ಆ್ಯಪ್ನಗರ

ಜಿಲ್ಲಾ ಮಟ್ಟದ ಭೌತವಿಜ್ಞಾನ ಕಾರ್ಯಾಗಾರಕ್ಕೆ ಚಾಲನೆ

ಆಧುನಿಕ ಸಾಧನ ಸಲಕರಣೆ ಬಳಕೆಯಿಂದ ಭೌತವಿಜ್ಞಾನ ವಿಷಯ ಬೋಧಿಸಿದಾಗ ಮಾತ್ರ ವಿದ್ಯಾರ್ಥಿಗಳು ಸುಲಭವಾಗಿ ಅರ್ಥೈಸಿಕೊಳ್ಳಲು ಸಾಧ್ಯ ಎಂದು ಭಾರತೀಯ ಭೌತವಿಜ್ಞಾನ ಸಂಸ್ಥೆ ಹಿರಿಯ ವಿಜ್ಞಾನಿ ಪ್ರೊ.ರವೀಂದರ್‌ ಕುಮಾರ್‌ ಬನಿಯಾಲ್‌ ತಿಳಿಸಿದರು.

Vijaya Karnataka 30 Nov 2018, 5:00 am
ಚಿತ್ರದುರ್ಗ : ಆಧುನಿಕ ಸಾಧನ ಸಲಕರಣೆ ಬಳಕೆಯಿಂದ ಭೌತವಿಜ್ಞಾನ ವಿಷಯ ಬೋಧಿಸಿದಾಗ ಮಾತ್ರ ವಿದ್ಯಾರ್ಥಿಗಳು ಸುಲಭವಾಗಿ ಅರ್ಥೈಸಿಕೊಳ್ಳಲು ಸಾಧ್ಯ ಎಂದು ಭಾರತೀಯ ಭೌತವಿಜ್ಞಾನ ಸಂಸ್ಥೆ ಹಿರಿಯ ವಿಜ್ಞಾನಿ ಪ್ರೊ.ರವೀಂದರ್‌ ಕುಮಾರ್‌ ಬನಿಯಾಲ್‌ ತಿಳಿಸಿದರು.
Vijaya Karnataka Web science is becoming a discovery of xenophobia
ಜಿಲ್ಲಾ ಮಟ್ಟದ ಭೌತವಿಜ್ಞಾನ ಕಾರ್ಯಾಗಾರಕ್ಕೆ ಚಾಲನೆ


ನಗರದ ಐತಿಹಾಸಿಕ ಕೋಟೆ ಮುಂಭಾಗದ ಮಯೂರ ಯಾತ್ರಿನಿವಾಸದಲ್ಲಿ ತಾರಾಮಂಡಲ, ಬೆಂಗಳೂರಿನ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿ, ಸಾರ್ವಜನಿಕ ಶಿಕ್ಷ ಣ ಇಲಾಖೆ ಆಶ್ರಯದಲ್ಲಿ ಪ್ರೌಢಶಾಲಾ ವಿಜ್ಞಾನ ಶಿಕ್ಷ ಕರಿಗೆ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಭೌತವಿಜ್ಞಾನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ವಿಜ್ಞಾನ, ತಂತ್ರಜ್ಞಾನ ಕ್ಷ ಣ ಕ್ಷ ಣಕ್ಕೂ ಆವಿಷ್ಕಾರಗೊಳುತ್ತಿದೆ. ಹಾಗಾಗಿ ಶಿಕ್ಷ ಕರು ಸಾಂಪ್ರದಾಯಿಕ ಪದ್ಧತಿಯಂತೆ ಬೋಧಿಸುವ ಬದಲಾಗಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಚಟುವಟಿಕೆಗಳ ಮೂಲಕ ಬೋಧಿಸಬೇಕು ಎಂದು ಸಲಹೆ ನೀಡಿದರು.

ಶಿಕ್ಷ ಕರು ನಿತ್ಯದ ಬೆಳವಣಿಗೆ ತಿಳಿದುಕೊಳ್ಳಬೇಕು. ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಅರಿತುಕೊಳ್ಳಬೇಕು. ತರಗತಿಗೆ ಹೋಗುವ ಮೊದಲು ಬೋಧನೆಗೆ ಅಗತ್ಯವಾಗಿ ಬೇಕಾದ ಪೂರಕ ಆಟಿಕೆ, ಪ್ರಯೋಗದ ಮಾದರಿ ಸಿದ್ಧಪಡಿಸಿಕೊಳ್ಳಬೇಕು. ಆಗ ಮಾತ್ರ ಪರಿಣಾಮಕಾರಿ ಬೋಧನೆ ಸಾಧ್ಯ ಎಂದು ಹೇಳಿದರು.

ವಿಜ್ಞಾನ ತಂತ್ರಜ್ಞಾನ ಯುಗದ ಇಂದಿನ ದಿನಮಾನದಲ್ಲಿ ಭೌತಶಾಸ್ತ್ರದ ಬಗ್ಗೆ ಅಧ್ಯಯನ, ಸಂಶೋಧನೆ ಕೈಗೊಳ್ಳಲು ಸಾಕಷ್ಟು ಅವಕಾಶಗಳಿವೆ. ಶಿಕ್ಷ ಕರು ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಿ ಅವರನ್ನು ಪ್ರೋತ್ಸಾಹಿಸಬೇಕು ಎಂದರು.

ವಿಜ್ಞಾನದ ಗ್ರಾಹಕರಾದ ನಾವು ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಯಾವುದೇ ಅನ್ವೇಷಣೆ ಕೈಗೊಂಡಾಗ ವಿಜ್ಞಾನಿಗಳಿಗೆ ಪೂರಕ ವಾತಾವರಣ ಸೃಷ್ಟಿಸುವಲ್ಲಿ ಹಿಂದೆ ಬಿದ್ದಿದ್ದೇವೆ. ಇನ್ನು ಮುಂದಾದರೂ ಎಚ್ಚೆತ್ತು ವಿಜ್ಞಾನ ಅರ್ಥ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.

ಸಮಾಜದಲ್ಲಿ ಇಂದು ವಿಜ್ಞಾನದ ಹೆಸರಲ್ಲಿ ಮೌಢ್ಯ ಬಿತ್ತುವ ಕೆಲಸವಾಗುತ್ತಿದೆ. ಇದು ಸುಳ್ಳು ಎಂದು ತಿಳಿದಿದ್ದರು ಸಹ ಅನೇಕ ಮುಗ್ಧ ಜೀವಗಳು ಬಲಿಯಾಗುತ್ತಿವೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ವೈಜ್ಞಾನಿಕವಾಗಿ ಸತ್ಯ, ನೈಜತೆ ಅರಿಯುವಂತೆ ಮಕ್ಕಳನ್ನು ಸಜ್ಜುಗೊಳಿಸಬೇಕು ಎಂದು ಸಲಹೆ ನೀಡಿದರು.

ಪದನಿಮಿತ್ತ ಸಹನಿರ್ದೇಶಕ ಎಂ.ರೇವಣಸಿದ್ದಪ್ಪ ಮಾತನಾಡಿ, ವಿಜ್ಞಾನ ಕಷ್ಟದ ವಿಷಯ. ಅದನ್ನು ಸರಳೀಕರಿಸಿ ಮಕ್ಕಳಿಗೆ ಕಲಿಸಬೇಕು. ಮೂಲ ವಿಜ್ಞಾನ ತಿಳಿಯಲು ಈ ರೀತಿಯ ಕಾರ್ಯಾಗಾರಗಳು ಹೆಚ್ಚು ಸಹಕಾರಿಯಾಗಿವೆ. ನಾವ್ಯಾರು ಪರಿಪೂರ್ಣ ಅಲ್ಲ, ನಮ್ಮ ಗುರಿ ಉತ್ತಮ ಫಲಿತಾಂಶದ ಕಡೆ ಇರಬೇಕು. ಕಷ್ಟವಾಗಿರುವುದನ್ನು ಸರಳವಾಗಿ ಬೋಧನೆ ಮಾಡುವುದೇ ಉತ್ತಮ ಶಿಕ್ಷ ಕರ ಲಕ್ಷಣ ಎಂದರು.

ಬಿಇಒ ಎಸ್‌.ನಾಗಭೂಷಣ್‌ ಮಾತನಾಡಿ, ವಿಜ್ಞಾನ ಶಿಕ್ಷ ಕರು ಹೆಚ್ಚೆಚ್ಚು ಜ್ಞಾನ ಹೊಂದುವ ಇಂಥ ಕಾರ್ಯಾಗಾರಗಳು ತುಂಬಾ ಅನುಕೂಲ ಆಗಲಿವೆ. ತಾವು ಹೆಚ್ಚು ಆಸಕ್ತಿಯಿಂದ ವಿದ್ಯಾರ್ಥಿಗಳಿಗೆ ಕಲಿಸಬೇಕು ಎಂದು ಹೇಳಿದರು.

ಭೌತ ವಿಜ್ಞಾನ ಬೋಧನೆಯ ಪ್ರೇರಕ ಅಂಶಗಳ ಬಗ್ಗೆ ಬೆಂಗಳೂರಿನ ಭೌತವಿಜ್ಞಾನ ಸಂವಹನಕಾರ ಡಾ.ಚಂದ್ರಕಾಂತ್‌, ಭೌತಶಾಸ್ತ್ರದ ಇತಿಹಾಸದ ಬಗ್ಗೆ ಭೌತವಿಜ್ಞಾನ ಸಂವಹನಕಾರ ಪ್ರೊ.ಮಂಜುನಾಥ್‌, ನಮ್ಮ ಭೌತಿಕ ಜಗತ್ತಿನ ಬಗ್ಗೆ ಹವ್ಯಾಸಿ ಖಗೋಳ ವೀಕ್ಷ ಕ ಎಚ್‌.ಎಸ್‌.ಟಿ.ಸ್ವಾಮಿ ಉಪನ್ಯಾಸ ನೀಡಿದರು. ಆಸ್ಕರ್‌ ಪ್ರಶಸ್ತಿ ಪುರಸ್ಕೃತ ಗ್ರಾವಿಟಿ ವಿಜ್ಞಾನ ಚಲನಚಿತ್ರವನ್ನು ಶಿಕ್ಷ ಕರು ವೀಕ್ಷಿಸಿದರು.

ತಾರಾ ಮಂಡಲದ ಚಳ್ಳಕೆರೆ ಯರ್ರಿಸ್ವಾಮಿ, ಭೌತವಿಜ್ಞಾನ ಸಂವಹನಕಾರ ಡಾ.ಚಂದ್ರಕಾಂತ್‌, ಸಾರ್ವಜನಿಕ ಶಿಕ್ಷ ಣ ಇಲಾಖೆಯ ಗಣಿತ ವಿಷಯ ಪರಿವೀಕ್ಷ ಕಿ ಎಸ್‌.ಟಿ.ಸವಿತ, ವಿಜ್ಞಾನ ಪರಿವೀಕ್ಷ ಕ ಎಚ್‌.ಗೋವಿಂದಪ್ಪ ಮತ್ತಿತರರು ಉಪಸ್ಥಿತರಿದ್ದರು.

ಚಿತ್ರದುರ್ಗ ತಾಲೂಕಿನಿಂದ 20, ಜಿಲ್ಲೆಯ ಉಳಿದ ಐದು ತಾಲೂಕುಗಳಿಂದ ತಲಾ 8ರಂತೆ ಒಟ್ಟು 60 ಆಯ್ದ ಭೌತವಿಜ್ಞಾನ ಶಿಕ್ಷ ಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ