ಆ್ಯಪ್ನಗರ

ರಾಯರ ಆರಾಧನಾ ಮಹೋತ್ಸವ

ನಗರದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀರಾಘವೇಂದ್ರ ಗುರುಸಾರ್ವಭೌಮರ 347ನೇ ಆರಾಧನಾ ಪಂಚರಾತ್ರೋತ್ಸವದ ಮಧ್ಯಾರಾಧನೆæ ಪ್ರಯುಕ್ತ ಮಂಗಳವಾರ ನಾನಾ ಪೂಜಾ ಕಾರ್ಯಕ್ರಮ ನಡೆದವು.

Vijaya Karnataka 29 Aug 2018, 5:00 am
ಚಿತ್ರದುರ್ಗ : ನಗರದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀರಾಘವೇಂದ್ರ ಗುರುಸಾರ್ವಭೌಮರ 347ನೇ ಆರಾಧನಾ ಪಂಚರಾತ್ರೋತ್ಸವದ ಮಧ್ಯಾರಾಧನೆæ ಪ್ರಯುಕ್ತ ಮಂಗಳವಾರ ನಾನಾ ಪೂಜಾ ಕಾರ್ಯಕ್ರಮ ನಡೆದವು.
Vijaya Karnataka Web roys worship jubilee
ರಾಯರ ಆರಾಧನಾ ಮಹೋತ್ಸವ


ಬೆಳಗ್ಗೆಯಿಂದ ರಾಯರ ಪಾದಪೂಜೆ, ಕನಕ ಮಹಾಪೂಜೆ, ತುಳಸಿ ಅರ್ಚನೆ, ಪಂಚಾಮೃತ ಅಭಿಷೇಕ, ಅಲಂಕಾರ ಸೇವಾ ಕಾರ್ಯಗಳು ನಡೆದವು. ರಾಯರ ಬೃಂದಾವನಕ್ಕೆ ನಾನಾ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು.

ಆರಾಧನಾ ನಿಮಿತ್ತ ಬೆಳಗ್ಗೆ 5ಕ್ಕೆ ಸುಪ್ರಭಾತ, ಮಂಗಳವಾದ್ಯ, 5.30ರಿಂದ ನಿರ್ಮಾಲ್ಯ ವಿಸರ್ಜನೆ, 7ಕ್ಕೆ ಹರಿವಾಯುಸ್ತುತಿ, ಶ್ರೀರಾಘವೇಂದ್ರ ಸ್ತೋತ್ರ ಪಾರಾಯಣ ಸಹಿತ ಫಲ ಪಂಚಾಮೃತ ಅಭಿಷೇಕ, 9.30ರಿಂದ ಪಾದಪೂಜೆ, ಕನಕಾಭಿಷೇಕ, ಮಹಾನೈವೇದ್ಯ, ಅಲಂಕಾರ, ಹಸ್ತೋದಕ, ಮಹಾಮಂಗಳಾರತಿ ನಡೆದವು.

ಸಂಜೆ 5.30ಕ್ಕೆ ಎಸ್‌.ಗುರುರಾಜ್‌ ಅವರಿಂದ ವೇಣು ವಾದನ ಕಾರ್ಯಕ್ರಮ ನಡೆಯಿತು. ಸಂಜೆ 6.30ಕ್ಕೆ ಪ್ರಾಕಾರ ರಥೋತ್ಸವದಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು. ನಂತರ ಅಷ್ಟಾವಧಾನ ಮಹಾಮಂಗಳಾರತಿ ನಡೆಯಿತು. ಆ.29ರಂದು ಬೆಳಗ್ಗೆ 9ಕ್ಕೆ ನಗರದ ರಾಜಬೀದಿಗಳಲ್ಲಿ ಮಹಾರಥೋತ್ಸವ ಜರುಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ