ಚಿತ್ರದುರ್ಗ : ನಗರದ ಶ್ರೀ ಸದ್ಗುರು ಕಬೀರಾನಂದ ಮಠದಲ್ಲಿ ನಡೆಯುತ್ತಿರುವ 89ನೇ ಮಹಾಶಿವರಾತ್ರಿ ಮಹೋತ್ಸವದ ಪ್ರಯುಕ್ತ ಸೋಮವಾರ ಶ್ರೀ ಶಿವಲಿಂಗಾನಂದ ಸ್ವಾಮೀಜಿಯ ಪಲ್ಲಕ್ಕಿ ಉತ್ಸವ ಹಾಗೂ ಜನಪದ ಉತ್ಸವ ಅದ್ಧೂರಿಯಾಗಿ ನೆರವೇರಿತು.
ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿ ಪಲ್ಲಕ್ಕಿ ಉತ್ಸವ ಹಾಗೂ ಜನಪದ ಉತ್ಸವಕ್ಕೆ ಕರಡಿ ಚಮ್ಮಾಳ ಬಾರಿಸಿ ಚಾಲನೆ ನೀಡಿದರು. ಟ್ರ್ಯಾಕ್ಟರ್ನಲ್ಲಿ ಇರಿಸಲಾಗಿದ ಪಲ್ಲಕ್ಕಿಯನ್ನು ನಾನಾ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಪಲ್ಲಕ್ಕಿಯಲ್ಲಿ ಶಿವಲಿಂಗಾನಂದ ಸ್ವಾಮೀಜಿ ಆಸಿನರಾಗಿ ಮೆರವಣಿಗೆಯಲ್ಲಿ ಸಾಗಿದರು.
ಮೆರವಣಿಗೆಯಲ್ಲಿ ಕಿಲುಕುದುರೆ, ಕಮಟೆ, ಕಿನ್ನರಿಜೋಗಿ, ಲಂಬಾಣಿ ನೃತ್ಯ, ಖಾಸಾಬೇಡರ ಪಡೆ, ಡೊಳ್ಳು ಕುಣಿತ, ಭಜನೆ, ಶಾರದ ಬ್ರಾಸ್ ಬ್ಯಾಂಡ್ನಿಂದ ವಾದ್ಯಗೋಷ್ಠಿ ನೋಡುಗರನ್ನು ಸೆಳೆದವು. ರಸ್ತೆಯ ಎರಡು ಇಕ್ಕೆಲ್ಲಗಳಲ್ಲಿ ಜನ ನಿಂತು ಮೆರವಣಿಗೆ ಕಣ್ಣು ತುಂಬಿಕೊಂಡರು. ಭಕ್ತರು ಶಿವಲಿಂಗಾನಂದ ಸ್ವಾಮೀಜಿಯ ಪಲ್ಲಕ್ಕಿ ತಮ್ಮ ಮನೆಗಳ ಮುಂದೆ ಬರುತ್ತಿದಂತೆ ಹೂ ಹಣ್ಣುಗಳನ್ನು ನೀಡಿ ಭಕ್ತಿ ಅರ್ಪಿಸಿದರು.
ಶ್ರೀ ಮಠದಿಂದ ಪ್ರಾರಂಭವಾದ ಮೆರವಣಿಗೆ ಚಿಕ್ಕಪೇಟೆ, ದೊಟ್ಟಪೇಟೆ, ಕೋಟೆ ರಸ್ತೆ, ಆನೆ ಬಾಗಿಲು, ಗಾಂಧಿ ವೃತ್ತದ ಮಾರ್ಗ ಬಿಡಿ ರಸ್ತೆಯ ಮೈಸೂರು ಬ್ಯಾಂಕ್ ವೃತ್ತ, ಅಂಬೇಡ್ಕರ್ ವೃತ್ತ, ಮದಕರಿ ವೃತ್ತದ ಮೂಲಕ ಶ್ರೀ ಮಠಕ್ಕೆ ಮರಳಿತು.
ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿ ಪಲ್ಲಕ್ಕಿ ಉತ್ಸವ ಹಾಗೂ ಜನಪದ ಉತ್ಸವಕ್ಕೆ ಕರಡಿ ಚಮ್ಮಾಳ ಬಾರಿಸಿ ಚಾಲನೆ ನೀಡಿದರು. ಟ್ರ್ಯಾಕ್ಟರ್ನಲ್ಲಿ ಇರಿಸಲಾಗಿದ ಪಲ್ಲಕ್ಕಿಯನ್ನು ನಾನಾ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಪಲ್ಲಕ್ಕಿಯಲ್ಲಿ ಶಿವಲಿಂಗಾನಂದ ಸ್ವಾಮೀಜಿ ಆಸಿನರಾಗಿ ಮೆರವಣಿಗೆಯಲ್ಲಿ ಸಾಗಿದರು.
ಮೆರವಣಿಗೆಯಲ್ಲಿ ಕಿಲುಕುದುರೆ, ಕಮಟೆ, ಕಿನ್ನರಿಜೋಗಿ, ಲಂಬಾಣಿ ನೃತ್ಯ, ಖಾಸಾಬೇಡರ ಪಡೆ, ಡೊಳ್ಳು ಕುಣಿತ, ಭಜನೆ, ಶಾರದ ಬ್ರಾಸ್ ಬ್ಯಾಂಡ್ನಿಂದ ವಾದ್ಯಗೋಷ್ಠಿ ನೋಡುಗರನ್ನು ಸೆಳೆದವು. ರಸ್ತೆಯ ಎರಡು ಇಕ್ಕೆಲ್ಲಗಳಲ್ಲಿ ಜನ ನಿಂತು ಮೆರವಣಿಗೆ ಕಣ್ಣು ತುಂಬಿಕೊಂಡರು. ಭಕ್ತರು ಶಿವಲಿಂಗಾನಂದ ಸ್ವಾಮೀಜಿಯ ಪಲ್ಲಕ್ಕಿ ತಮ್ಮ ಮನೆಗಳ ಮುಂದೆ ಬರುತ್ತಿದಂತೆ ಹೂ ಹಣ್ಣುಗಳನ್ನು ನೀಡಿ ಭಕ್ತಿ ಅರ್ಪಿಸಿದರು.
ಶ್ರೀ ಮಠದಿಂದ ಪ್ರಾರಂಭವಾದ ಮೆರವಣಿಗೆ ಚಿಕ್ಕಪೇಟೆ, ದೊಟ್ಟಪೇಟೆ, ಕೋಟೆ ರಸ್ತೆ, ಆನೆ ಬಾಗಿಲು, ಗಾಂಧಿ ವೃತ್ತದ ಮಾರ್ಗ ಬಿಡಿ ರಸ್ತೆಯ ಮೈಸೂರು ಬ್ಯಾಂಕ್ ವೃತ್ತ, ಅಂಬೇಡ್ಕರ್ ವೃತ್ತ, ಮದಕರಿ ವೃತ್ತದ ಮೂಲಕ ಶ್ರೀ ಮಠಕ್ಕೆ ಮರಳಿತು.