ಆ್ಯಪ್ನಗರ

ಉದ್ಯಮಿಗೆ ಚಾಕುವಿನಿಂದ ತಿವಿದು 25 ಲಕ್ಷ ರೂ. ದರೋಡೆ

ಗುಟ್ಕಾ ಹಾಗೂ ಸಂಬಾರ ಪದಾರ್ಥಗಳ ಹೋಲ್‌ಸೇಲ್‌ ವ್ಯಾಪಾರ ಮಾಡುತ್ತಿದ್ದ ಉದ್ಯಮಿಗೆ ಮೂವರು ದುಷ್ಕರ್ಮಿಗಳು ಚಾಕುವಿನಿಂದ ತಿವಿದು ಆತನಲ್ಲಿದ್ದ 25 ಲಕ್ಷ ರೂ. ದರೋಡೆ ಮಾಡಿಕೊಂಡು ಹೋದ ಘಟನೆ ಸೋಮವಾರ ತಡರಾತ್ರಿ ನಗರದ ಸಂಜೀವಿನಿ ಆಸ್ಪತ್ರೆ ಬಳಿಯಿರುವ ಜಯನಗರ ಬಡಾವಣೆಯಲ್ಲಿ ನಡೆದಿದೆ.

Vijaya Karnataka 5 Jun 2019, 5:00 am
ಹಿರಿಯೂರು : ಗುಟ್ಕಾ ಹಾಗೂ ಸಂಬಾರ ಪದಾರ್ಥಗಳ ಹೋಲ್‌ಸೇಲ್‌ ವ್ಯಾಪಾರ ಮಾಡುತ್ತಿದ್ದ ಉದ್ಯಮಿಗೆ ಮೂವರು ದುಷ್ಕರ್ಮಿಗಳು ಚಾಕುವಿನಿಂದ ತಿವಿದು ಆತನಲ್ಲಿದ್ದ 25 ಲಕ್ಷ ರೂ. ದರೋಡೆ ಮಾಡಿಕೊಂಡು ಹೋದ ಘಟನೆ ಸೋಮವಾರ ತಡರಾತ್ರಿ ನಗರದ ಸಂಜೀವಿನಿ ಆಸ್ಪತ್ರೆ ಬಳಿಯಿರುವ ಜಯನಗರ ಬಡಾವಣೆಯಲ್ಲಿ ನಡೆದಿದೆ.
Vijaya Karnataka Web rs 25 lakh to be eaten by a knife robbery
ಉದ್ಯಮಿಗೆ ಚಾಕುವಿನಿಂದ ತಿವಿದು 25 ಲಕ್ಷ ರೂ. ದರೋಡೆ


ನಗರದ ಕೃಷ್ಣರಾಜೇಂದ್ರ ಗ್ರಂಥಾಲಯ ಹತ್ತಿರವಿರುವ ಜಯನಗರದ 5ನೇ ಕ್ರಾಸ್‌ ವಾಸಿ ಉದ್ಯಮಿ ವಲಿಸಾಬ್‌(63)ಹಲ್ಲೆಗೊಳಗಾದಾತ.

ಇವರು ಸೋಮವಾರ ಮಧ್ಯಾಹ್ನ ಹೊಸದುರ್ಗಕ್ಕೆ ಗುಟ್ಕಾ ವ್ಯಾಪಾರದ ಬಾಕಿ ವಸೂಲಿಗಾಗಿ ತೆರಳಿದ್ದರು. ಹಣ ಸಂಗ್ರಹಿಸಿಕೊಂಡು ಖಾಸಗಿ ಬಸ್‌ ಮೂಲಕ ಹಿರಿಯೂರಿಗೆ ರಾತ್ರಿ ಸುಮಾರು 8 ಗಂಟೆಗೆ ವಾಪಸ್‌ ಬಂದಿದ್ದಾರೆ. ನಗರದ ಖಾಸಗಿ ಬಸ್‌ ನಿಲ್ದಾಣದಿಂದ ಆಟೋದಲ್ಲಿ ಮನೆಗೆ ಬಂದು ಇಳಿಯುತ್ತಿದ್ದಾಗ ಮೂವರು ದುಷ್ಕರ್ಮಿಗಳು ಪಲ್ಸರ್‌ ಬೈಕ್‌ನಿಂದ ಹಿಂಬಾಲಿಸಿಕೊಂಡು ಬಂದು ಚಾಕುವಿನಿಂದ ವಲಿಸಾಬ್‌ಗೆ ತಿವಿದು 25 ಲಕ್ಷ ರೂ ಹಣವಿರುವ ಬ್ಯಾಗನ್ನು ಕಿತ್ತುಕೊಂಡು ಪರಾರಿ ಆಗಿದ್ದಾರೆ.

ತೀವ್ರ ಗಾಯಗೊಂಡಿದ್ದ ವಲಿಸಾಬ್‌ನನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳಿಸಲಾಗಿದೆ. ದುಷ್ಕರ್ಮಿಗಳು ಪರಾರಿಯಾಗಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ನಡೆದ ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಲಿಸಾಬ್‌ ನಗರದಲ್ಲಿ ಸುಮಾರು ವರ್ಷಗಳಿಂದ ಹೋಲ್‌ ಸೇಲ್‌ ವ್ಯಾಪಾರ ಮಾಡುತ್ತಿದ್ದರು. ಹಿರಿಯೂರು, ಹೊಸದುರ್ಗ ಹೋಲ್‌ ಸೇಲ್‌ ಡೀಲರ್‌ಶಿಫ್‌ ತಗೆದುಕೊಂಡಿದ್ದು ನಗರಗಳಲ್ಲಿ ವಿವಿಧ ಕಿರಾಣಿ ಅಂಗಡಿಗಳಿಗೆ ಮಾರಾಟ ಮಾಡಿ ವಾರ ಅಥವಾ 15ದಿನಗಳಿಗೊಮ್ಮೆ ಹಣ ವಸೂಲಿ ಮಾಡಿಕೊಂಡು ಬರುತ್ತಿದ್ದರು. ಅದರಂತೆ ಸೋಮವಾರ ಹೊಸದುರ್ಗಕ್ಕೆ ಹೋಗಿ ಹಣ ವಸೂಲಿ ಮಾಡಿಕೊಂಡು ಬರುವ ವೇಳೆಯಲ್ಲಿ ಈ ಘಟನೆ ಸಂಭವಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ