ಆ್ಯಪ್ನಗರ

ಸ್ಕೌಟ್ಸ್‌, ಗೈಡ್ಸ್‌ ಸಂಸ್ಥೆಯ ಮೌಲ್ಯ ಅಳವಡಿಸಿಕೊಳ್ಳಿ

ಉತ್ತಮ ಹಿನ್ನೆಲೆ ಹಾಗೂ ಶೈಕ್ಷ ಣಿಕ ವಿಷಯ ಹೊಂದಿರುವ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆಗೆ ಸರಿಸಾಟಿಯಾದ ಸಂಸ್ಥೆ ಜಗತ್ತಿನಲ್ಲಿ ಬೇರೆ ಯಾವುದು ಇಲ್ಲ ಎಂದು ಕ್ಷೇತ್ರ ಶಿಕ್ಷ ಣಾಧಿಕಾರಿ ಎಸ್‌.ನಾಗಭೂಷಣ್‌ ಹೇಳಿದರು.

Vijaya Karnataka 27 Sep 2018, 5:00 am
ಚಿತ್ರದುರ್ಗ : ಉತ್ತಮ ಹಿನ್ನೆಲೆ ಹಾಗೂ ಶೈಕ್ಷ ಣಿಕ ವಿಷಯ ಹೊಂದಿರುವ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆಗೆ ಸರಿಸಾಟಿಯಾದ ಸಂಸ್ಥೆ ಜಗತ್ತಿನಲ್ಲಿ ಬೇರೆ ಯಾವುದು ಇಲ್ಲ ಎಂದು ಕ್ಷೇತ್ರ ಶಿಕ್ಷ ಣಾಧಿಕಾರಿ ಎಸ್‌.ನಾಗಭೂಷಣ್‌ ಹೇಳಿದರು.
Vijaya Karnataka Web scouts guides instalar organization value
ಸ್ಕೌಟ್ಸ್‌, ಗೈಡ್ಸ್‌ ಸಂಸ್ಥೆಯ ಮೌಲ್ಯ ಅಳವಡಿಸಿಕೊಳ್ಳಿ


ನಗರದ ಚಿತ್ರ ಡಾನ್‌ಬೋಸ್ಕೊ ತರಬೇತಿ ಕೇಂದ್ರದಲ್ಲಿ ಭಾರತ್‌ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಕರ್ನಾಟಕ ಸ್ಥಳೀಯ ಸಂಸ್ಥೆಯಿಂದ ತಾಲೂಕಿನ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗಾಗಿ ಮೂರು ದಿನಗಳ ಕಾಲ ಆಯೋಜಿಸಿರುವ ದ್ವಿತೀಯ ಸೋಪಾನ ಶಿಬಿರ ಹಾಗೂ ಪರೀಕ್ಷಾ ತರಬೇತಿ ಉದ್ಘಾಟಿಸಿ ಮಾತನಾಡಿದರು.

126 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಸಂಸ್ಥೆಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸ್ವಾವಲಂಬಿ ಹಾಗೂ ಪರೋಪಕಾರಿಗಳಾಗಿ ಬದುಕಿ ಎಂದರು.

ಗೈಡ್ಸ್‌ ಜಿಲ್ಲಾ ಆಯುಕ್ತೆ ಸುನೀತಾ ಮಲ್ಲಿಕಾರ್ಜುನ್‌ ಮಾತನಾಡಿ, ಯುವಜನಾಂಗ ಹಾಗೂ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಮಾನವೀಯ ಮೌಲ್ಯಗಳು ಕಡಿಮೆ ಆಗುತ್ತಿರುವುದು ಆತಂಕಕಾರಿ ವಿಷಯ. ಚಿಕ್ಕಂದಿನಲ್ಲೇ ಇಂತಹ ಸಂಸ್ಥೆಗಳಲ್ಲಿ ತರಬೇತಿ ಪಡೆದು ಗುರು, ಹಿರಿಯರನ್ನು ಗೌರವಿಸುವ ಸಂಸ್ಕಾರ ಬೆಳೆಸಿಕೊಳ್ಳಿ ಎಂದರು.

ಉತ್ತಮ ತರಬೇತಿ ಮೂಲಕ ನೀವುಗಳು ರಾಜ್ಯ ಪುರಸ್ಕಾರ ಪಡೆದುಕೊಂಡು ಚಿತ್ರದುರ್ಗ ತಾಲೂಕಿಗೆ ಒಳ್ಳೆಯ ಕೀರ್ತಿ ತರುವ ಮೂಲಕ ಎಲ್ಲರೂ ಮೆಚ್ಚುವಂತ ವ್ಯಕ್ತಿತ್ವ ರೂಢಿಸಿಕೊಳ್ಳಿ ಎಂದರು.

ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಸ್ಥಳೀಯ ಸಂಸ್ಥೆ ಉಪಾಧ್ಯಕ್ಷ ಡಾ.ರಹಮತ್‌ವುಲ್ಲಾ ಅಧ್ಯಕ್ಷ ತೆ ವಹಿಸಿದ್ದರು. ಫಾದರ್‌ ಸೋನಿ, ಸ್ಕೌಟ್ಸ್‌ ಜಿಲ್ಲಾ ಆಯುಕ್ತ ಚಳ್ಳಕೆರೆ ಯರ್ರಿಸ್ವಾಮಿ, ಡಯಟ್‌ನ ಉಪನ್ಯಾಸಕಿ ಕನಕಲಕ್ಷ್ಮಿ, ಸಂಸ್ಥೆಯ ಉಪಾಧ್ಯಕ್ಷೆ ಡಾ.ಬಿ.ಜಯಮ್ಮ, ಶಿಬಿರದ ನಾಯಕರಾದ ಡಿ.ಬಸವರಾಜ್‌, ವಿಜಯ್‌, ಮಧುಶ್ರೀ, ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಪಿ.ವೈ.ದೇವರಾಜ್‌ಪ್ರಸಾದ್‌ ಇದ್ದರು.

ನಾನಾ ಶಾಲೆಗಳ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ