ಆ್ಯಪ್ನಗರ

ಚಿತ್ರದುರ್ಗದಲ್ಲಿ ಸ್ಕಿಲ್‌ ಡೆವಲಪ್‌ಮೆಂಟ್ ಸೆಂಟರ್‌ ಉದ್ಘಾಟಿಸಿದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌!

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಸಮೀಪದ ಕುದಾಪುರ ಐಐಎಸ್ಸಿ ಕ್ಯಾಂಪಸ್‌ನ ಸ್ಕಿಲ್‌ ಡೆವಲಪ್‌ಮೆಂಟ್‌ ಸೆಂಟರ್‌ನ್ನು ದೆಹಲಿಯಿಂದ ಗುರುವಾರ ವೀಡಿಯೋ ಕಾನ್ಫರೆನ್ಸ್‌ನಲ್ಲಿಉದ್ಘಾಟಿಸಿ ಮಾತನಾಡಿದರು.

Vijaya Karnataka Web 13 Aug 2020, 8:52 pm
ನಾಯಕನಹಟ್ಟಿ (ಚಿತ್ರದುರ್ಗ): ಕೌಶಲ್ಯ ಹೊಂದಿರುವ ಜನಸಂಪನ್ಮೂಲ ಹೊಸ ಆವಿಷ್ಕಾರಕ್ಕೆ ಕಾರಣವಾಗುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಹೇಳಿದರು.
Vijaya Karnataka Web Rajnath Singh
ಸಾಂದರ್ಭಿಕ ಚಿತ್ರ


ಸಮೀಪದ ಕುದಾಪುರ ಐಐಎಸ್ಸಿ ಕ್ಯಾಂಪಸ್‌ನ ಸ್ಕಿಲ್‌ ಡೆವಲಪ್‌ಮೆಂಟ್‌ ಸೆಂಟರ್‌ನ್ನು ದೆಹಲಿಯಿಂದ ಗುರುವಾರ ವೀಡಿಯೋ ಕಾನ್ಫರೆನ್ಸ್‌ನಲ್ಲಿಉದ್ಘಾಟಿಸಿ ಮಾತನಾಡಿದರು.

ಜ್ಞಾನವೇ ಶಕ್ತಿಯಾಗಿದೆ. ಇದೇ ರೀತಿ ಹೊಸ ರೀತಿಯ ಉತ್ಪಾದನೆಗೆ ಸೃಜನಶೀಲತೆ ಹಾಗೂ ಕೌಶಲ್ಯ ಅಗತ್ಯವಾಗಿದೆ. ಈ ಕೇಂದ್ರ ದೇಶದ ಏರೋಸ್ಪೇಸ್‌ ದಿಗ್ಗಜ ಎಚ್‌ಎಎಲ್‌ ಹಾಗೂ ಉತ್ತಮ ಜ್ಞಾನ ಹೊಂದಿರುವ ಐಐಎಸ್ಸಿಗಳ ಅತ್ಯುತ್ತಮ ಸಮ್ಮಿಳನವಾಗಿದೆ. ಈ ಎರಡು ಕೇಂದ್ರಗಳ ಶ್ರಮದ ಫಲವಾಗಿ ಎಸ್‌ಡಿಸಿ ಅಸ್ತಿತ್ವಕ್ಕೆ ಬಂದಿದೆ ಎಂದು ಹೇಳಿದರು.

ಸೂಳೆಕೆರೆಯಲ್ಲಿ ₹1347 ಕೋಟಿಯ ಜಲವಿದ್ಯುತ್‌ ಯೋಜನೆಗೆ ಶಾಸಕರಿಂದಲೇ ವಿರೋಧ!

ಐಐಎಸ್ಸಿ ನಿರ್ದೇಶಕ ಜಿ.ರಂಗರಾಜನ್‌ ಮಾತನಾಡಿ, ಸ್ಥಳೀಯ ಮಟ್ಟದಿಂದ ಅತ್ಯುನ್ನತ ಎಂಜಿನಿಯರ್‌ಗಳ ವರೆಗೆ ಇಲ್ಲಿನ ಕೇಂದ್ರದಲ್ಲಿತರಬೇತಿ ನೀಡಲಾಗುವುದು. ಮೇಕ್‌ ಇಂಡಿಯಾದ ಕನಸು ನನಸಾಗಲು ಪ್ರಯತ್ನ ಆರಂಭಿಸಿದ್ದೇವೆ ಎಂದರು.

ಎಚ್‌ಎಲ್‌ನ ಸಿಎಂಡಿ ಆರ್‌. ಮಾಧವನ್‌, ಜನರಲ್‌ ಬಿಪಿನ್‌ ರಾವತ್‌, ರಕ್ಷಣಾ ವಿಭಾಗದ ಪ್ರಮುಖ ಸಿಬ್ಬಂದಿ ಡಾ. ಅಜಯ್‌ ಕುಮಾರ್‌(ರಕ್ಷಣಾ ಉತ್ಪಾದನೆ), ರಕ್ಷಣಾ ಕಾರ್ಯದರ್ಶಿ ರಾಜ್‌ ಕುಮಾರ್‌, ಎಚ್‌ಎಎಲ್‌ ನಿರ್ದೆಶಕ ಅಲೋಕ್‌ ವರ್ಮ (ಎಚ್‌ಆರ್‌) ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ