ಆ್ಯಪ್ನಗರ

ಮೊಳಕಾಲ್ಮೂರು: ಸಂಕ್ರಾಂತಿಯ ರಂಗೋಲಿ ಸ್ಪರ್ಧೆಯಿಂದಾಗಿ ಇಡೀ ಗ್ರಾಮವೇ ಸ್ವಚ್ಛ‌, ಹೇಗೆ ಗೊತ್ತಾ?

​​ಕಳೆದ ಏಳು ವರ್ಷದ ಹಿಂದೆಯೇ ಸ್ವಚ್ಛ ಭಾರತ್‌ ಯೋಜನೆ ಕಲ್ಪನೆ ರೂಢಿಸಿಕೊಂಡ ಈ ಯುವಕರ ತಂಡದ ಸದಸ್ಯರು ತಮ್ಮ ಗ್ರಾಮದಲ್ಲಿ ಪ್ರಧಾನಿ ನರೇಂದ್ರ ಮೋದಿಗಿಂತಲೂ ಮೊದಲಿಗೆ ಸ್ವಚ್ಛ ಭಾರತ್‌ ಕಲ್ಪನೆ ಜಾರಿಗೊಳಿಸಿ ಪ್ರತಿ ವರ್ಷವೂ ಸಂಕ್ರಾಂತಿ ಹಬ್ಬದ ದಿನದಂದು ಸ್ವಚ್ಛತೆಗೆ ಆದ್ಯತೆ ನೀಡುತ್ತಲೇ ಬಂದಿದ್ದಾರೆ. ಅದು ಕೇವಲ ಆರೇಳು ಸಾವಿರ ರೂ. ವೆಚ್ಚದಲ್ಲಿ ಎನ್ನುವುದು ಮೆಚ್ಚುಗೆಯ ವಿಷಯ.

Vijaya Karnataka Web 15 Jan 2021, 7:09 am
ಮೊಳಕಾಲ್ಮುರು :ಸಂಕ್ರಾಂತಿ ಹಬ್ಬದ ರಂಗೋಲಿ ಸ್ಪರ್ಧೆ ಹೆಸರಿನಲ್ಲಿ ಕೇವಲ ಏಳು ಸಾವಿರ ರೂ. ನಗದು ಬಹುಮಾನ ನೀಡಿ ಇಡೀ ಗ್ರಾಮವನ್ನು ಸ್ವಚ್ಛಗೊಳಿಸುವ ಕಲ್ಪನೆ ನಿಜಕ್ಕೂ ಮಾದರಿಯಾಗಿದೆ! ಹೌದು, ತಾಲೂಕಿನ ಕೋನಸಾಗರ ಶ್ರೀನಿತ್ಯ ಪರಿವರ್ತನಂ ಸಾಂಭುಯಾ ಟ್ರಸ್ಟ್‌ ಯುವಕರ ತಂಡವು ಪ್ರತಿ ವರ್ಷದಂತೆ ಈ ವರ್ಷವೂ ಗ್ರಾಮದಲ್ಲಿ ರಂಗೋಲಿ ಸ್ಪರ್ಧೆ ಏರ್ಪಡಿಸಿ ಗ್ರಾಮಸ್ಥರಿಂದಲೇ ಗ್ರಾಮವನ್ನು ಕಡಿಮೆ ವೆಚ್ಚದಲ್ಲಿ ಸ್ವಚ್ಛಗೊಳಿಸಿ ಗಮನ ಸೆಳೆದಿದ್ದಾರೆ.
Vijaya Karnataka Web ಸಾಂದರ್ಭಿಕ ಚಿತ್ರ


ಕಳೆದ ಏಳು ವರ್ಷದ ಹಿಂದೆಯೇ ಸ್ವಚ್ಛ ಭಾರತ್‌ ಯೋಜನೆ ಕಲ್ಪನೆ ರೂಢಿಸಿಕೊಂಡ ಈ ಯುವಕರ ತಂಡದ ಸದಸ್ಯರು ತಮ್ಮ ಗ್ರಾಮದಲ್ಲಿ ಪ್ರಧಾನಿ ನರೇಂದ್ರ ಮೋದಿಗಿಂತಲೂ ಮೊದಲಿಗೆ ಸ್ವಚ್ಛ ಭಾರತ್‌ ಕಲ್ಪನೆ ಜಾರಿಗೊಳಿಸಿ ಪ್ರತಿ ವರ್ಷವೂ ಸಂಕ್ರಾಂತಿ ಹಬ್ಬದ ದಿನದಂದು ಸ್ವಚ್ಛತೆಗೆ ಆದ್ಯತೆ ನೀಡುತ್ತಲೇ ಬಂದಿದ್ದಾರೆ. ಅದು ಕೇವಲ ಆರೇಳು ಸಾವಿರ ರೂ. ವೆಚ್ಚದಲ್ಲಿ ಎನ್ನುವುದು ಮೆಚ್ಚುಗೆಯ ವಿಷಯ.

ಈ ವರ್ಷ ರಂಗೋಲಿ ಸ್ಪರ್ಧೆಯ ಜತೆ ಗಿಡ ಬೆಳೆಸಿ ಹಸಿರಿನಿಂದ ಕೂಡಿದ ಮನೆಗಳಿಗೆ ಬಹುಮಾನ ನೀಡಲು ಮುಂದಾಗಿದ್ದಾರೆ. ಈ ಎರಡೂ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ನೀಡುತ್ತಾರೆ. ಈ ಬಹುಮಾನ ತನ್ನದಾಗಿಸಿಕೊಳ್ಳುವ ಇಚ್ಚೆ ಉಳ್ಳವರು ಮನೆ ಮುಂದಿನ ಅಂಗಳ ಸ್ವಚ್ಛಗೊಳಿಸಬೇಕು. ಆಕರ್ಷಕವಾಗಿ ರಂಗೋಲಿ ಹಾಕಬೇಕು, ಜತೆಯಲ್ಲಿ ಮನೆಯ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡವರಿಗೆ ಆದ್ಯತೆ ಎನ್ನುವ ಕಂಡೀಷನ್‌ ಇರುವ ಕಾರಣ ಪ್ರತಿಯೊಬ್ಬ ಸ್ಪರ್ಧಿಯೂ ತಮ್ಮ ಮನೆ, ಸುತ್ತಲಿನ ಸ್ಥಳವನ್ನು ಸ್ವಚ್ಛಗೊಳಿಸಿ ಆನಂತರವೇ ರಂಗೋಲಿ ಹಾಕಿರುತ್ತಾರೆ.

ಚಿತ್ರದುರ್ಗದಲ್ಲಿ ಲಾಕಪ್‌ ಡೆತ್‌: ಗಾಂಜಾ ಮಾರಾಟ ಆರೋಪಿ ಪೊಲೀಸ್ ವಶದಲ್ಲೇ ಸಾವು...

ಬಹುಮಾನಗಳನ್ನು ಸ್ಥಳೀಯರು ಕೊಡುಗೆಯಾಗಿ ನೀಡಿದ್ದಾರೆ. ತೀರ್ಪುಗಾರರಾಗಿ ರಾಧಮ್ಮ, ದುಗಾಂಬಿಕಾ, ಶಿಕ್ಷಕರಾದ ಜಿ.ಜಿ.ನಾಗರಾಜ್‌, ಲಕ್ಷಿತ್ರ್ಮಕಾಂತಚಾರಿ ಕರ್ತವ್ಯ ನಿರ್ವಹಿಸಿದರು. ಸ್ಥಳದಲ್ಲಿ ಟ್ರಸ್ಟ್‌ ಕಾರ್ಯದರ್ಶಿ ಟಿ.ಎಂ.ಮಲ್ಲಿಕಾರ್ಜುನ್‌, ನಿರ್ದೇಶಕರಾದ ಎನ್‌.ನೀಲರಾಜ್‌, ಯರ್ರಿಸ್ವಾಮಿ, ತಿಪ್ಪೇಸ್ವಾಮಿ, ದೇವರಾಜ್‌, ನಿವೃತ್ತ ಮುಖ್ಯ ಶಿಕ್ಷಕ ಟಿ.ವಿ.ಮೋಹನ್‌ ಕುಮಾರ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ