ಆ್ಯಪ್ನಗರ

ಸ್ಮಶಾನ ಒತ್ತುವರಿ ಪರಿಶೀಲಿಸಿದ ತಹಸೀಲ್ದಾರ್‌

ದಲಿತ ಮೀಸಲು ಸ್ಮಶಾನ ಜಾಗ ಒತ್ತುವರಿ ಸ್ಥಳಕ್ಕೆ ತಹಸೀಲ್ದಾರ್‌ ವೈ.ತಿಪ್ಪೇಸ್ವಾಮಿ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ಒತ್ತುವರಿ ಸ್ಥಳ ತೆರವು ಮಾಡಿಸುವಂತೆ ಗ್ರಾಪಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

Vijaya Karnataka 15 Dec 2018, 5:00 am
ಹೊಳಲ್ಕೆರೆ : ದಲಿತ ಮೀಸಲು ಸ್ಮಶಾನ ಜಾಗ ಒತ್ತುವರಿ ಸ್ಥಳಕ್ಕೆ ತಹಸೀಲ್ದಾರ್‌ ವೈ.ತಿಪ್ಪೇಸ್ವಾಮಿ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ಒತ್ತುವರಿ ಸ್ಥಳ ತೆರವು ಮಾಡಿಸುವಂತೆ ಗ್ರಾಪಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
Vijaya Karnataka Web tahsildar reviewed cemetery encroachment
ಸ್ಮಶಾನ ಒತ್ತುವರಿ ಪರಿಶೀಲಿಸಿದ ತಹಸೀಲ್ದಾರ್‌


ತಾಲೂಕಿನ ಮುತ್ತುಗದೂರು, ಗುಂಡಿಮಡು, ಹಿರೇಎಮ್ಮಿಗನೂರು ಸೇರಿದಂತೆ ಕೆಲ ಗ್ರಾಮಗಳಲ್ಲಿ ದಲಿತರ ಮೀಸಲು ಸ್ಮಶಾನ ಜಾಗ ಒತ್ತುವರಿ ತೆರವು ಮಾಡಿವಂತೆ ಇತ್ತೀಚೆಗೆ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್‌ಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಮೂರು ಗ್ರಾಮಗಳ ಸ್ಮಶಾನ ಸ್ಥಳಗಳನ್ನು ತಹಸೀಲ್ದಾರ್‌ ಪರಿಶೀಲನೆ ನಡೆಸಿದರು. ಅಲ್ಲದೆ ಒತ್ತುವರಿ ತೆರವು ಮಾಡಿವಂತೆ ಗ್ರಾಪಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವೇಳೆ ದಸಂಸ ಜಿಲ್ಲಾಧ್ಯಕ್ಷ ಕೆಂಗುಂಟೆ ಜಯಪ್ಪ, ತಾಲೂಕು ಸಂಚಾಲಕ ನವೀನ್‌ ಕೆ.ಮದ್ದೇರು, ಜಿಲ್ಲಾ ಸಮಿತಿ ಸಂಚಾಲಕ ಮಂಜುನಾತ್‌, ಶಿವಣ್ಣ, ಗುರು, ಮಂಜು, ದಂಡಿಗೇನಹಳ್ಳಿ ಚಂದ್ರು ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ