ಆ್ಯಪ್ನಗರ

ಸಚಿವ ಮಾಧುಸ್ವಾಮಿ ವಜಾಕ್ಕೆ ಕುರುಬರ ಸಂಘ ಆಗ್ರಹ

ಕೆಲ್ಲೋಡು ಕನಕ ಗುರುಪೀಠದ ಶ್ರೀಈಶ್ವರಾನಂದಪುರಿ ಸ್ವಾಮೀಜಿ ಅವರ ಜತೆ ಅನುಚಿತ ವರ್ತನೆ ತೋರಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ತಾಲೂಕು ಹಾಲುಮತ ಮಹಾಸಭಾ ಹಾಗೂ ಕುರುಬರ ಸಂಘದಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

Vijaya Karnataka 22 Nov 2019, 5:00 am
ಹಿರಿಯೂರು: ಕೆಲ್ಲೋಡು ಕನಕ ಗುರುಪೀಠದ ಶ್ರೀಈಶ್ವರಾನಂದಪುರಿ ಸ್ವಾಮೀಜಿ ಅವರ ಜತೆ ಅನುಚಿತ ವರ್ತನೆ ತೋರಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ತಾಲೂಕು ಹಾಲುಮತ ಮಹಾಸಭಾ ಹಾಗೂ ಕುರುಬರ ಸಂಘದಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
Vijaya Karnataka Web shepherds association demands dismissal of minister madhuswamy
ಸಚಿವ ಮಾಧುಸ್ವಾಮಿ ವಜಾಕ್ಕೆ ಕುರುಬರ ಸಂಘ ಆಗ್ರಹ


ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ನಗರದ ಕನಕದಾಸರ ಸರ್ಕಲ್‌ ಮರು ನಾಮಕರಣ ವಿಚಾರದಲ್ಲಿಉಂಟಾದ ಗೊಂದಲ ನಿವಾರಣೆಗೆ ನಡೆದ ಶಾಂತಿಸಭೆಯಲ್ಲಿಶ್ರೀಈಶ್ವರಾನಂದಪುರಿ ಸ್ವಾಮೀಜಿ, ಸಮುದಾಯದ ಹಿರಿಯರು ಭಾಗವಹಿಸಿದ್ದರು. ಸಭೆಯಲ್ಲಿಜವಾಬ್ದಾರಿಯುತ ಸಚಿವರಾದವರು ಸೌಜನ್ಯದಿಂದ ವರ್ತಿಸದೆ ಶ್ರೀಗಳಿಗೆ ಗೌರವ ನೀಡಿಲ್ಲ. ಸಚಿವರು ನ್ಯಾಯ ಒದಗಿಸದೆ ತಾರತಮ್ಯ ಮಾಡಿದ್ದಾರೆ. ಸ್ವಾಮೀಜಿ ಅವರಿಗೆ ಏರುಧ್ವನಿಯಲ್ಲಿಏಕವಚನದಲ್ಲಿಮಾತನಾಡಿರುವುದು ಖಂಡನೀಯ. ಆದ್ದರಿಂದ ಸ್ವಾಮೀಜಿ ಅವರ ಕ್ಷಮೆಯಾಚಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರದೇಶ ಕುರುಬರ ಸಂಘದ ರಾಜ್ಯ ನಿರ್ದೇಶಕ ಕಂದಿಕೆರೆ ಸುರೇಶಬಾಬು, ತಾಲೂಕು ಕುರುಬ ಸಂಘದ ಅಧ್ಯಕ್ಷ ಹರ್ತಿಕೋಟೆ ಮಹಾಂತೇಶ್‌, ಹಾಲುಮತ ಮಹಾಸಭಾ ಜಿಲ್ಲಾಧ್ಯಕ್ಷ ಬಿ.ಟಿ.ಜಗದೀಶ್‌, ರಾಜ್ಯ ಸಂಚಾಲಕ ಮಾಲತೇಶ್‌ ಅರಸ್‌, ಜಿಲ್ಲಾಪ್ರಧಾನ ಸಂಚಾಲಕ ಎಸ್‌.ಬಿ.ಗಣೇಶ್‌, ತಾಲೂಕು ಅಧ್ಯಕ್ಷ ಶ್ರೀನಿವಾಸ್‌, ನಿಶಾಶಂಕರ್‌, ಜಯರಾಂ, ರಾಮಚಂದ್ರಪ್ಪ, ತಿಮ್ಮಣ್ಣ, ಸೋಮಶೇಖರ್‌, ಕೆಂಪಣ್ಣ, ಪುಟ್ಟರಾಜು ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ