ಆ್ಯಪ್ನಗರ

9ರಂದು ಶಿಕ್ಷಕರ ಪ್ರತಿಭಟನಾ ರಾರ‍ಯಲಿ

ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದಿಂದ ಚಿತ್ರದುರ್ಗದಲ್ಲಿ ಜುಲೈ 9 ರಂದು ನಾನಾ ಬೇಡಿಕೆ ಈಡೇರಿಕೆಗಾಗಿ ನಡೆಯುತ್ತಿರುವ ಪ್ರತಿಭಟನಾ ರಾರ‍ಯಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಿನ ಶಿಕ್ಷ ಕರು ಪಾಲ್ಗೊಳ್ಳಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ಜಿಲ್ಲಾಧ್ಯಕ್ಷ ಶಿವಾನಂದ ತಿಳಿಸಿದರು.

Vijaya Karnataka 3 Jul 2019, 5:00 am
ಮೊಳಕಾಲ್ಮುರು : ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದಿಂದ ಚಿತ್ರದುರ್ಗದಲ್ಲಿ ಜುಲೈ 9 ರಂದು ನಾನಾ ಬೇಡಿಕೆ ಈಡೇರಿಕೆಗಾಗಿ ನಡೆಯುತ್ತಿರುವ ಪ್ರತಿಭಟನಾ ರಾರ‍ಯಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಿನ ಶಿಕ್ಷ ಕರು ಪಾಲ್ಗೊಳ್ಳಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ಜಿಲ್ಲಾಧ್ಯಕ್ಷ ಶಿವಾನಂದ ತಿಳಿಸಿದರು.
Vijaya Karnataka Web teachers protest on 9th
9ರಂದು ಶಿಕ್ಷಕರ ಪ್ರತಿಭಟನಾ ರಾರ‍ಯಲಿ


ಪಟ್ಟಣದ ಬಿಇಒ ಕಚೇರಿಯ ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ನಾನಾ ಬೇಡಿಕೆ ಈಡೇರಿಸುವಲ್ಲಿ ಸರಕಾರ ವರ್ಷಗಳಿಂದಲೂ ಮೀನಮೇಷ ಮಾಡುತ್ತಿದೆ. ನಮ್ಮ ನ್ಯಾಯಯುತ ಬೇಡಿಕೆಗಳನ್ನು ಸರಕಾರದ ಗಮನ ಸೆಳೆಯಲು ಜಿಲ್ಲೆಯ ಎಲ್ಲ ತಾಲೂಕಿನ ಸರಕಾರಿ ಶಾಲೆಗಳನ್ನು ಬಂದ್‌ ಮಾಡಿ ಜುಲೈ 9ರಂದು ರಾರ‍ಯಲಿ ನಡೆಸಲಾಗುತ್ತಿದೆ ಎಂದರು.

ನಮ್ಮಗಳ ಬೇಡಿಕೆ ಈಡೇರಿಕೆಗಾಗಿ ನಡೆಸುತ್ತಿರುವ ಈ ರಾರ‍ಯಲಿಯಲ್ಲಿ ಎಲ್ಲ ಶಿಕ್ಷ ಕರು ಪಾಲ್ಗೊಳ್ಳಲ್ಲಿ ಸರಕಾರದ ಗಮನ ಸೆಳೆಯಬಹುದು. ಒಂದು ದಿನದ ಸಾಂಕೇತಿಕ ರಾರ‍ಯಲಿಯಲ್ಲಿ ಶಿಕ್ಷ ಕರ ಭಾಗವಹಿಸಿ, ಶಿಕ್ಷಕರ ಬೇಡಿಕೆಗಳ ಹಕ್ಕೋತ್ತಾಯ ಮಾಡಲಾಗುವುದು ಎಂದರು.

ಸಭೆಯಲ್ಲಿ ಸರಕಾರಿ ನೌಕರರ ಸಂಘದ ನಿರ್ದೆಶಕರಾಗಿ ಆಯ್ಕೆಯಾದ ಎಸ್‌.ಕರಿಬಸಪ್ಪ, ಸಿ.ಚಂದ್ರಶೇಕರ್‌, ಎಸ್‌.ಈರಣ್ಣ, ಮಲ್ಲೇಶಪ್ಪ, ವೈ.ಜಂಬುನಾಥ್‌, ಮುಕ್ಕಣ್ಣ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬಿಇಒ ಎನ್‌.ಸೋಮಶೇಖರ್‌, ಸಿಇಒ ಎಚ್‌.ಜೆ.ಓಂಕಾರಪ್ಪ, ಸಂಘದ ಜಿಲ್ಲಾ ಕಾರ್ಯದರ್ಶಿ ಜಿ.ಬಿ.ಮಹಂತೇಶ್‌, ರಾಜ್ಯ ಉಪಾಧ್ಯಕ್ಷ ಆರ್‌.ಮಾರುತೇಶ್‌, ತಾಲೂಕು ಅಧ್ಯಕ್ಷ ಡಿ.ರಾಜಣ್ಣ, ಪ್ರಧಾನ ಕಾರ್ಯದರ್ಶಿ ಮಲಿಕ್‌ ಖಾಜಿ, ಗೌರವಾಧ್ಯಕ್ಷ ಕೆ.ಎಚ್‌.ಸಣ್ಣಯಲ್ಲಪ್ಪ, ಉಪಾಧ್ಯಕ್ಷ ರಾದ ಎಂ.ಇಬ್ರಾಹಿಂ, ಜಿ.ಬಿ.ಮಮತಾ, ಖಜಾಂಚಿ ಓಂಕಾರಮ್ಮ, ಜಿಲ್ಲಾ ನಾಮನಿರ್ದೇಶಕ ಎಂ.ಬಸವರಾಜ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ