ಆ್ಯಪ್ನಗರ

ಪ್ರತ್ಯೇಕ ಅಪಘಾತ: ಇಬ್ಬರ ಸಾವು

ತಾಲೂಕಿನಲ್ಲಿ ಪಿಟ್ಲಾಲಿ ಹಾಗೂ ಹೇಮದಳ ಗ್ರಾಮಗಳ ಬಳಿ ಭಾನುವಾರ ನಡೆದ ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಬೈಕ್‌ ಸವಾರರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.

Vijaya Karnataka 10 Dec 2018, 6:34 pm
ಹಿರಿಯೂರು: ತಾಲೂಕಿನಲ್ಲಿ ಪಿಟ್ಲಾಲಿ ಹಾಗೂ ಹೇಮದಳ ಗ್ರಾಮಗಳ ಬಳಿ ಭಾನುವಾರ ನಡೆದ ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಬೈಕ್‌ ಸವಾರರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.
Vijaya Karnataka Web separate accident two deaths
ಪ್ರತ್ಯೇಕ ಅಪಘಾತ: ಇಬ್ಬರ ಸಾವು


ಉಪ್ಪಳಗೆರೆ ಗ್ರಾಮದ ಪ್ರದೀಪ್‌ಕುಮಾರ್‌(24) ಹಾಗೂ ಹೇಮದಳ ಗ್ರಾಮದ ವಾಸಿ ಮಂಜುನಾಥ್‌ (35) ಮತಪಟ್ಟ ಬೈಕ್‌ ಸವಾರರು. ಪಿಟ್ಲಾಲಿ ಗ್ರಾಮದ ರಾಧಮ್ಮ ಹೊಟೇಲ್‌ ಹತ್ತಿರ ಬೈಕ್‌ಗಳ ನಡುವೆ ಪರಸ್ಪರ ಡಿಕ್ಕಿಯಾಗಿ ಬೈಕ್‌ ಸವಾರ ಪ್ರದೀಪ್‌ಕುಮಾರ್‌ ಮೃತಪಟ್ಟಿದ್ದಾನೆ. ಮತ್ತೊಂದು ಬೈಕ್‌ ಸವಾರ ರಾಮಕೃಷ್ಣಪ್ಪ(55) ಮೃತಪಟ್ಟಿದ್ದಾನೆ. ಹೇಮದಳ ಗ್ರಾಮದ ರಸ್ತೆಯಲ್ಲಿ ಅತಿ ವೇಗವಾಗಿ ಹೋಗುತ್ತಿದ್ದ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಮಂಜುನಾಥ್‌ (35) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪ್ರಕಾಶ್‌ ಎಂಬವರು ಗಾಯಗೊಂಡಿದ್ದಾರೆ. ಹಿರಿಯೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಉಭಯ ಕೇಸು ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ