಅಗಲೀಕರಣಕ್ಕೆ ಯೋಜನೆ ರೂಪಿಸಲಾಗಿದೆ. ಆದರೆ, ಪಟ್ಟಣ ಪಂಚಾಯಿತಿ ಎಡವಟ್ಟಿನಿಂದಾಗಿ ಕಾಮಗಾರಿ ಸ್ಥಗಿತಗೊಂಡಿದೆ.
Vijaya Karnataka Web puppam hook for the tarpaulin extension
ತೇರುಬೀದಿ ವಿಸ್ತರಣೆಗೆ ಪಪಂ ಕೊಕ್ಕೆ!


ಲೋಕೋಪಯೋಗಿ ಇಲಾಖೆ ವತಿಯಿಂದ ಪಟ್ಟಣದ ತೇರು ಬೀದಿ ಹಾಗೂ ಪಾದಗಟ್ಟೆ ರಸ್ತೆ ಅಗಲೀಕರಣ ಕಾಮಗಾರಿ ಕೈಗೊಳ್ಳಲಾಗಿದೆ. ಪಾದಗಟ್ಟೆ ರಸ್ತೆಯನ್ನು 19 ಮೀಟರ್‌ ಹಾಗೂ ತೇರು ಬೀದಿಯಲ್ಲಿ18 ಮೀಟರ್‌ ರಸ್ತೆ ನಿರ್ಮಿಸಿ ನಂತರ ಎರಡು ಬದಿಯಲ್ಲಿಚರಂಡಿ ಹಾಗೂ ಫುಟ್‌ಪಾತ್‌ ನಿರ್ಮಾಣಕ್ಕೆ ಯೋಜಿಸಲಾಗಿತ್ತು. ಆದರೆ, ಜಿಲ್ಲಾಉಸ್ತುವಾರಿ ಸಚಿವ ಹಾಗೂ ಕ್ಷೇತ್ರದ ಶಾಸಕರಾದ ಬಿ.ಶ್ರೀರಾಮುಲು ಸೂಚನೆಯ ಮೇರೆಗೆ ಪಪಂ ಸಭೆಯಲ್ಲಿ ಪಿಡಬ್ಲ್ಯುಡಿ ನಿಗದಿಪಡಿಸಿದ ಮಿತಿಯನ್ನು ಒಂದು ಮೀಟರ್‌ ಕಡಿಮೆಗೊಳಿಸಲು ತೀರ್ಮಾನಿಸಲಾಗಿತ್ತು. ಅದರನ್ವಯ ತೇರು ಬೀದಿಯನ್ನು 17 ಮೀಟರ್‌ ಹಾಗೂ ಪಾದಗಟ್ಟೆ ರಸ್ತೆಯನ್ನು 18 ಮೀಟರ್‌ಗೆ ಮಿತಿಗೊಳಿಸಲು ನಿರ್ಧರಿಸಲಾಗಿತ್ತು. ಆದರೂ ಪಪಂ ನಿಗದಿಪಡಿಸಿದಂತೆ ಅಗಲೀಕರಣ ಮಾಡದ್ದರಿಂದ ಕಾಮಗಾರಿ ಸ್ಥಗಿತಗೊಂಡಿದೆ.

ಸಭೆಯಲ್ಲಿತೀರ್ಮಾನಿಸಿದ ರೀತಿಯಲ್ಲಿಪಪಂ ತೇರು ಬೀದಿ ತೆರವುಗೊಳಿಸಿಲ್ಲ. ಬೇಕಾಬಿಟ್ಟಿಯಾಗಿ ಅಗಲೀಕರಣಗೊಳಿಸಲಾಗಿದೆ. ತೇರು ಬೀದಿಯಲ್ಲಿಕೆಲ ಸ್ಥಳದಲ್ಲಿ15 ಮೀಟರ್‌ ಇದ್ದರೆ, ಮತ್ತೊಂದೆಡೆ 19 ಮೀಟರ್‌ ಇದೆ. ಕೆಲ ಪ್ರಭಾವಿಗಳ ಮನೆ ಮುಂದಿನ ಪ್ರದೇಶವನ್ನು ತೆರವುಗೊಳಿಸಿಲ್ಲ. ಹಲವರು ಮನೆಗಳ ಗೋಡೆಗಳನ್ನು ಕಳೆದುಕೊಂಡಿದ್ದಾರೆ.

ಒತ್ತುವರಿಯನ್ನು ತಡೆಯುವುದು ಹಾಗೂ ತೇರು ಬೀದಿಯನ್ನು ವಿಶಾಲಗೊಳಿಸುವುದು ರಸ್ತೆ ನಿರ್ಮಾಣದ ಪ್ರಮುಖ ಉದ್ದೇಶವಾಗಿತ್ತು. ಆದರೆ, ಇದೀಗ ಪ್ರಮುಖ ಉದ್ದೇಶ ದಾರಿ ತಪ್ಪುತ್ತಿದೆ. ನಾಮಕಾವಸ್ತೆ ಅಗಲೀಕರಣ ಹಾಗೂ ಚರಂಡಿ ನಿರ್ಮಾಣ ಕೈಗೊಳ್ಳಲಾಗಿದೆ. ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಬೆಣ್ಣೆಯಂತೆ ಅಗಲೀಕರಣ ಕಾರ್ಯಾಚರಣೆ ನಡೆಸಲಾಗಿದೆ ಎಂಬ ಆರೋಪ ಬಲವಾಗಿದೆ. ಹೀಗಾಗಿ ಮತ್ತೊಮ್ಮೆ ಮಾರ್ಕಿಂಗ್‌ ಮಾಡಲಾಗಿದೆ. ರಸ್ತೆ ಅಗಲೀಕರಣ ಕಾರ್ಯಾಚರಣೆ ಎಲ್ಲಕಡೆಯೂ ಒಂದೇ ಬಗೆಯಲ್ಲಿಇರಲಿ ಎಂಬುದು ಸ್ಥಳೀಯ ನಿವಾಸಿಗಳ ಆಗ್ರಹವಾಗಿದೆ. ಇದಕ್ಕೆ ಪಪಂ ಕಿವಿಗೊಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಕೊಟ್‌..1

ತೇರು ಬೀದಿಯ ಕೆಲವು ಕಡೆಯಲ್ಲಿಮಾತ್ರ ನಿಗದಿಪಡಿಸಿದ ಪ್ರಮಾಣಕ್ಕಿಂತ ರಸ್ತೆ ಕಿರಿದಾಗಿದೆ. ಸ್ವಲ್ಪ ಪ್ರಮಾಣದಲ್ಲಿಅಳತೆಯಲ್ಲಿವ್ಯತ್ಯಾಸವಾಗಿದೆ. ನಿಗದಿಪಡಿದ ಅಳತೆಗಿಂತ ಕಡಿಮೆ ಇರುವ ಪ್ರದೇಶಗಳನ್ನು ಗುರುತಿಸಲಾಗಿದೆ. ಸ್ವಲ್ಪ ಪ್ರಮಾಣದಲ್ಲಿಲೋಪಗಳು ಉಂಟಾಗಿವೆ.

-ಸತ್ಯಪ್ಪ, ಎಇಇ, ಪಿಡಬ್ಲ್ಯುಡಿ, ಚಳ್ಳಕೆರೆ.

ಕೊಟ್‌..2


ಪಪಂ ಸಭೆಯಲ್ಲಿನಿಗದಿಪಡಿಸಿದ ಅಳತೆಯಂತೆ ಕಾರ್ಯಾಚರಣೆ ನಡೆಸಿದರೆ ಹಲವಾರು ಮನೆಗಳಿಗೆ ತೊಂದರೆಯಾಗಲಿದೆ. ಹೀಗಾಗಿ ಕೆಲ ಕೌನ್ಸಿಲರ್‌ಗಳು ಕಾಮಗಾರಿ ಸ್ಥಗಿತಗೊಳಿಸಲು ಸೂಚಿಸಿದ್ದಾರೆ. ಶಾಸಕ ಬಿ.ಶ್ರೀರಾಮುಲು ನಿರ್ದೇಶನದಂತೆ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು.

- ಡಿ.ಭೂತಪ್ಪ, ಪಪಂ, ಮುಖ್ಯಾಧಿಕಾರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ