ಆ್ಯಪ್ನಗರ

ಹಸಿ, ಒಣ ಕಸ ವಿಂಗಡಣೆ ಜಾಗೃತಿ

ನಗರದ ಸಂಗೊಳ್ಳಿ ರಾಯಣ್ಣ ವೃತ್ತ ಸಮೀಪದ ಸಂಪಿಗೆ ಸಿದ್ದೇಶ್ವರ ಶಾಲೆಯ ಮಕ್ಕಳಿಗೆ ನಗರಸಭೆಯಿಂದ ಗುರುವಾರ ಹಸಿ ಕಸ ಮತ್ತು ಒಣ ಕಸ ವಿಂಗಡಿಸಿ ಪರಿಸರ ಕಾಪಾಡುವ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು.

Vijaya Karnataka 1 Dec 2018, 5:00 am
ಚಿತ್ರದುರ್ಗ : ನಗರದ ಸಂಗೊಳ್ಳಿ ರಾಯಣ್ಣ ವೃತ್ತ ಸಮೀಪದ ಸಂಪಿಗೆ ಸಿದ್ದೇಶ್ವರ ಶಾಲೆಯ ಮಕ್ಕಳಿಗೆ ನಗರಸಭೆಯಿಂದ ಗುರುವಾರ ಹಸಿ ಕಸ ಮತ್ತು ಒಣ ಕಸ ವಿಂಗಡಿಸಿ ಪರಿಸರ ಕಾಪಾಡುವ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು.
Vijaya Karnataka Web raw dry litter sorting awareness
ಹಸಿ, ಒಣ ಕಸ ವಿಂಗಡಣೆ ಜಾಗೃತಿ


ನಗರಸಭೆ ಪರಿಸರ ಎಂಜಿನಿಯರ್‌ ಜಾಫರ್‌ ಮಾತನಾಡಿ, ಮನೆಗಳಲ್ಲಿ ದಿನನಿತ್ಯ ಶೇಖರಣೆಯಾಗುವ ಕೊಳೆಯುವ ಕಸವನ್ನು ಹಸಿರು ಡಬ್ಬಕ್ಕೆ, ಮರುಬಳಕೆ ಆಗುವ ವಸ್ತುಗಳನ್ನು ನೀಲಿ ಡಬ್ಬಕ್ಕೆ ಹಾಕಿಕೊಂಡಿರಬೇಕು.ಪ್ರತಿ ಮನೆ ಬಾಗಿಲಿಗೆ ಬರುವ ನಗರಸಭೆ ವಾಹನಗಳಿಗೆ ಪ್ರತ್ಯೇಕವಾಗಿಯೇ ಕೊಡಬೇಕು ಎಂದು ಮನವಿ ಮಾಡಿದರು.

ವಾಣಿಜ್ಯ ಮಳಿಗೆಗಳಲ್ಲೂ ಕಡ್ಡಾಯವಾಗಿ ಎರಡು ಕಸ ಬುಟ್ಟಿ ಇಟ್ಟುಕೊಂಡು ಕಸ ಸಂಗ್ರಹಿಸುವ ನಗರಸಭೆ ವಾಹನಗಳಿಗೆ ಹಾಕಬೇಕು. ಮನೆ, ಅಂಗಡಿ ಮಳಿಗೆಗಳ ಕಸವನ್ನು ಯಾವುದೇ ಕಾರಣಕ್ಕೂ ಚರಂಡಿ, ಸಾರ್ವಜನಿಕ ಸ್ಥಳಗಳಲ್ಲಿ ಎಸೆಯಬಾರದು. ಒಂದು ವೇಳೆ ಎಸೆದರೆ ಶಿಕ್ಷಾರ್ಹ ಅಪರಾಧವಾಗಿದ್ದು, ಮಕ್ಕಳು ಮನೆಯಲ್ಲಿ, ಸಾರ್ವಜನಿಕರಲ್ಲಿ ತಿಳಿ ಹೇಳಬೇಕು. ಆಗ ನಗರಸಭೆಯ ಸುಂದರನಗರಕ್ಕೆ ಕೈಜೋಡಿಸಬೇಕು ಎಂದು ಕೋರಿದರು. ನಗರಸಭೆ ಆರೋಗ್ಯ ನಿರೀಕ್ಷ ಕ ಅಶೋಕ್‌ಕುಮಾರ್‌, ಸಂಪಿಗೆ ಸಿದ್ದೇಶ್ವರ ಶಾಲೆಯ ಮುಖ್ಯಶಿಕ್ಷ ಕ ರಾಥೋಡ್‌ ಹಾಗೂ ಸಹ ಶಿಕ್ಷ ಕರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ