ಆ್ಯಪ್ನಗರ

ಒನಕೆ ಓಬವ್ವ ಸಿನಿಮಾ ವೀಕ್ಷಿಸಿದ ಶ್ರೀಗಳು

ವೀರವನಿತೆ ಒನಕೆ ಓಬವ್ವಳ ಜೀವನ ಚರಿತ್ರೆ ಆಧರಿಸಿದ ಐತಿಹಾಸಿಕ ಚಲನಚಿತ್ರ ಚಿತ್ರದುರ್ಗ ಒನಕೆ ಓಬವ್ವ ಸಿನಿಮಾವನ್ನು ಡಾ.ಶಿವಮೂರ್ತಿ ಮುರುಘಾ ಶರಣರು ನಗರದ ಯೂನಿಯನ್‌ ಚಿತ್ರಮಂದಿರದಲ್ಲಿ ಶುಕ್ರವಾರ ವೀಕ್ಷಿಸಿದರು.

Vijaya Karnataka 22 Jun 2019, 5:00 am
ಚಿತ್ರದುರ್ಗ : ವೀರವನಿತೆ ಒನಕೆ ಓಬವ್ವಳ ಜೀವನ ಚರಿತ್ರೆ ಆಧರಿಸಿದ ಐತಿಹಾಸಿಕ ಚಲನಚಿತ್ರ ಚಿತ್ರದುರ್ಗ ಒನಕೆ ಓಬವ್ವ ಸಿನಿಮಾವನ್ನು ಡಾ.ಶಿವಮೂರ್ತಿ ಮುರುಘಾ ಶರಣರು ನಗರದ ಯೂನಿಯನ್‌ ಚಿತ್ರಮಂದಿರದಲ್ಲಿ ಶುಕ್ರವಾರ ವೀಕ್ಷಿಸಿದರು.
Vijaya Karnataka Web shrike who watched the movie onake
ಒನಕೆ ಓಬವ್ವ ಸಿನಿಮಾ ವೀಕ್ಷಿಸಿದ ಶ್ರೀಗಳು


ಈ ಸಂದರ್ಭದಲ್ಲಿ ತಿಪಟೂರಿನ ಶ್ರೀರುದ್ರಮುನಿ ಸ್ವಾಮೀಜಿ, ನಿರ್ದೇಶಕ ಪುರುಷೋತ್ತಮ್‌, ನಿರ್ಮಾಪಕ ಎ. ದೇವರಾಜ್‌, ಸಹ ನಿರ್ಮಾಪಕಿ ಹಾಗೂ ಚಿತ್ರದ ಹಿರಿಯ ಪೋಷಕ ನಟಿ ಪುಷ್ಪಸ್ವಾಮಿ, ಸಹ ನಟಿ ಸುಮಾ, ನಗರಸಭೆ ಮಾಜಿ ಅಧ್ಯಕ್ಷ ಎಚ್‌.ಸಿ. ನಿರಂಜನಮೂರ್ತಿ, ಚಿತ್ರಮಂದಿರ ಮಾಲೀಕ ಜಿ.ಪಿ. ಕುಮಾರ್‌, ವಾಸು, ಎಸ್‌ಜೆಎಂ ವಿದ್ಯಾಪೀಠದ ಕಾರ‍್ಯನಿರ್ವಹಣಾ ನಿರ್ದೇಶಕ ಡಾ.ಜಿ.ಎನ್‌. ಮಲ್ಲಿಕಾರ್ಜುನಪ್ಪಮತ್ತಿತರರು ಶ್ರೀಗಳೊಂದಿಗೆ ಕೆಲ ಹೊತ್ತು ಸಿನಿಮಾ ವೀಕ್ಷಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಡಾ.ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ದುರ್ಗದ ನಾಡು ಎಂದರೆ ಗಂಡುಮೆಟ್ಟಿನ, ಐತಿಹಾಸಿಕ ನಾಡು, ರಾಜ ಮಹಾರಾಜರು, ಹಿರಿಯ, ಕಿರಿಯ ಮದಕರಿ ನಾಯಕರು, ಭರಮಣ್ಣ ನಾಯಕರು ಆಳಿದ್ದಾರೆ. ಒಂದು ಹಂತದಲ್ಲಿ ಈ ಭಾಗವನ್ನ ಸಮೃದ್ಧಿ ಕಡೆಗೆ ತೆಗೆದುಕೊಂಡು ಹೋದ ಕೀರ್ತಿ ಅವರೆಲ್ಲರಿಗೂ ಸಲ್ಲುತ್ತದೆ ಎಂದರು.

ಏಳು ಸುತ್ತಿನ ಕೋಟೆ ಕಟ್ಟಿರುವುದೇ ಒಂದು ದೊಡ್ಡ ಇತಿಹಾಸ. ಇಂದಿನ ದಿನಮಾನಗಳಲ್ಲಿ ಅಂಥ ಕೋಟೆ ಕಟ್ಟಲು ಸಾಧ್ಯವೇ ಇಲ್ಲ. ಆ ಕೋಟೆಗೆ ಎಲ್ಲಿಲ್ಲದ ಆಕರ್ಷಣೆ, ಸಾಹಸದ ಕತೆಯನ್ನು ಒತ್ತಿ ಹೇಳುತ್ತದೆ. ಅಂಥ ಸಾಹಸಿಗರಲ್ಲಿ ಒನಕೆ ಓಬವ್ವ ಕೂಡ ಒಬ್ಬರು. ನಮ್ಮ ಚಿತ್ರದುರ್ಗದವರೇ ಆದ ಸಾಹಿತಿ ಡಾ.ಬಿ.ಎಲ್‌. ವೇಣುರವರು ಒನಕೆ ಓಬವ್ವ ಅವರ ಬಗ್ಗೆ ಚಿತ್ರಕಥೆ ಬರೆದು ಕೊಟ್ಟಿದ್ದಾರೆ. ಅದನ್ನು ನಿರ್ಮಾಪಕ ದೇವರಾಜ್‌ ಹಾಗೂ ನಿರ್ದೇಶಕ ಪುರುಷೋತ್ತಮ್‌ ಸಿನಿಮಾ ನಿರ್ಮಾಣ ಮಾಡಿ ಬಿಡುಗಡೆ ಮಾಡಿರುವುದು ವಿಶೇಷ ಎಂದು ಹೇಳಿದರು.

ಅದರಲ್ಲೂ ಚಿತ್ರದುರ್ಗದ ಕೋಟೆ, ಕೋತ್ತಲಗಳ ನಾಡನ್ನ ಕೇಂದ್ರೀಕರಿಸಿ ಸಿನಿಮಾ ಮಾಡಿರುವ ಅವರ ಸಾಹಸವನ್ನ ನಾವುಗಳು ಮೆಚ್ಚಬೇಕು. ಪ್ರೋತ್ಸಾಹ ನೀಡಬೇಕು. ಈ ಭಾಗದ ಜನರು ಇಂಥ ಐತಿಹಾಸಿಕ ಹಿನ್ನೆಲೆ ಹೊಂದಿರುವ ಚಿತ್ರಗಳನ್ನು ನೋಡಿ ಖುಷಿ ಪಡಬೇಕು, ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ಚಿತ್ರದುರ್ಗ ಐತಿಹಾಸಿಕ ಕೋಟೆಯ ಚರಿತ್ರೆಯಲ್ಲಿ ಒಂದು ಪ್ರಕಾಶಮಾನವಾದ ಹೆಸರು ಓಬವ್ವ. ಬರೀ ಓಬವ್ವ ಅಲ್ಲ ಒನಕೆ ಓಬವ್ವ. ಈ ಹೆಸರು ಕೇಳಿದರೆ ಸಾಕು ಒಂದು ಐತಿಹಾಸಿಕ ಚಿತ್ರಣ ಕಣ್ಮುಂದೆ ಬರುತ್ತದೆ. ಏನೋ ಒಂದು ರೀತಿ ರೋಮಾಂಚನವೂ ಕೂಡ. ಬಹಳ ಸರಳ ಹಾಗೂ ಸಹಜವಾಗಿ ಚಿತ್ರಿಸಿರುವ ಈ ಸಿನಿಮಾಕ್ಕೆ ಅವಾರ್ಡ್‌ ಬರಲಿ ಎಂದು ಶ್ರೀಗಳು ಹಾರೈಸಿದರು.

ನಿರ್ದೇಶಕ ಪುರುಷೋತ್ತಮ್‌ ಮಾತನಾಡಿ, ಬಿ.ಎಲ್‌.ವೇಣು ಅವರ ಚಿತ್ರಕಥೆ, ಎ.ದೇವರಾಜ್‌ ಅವರ ನಿರ್ಮಾಣದಲ್ಲಿ ಜೈಲಕ್ಷ್ಮಿ ಮೂವೀಸ್‌ ಅವರ ಚಿತ್ರದುರ್ಗದ ಒನಕೆ ಓಬವ್ವ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಕನ್ನಡಿಗರು ಈ ಸಿನಿಮಾವನ್ನು ನೋಡಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ