ಆ್ಯಪ್ನಗರ

ತಿಪ್ಪೇರುದ್ರಸ್ವಾಮಿ ದೇಗುಲದಲ್ಲಿವಿಶೇಷ ಪೂಜೆ

ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿಶುಕ್ರವಾರ ಕುಂಬಾ ಮಹೋತ್ಸವ ಕಾರ್ಯಕ್ರಮದೊಂದಿಗೆ ಶ್ರಾವಣ ಮಾಸದ ವಿಶೇಷ ಪೂಜಾ ಕಾರ್ಯಕ್ರಮ ಸಮಾಪ್ತಿಗೊಳಿಸಲಾಯಿತು.

Vijaya Karnataka 31 Aug 2019, 5:00 am
ನಾಯಕನಹಟ್ಟಿ: ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿಶುಕ್ರವಾರ ಕುಂಬಾ ಮಹೋತ್ಸವ ಕಾರ್ಯಕ್ರಮದೊಂದಿಗೆ ಶ್ರಾವಣ ಮಾಸದ ವಿಶೇಷ ಪೂಜಾ ಕಾರ್ಯಕ್ರಮ ಸಮಾಪ್ತಿಗೊಳಿಸಲಾಯಿತು.
Vijaya Karnataka Web special worship at tipperedaswamy temple
ತಿಪ್ಪೇರುದ್ರಸ್ವಾಮಿ ದೇಗುಲದಲ್ಲಿವಿಶೇಷ ಪೂಜೆ


ಬೆಳಗ್ಗೆ ಹೊರಮಠದಿಂದ ದೇವಾಲಯದ ಮಂಗಳ ವಾದ್ಯಗಳು ಹಾಗೂ ಹರಕೆ ಹೊತ್ತ ಮಹಿಳೆಯರು 108 ಕುಂಭಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಎಲ್ಲಕುಂಭಗಳಿಗೆ ಪವಿತ್ರಜಲ ತುಂಬಲಾಯಿತು.

ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಹಾಗೂ ಮಹಿಳೆಯರು ವೀಳ್ಯದೆಲೆ, ಹೂವು, ಅರಿಶಿಣ, ಕುಂಕುಮ ಸಹಿತವಾಗಿ ಕುಂಭಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಅಲಂಕೃತ ಕುಂಭಗಳನ್ನು ಒಳಮಠಕ್ಕೆ ತರಲಾಯಿತು.

ಮೆರವಣಿಗೆಯಲ್ಲಿದೇವಾಲಯ ಮಂಗಳವಾದ್ಯಗಳಿದ್ದವು. ಒಳಮಠದ ರುದ್ರಾಭಿಷೇಕ ಭವನದಲ್ಲಿಮಹಿಳೆಯರು ಹೊತ್ತು ತಂದಿದ್ದ 108 ಕುಂಭಗಳ ನೀರನ್ನು ಬಳಸಿ ವಿಶೇಷ ರುದ್ರಾಭಿಷೇಕ ನೆರವೇರಿಸಲಾಯಿತು.

ನಾಡಿಗೆ ಮಳೆ, ಬೆಳೆ ಹಾಗೂ ಸುಭಿಕ್ಷಕ್ಕಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ಒಳಮಠ ಸಮುದಾಯ ಭವನದಲ್ಲಿಶ್ರಾವಣ ಮಾಸದ ಅಂತ್ಯದ ದಿನದಂದು ವಿಶೇಷ ದಾಸೋಹ ಏರ್ಪಡಿಸಲಾಗಿತ್ತು. ಚಳ್ಳಕೆರೆಯ ಬಿ.ಟಿ. ಮತ್ತು ಕಂಪನಿ ಶುಕ್ರವಾರ ಏರ್ಪಡಿಸಿದ್ದ ದಾಸೋಹದ ನೇತೃತ್ವ ವಹಿಸಿತ್ತು. ಎಲ್ಲಭಕ್ತರಿಗೆ ಲಾಡು, ಪಾಯಸ, ಪಲ್ಯ, ಕೋಸುಂಬರಿ, ಅನ್ನ ಸಾಂಬಾರ್‌ನ ದಾಸೋಹ ಜರುಗಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜೆ.ಪಿ.ರವಿಶಂಕರ್‌, ಸದಸ್ಯರಾದ ಎನ್‌.ಬಿ.ಮುನಿಯಪ್ಪ, ರುದ್ರಮುನಿ, ದೇವಾಲಯ ಸಿಬ್ಬಂದಿ ಸತೀಶ್‌ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ