ಆ್ಯಪ್ನಗರ

ಶ್ರೀಕಂಚಿವರದರಾಜಸ್ವಾಮಿ ಬ್ರಹ್ಮರಥೋತ್ಸವ

ತಾಲೂಕಿನ ಕಂಚೀಪುರ ಗ್ರಾಮದ ಆರಾಧ್ಯ ದೈವ ಶ್ರೀಕಂಚಿವರದರಾಜಸ್ವಾಮಿ ಬ್ರಹ್ಮರಥೋತ್ಸವ ಗುರುವಾರ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.

Vijaya Karnataka 3 May 2019, 5:00 am
ಹೊಸದುರ್ಗ : ತಾಲೂಕಿನ ಕಂಚೀಪುರ ಗ್ರಾಮದ ಆರಾಧ್ಯ ದೈವ ಶ್ರೀಕಂಚಿವರದರಾಜಸ್ವಾಮಿ ಬ್ರಹ್ಮರಥೋತ್ಸವ ಗುರುವಾರ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
Vijaya Karnataka Web srikanivivararajaswamy brahmarathotsava
ಶ್ರೀಕಂಚಿವರದರಾಜಸ್ವಾಮಿ ಬ್ರಹ್ಮರಥೋತ್ಸವ


ಮಂಗಳವಾರ, ಬುಧವಾರ ಸಂಜೆಯವರೆಗೂ ಸ್ವಾಮಿಯ ಮೂರ್ತಿ ಗ್ರಾಮದ ಮನೆ ಮನೆಗೂ ತೆರಳಿ ಸೇವೆ ಸ್ವೀಕರಿಸಿತು. ರಾತ್ರಿ ಚಿಕ್ಕಬ್ಯಾಲದಕೆರೆಯಿಂದ ಆಗಮಿಸಿದ ಕರಿಯಮ್ಮದೇವಿ ಭೇಟಿ ಉತ್ಸವ ನಡೆಯಿತು. ನಂತರ ಗುರುವಾರ ಬೆಳಗಿನ ಜಾವ ವಿವಿಧ ಹೂಗಳಿಂದ ಬಾಳೆಕಂದುಗಳಿಂದ ಬಣ್ಣ ಬಣ್ಣದ ಬಟ್ಟೆಗಳಿಂದ ಸಿಂಗಾರಗೊಂಡಿದ್ದ ತೇರಿನಲ್ಲಿ ಶ್ರೀಸ್ವಾಮಿಯನ್ನು ಪ್ರಾತಿಷ್ಠಾಪಿಸಿದ ನಂತರ ರಥ ಎಳೆಯಲಾಯಿತು.

ತಾಲೂಕಿನ ನಾನಾ ಗ್ರಾಮಗಳಿಂದ ಬಂದಿದ್ದ ಭಕ್ತರು ಸೇರಿದಂತೆ ಗ್ರಾಮಸ್ಥರು ರಥವೇರಿದ ವರದರಾಜನಮೂರ್ತಿಗೆ ನಾಣ್ಯ ತೂರುವ ಮೂಲಕ ಭಕ್ತಿ ಸಮರ್ಪಿಸಿದರು. ಬೆಳಗ್ಗೆಯೇ ಸುಮಾರು ಏಳು ಗಂಟೆಯಲ್ಲಿ ಶ್ರೀಸ್ವಾಮಿಯ ದೂತಣ್ಣ, ಭೂತ, ಕೆಂಚರಾಯ ಹಾಗೂ ಬ್ಯಾಲದಕೆರೆ ದೂತಣ್ಣನಿಗೆ ಮಣೇವು ಸೇವೆ ನಡೆಯಿತು.

ಮುಳ್ಳಾವಿಗೆ ಸೇವೆ: ರಥದಿಂದ ಕೆಳಗಿಳಿದ ಕ್ಷ ಣ ಶ್ರೀಸ್ವಾಮಿಯೂ ತೇರಿಗೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ ತೇರು ಬೀದಿಯವರೆಗೂ ಉತ್ಸವ ನಡೆಯಿತು. ನಂತರ ಶ್ರೀಅಹಲ್ಯನಾಥ ದೇವಸ್ಥಾನದ ಎದುರು ವರದರಾಜಸ್ವಾಮಿ ಮುಳ್ಳಾವಿಗೆ ನಡೆಯಿತು. ಮುಂಜಾನೆಯೇ ರಥೋತ್ಸವಕ್ಕೆ ಆಗಮಿಸಿದ್ದ ಸಾವಿರಾರು ಜನರಿಗೆ ಉಪಹಾರ ಹಾಗೂ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ