ಆ್ಯಪ್ನಗರ

ಸಾಹಿತಿಗಳಿಗೆ ಸಾಮಾಜಿಕ ಕಳಕಳಿ ಇದೆ

ಸಾಮಾಜಿಕ ಕಳಕಳಿ ಹೊಂದಿರುವ ಸಾಹಿತಿಗಳು, ಚುನಾಯಿತ ಜನಪ್ರತಿನಿಧಿಗಳಿಗೆ ಸೂಚನೆ ನೀಡುವ ಮೂಲಕ ಅನೇಕ ಅಭಿವೃದ್ಧಿ ಕೆಲಸ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸಾಣೇಹಳ್ಳಿ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Vijaya Karnataka 22 Dec 2018, 5:00 am
ಹೊಸದುರ್ಗ : ಸಾಮಾಜಿಕ ಕಳಕಳಿ ಹೊಂದಿರುವ ಸಾಹಿತಿಗಳು, ಚುನಾಯಿತ ಜನಪ್ರತಿನಿಧಿಗಳಿಗೆ ಸೂಚನೆ ನೀಡುವ ಮೂಲಕ ಅನೇಕ ಅಭಿವೃದ್ಧಿ ಕೆಲಸ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸಾಣೇಹಳ್ಳಿ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
Vijaya Karnataka Web the authors have a social concern
ಸಾಹಿತಿಗಳಿಗೆ ಸಾಮಾಜಿಕ ಕಳಕಳಿ ಇದೆ


ಪಟ್ಟಣದ ಹಳೇ ಪ್ರವಾಸಿ ಮಂದಿರದ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಶುಕ್ರವಾರ ನಿರ್ಮಿಸಲಾಗಿರುವ ನೂತನ ಕನ್ನಡ ಭವನ ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ರಾಜ್ಯ ಸುಸ್ಥಿತಿಯಲ್ಲಿರಲು ಸಾಹಿತಿಗಳೇ ಕಾರಣ. ಸಾಹಿತಿಗಳಿಗೆ ಭಯ ಇರೋಲ್ಲ ಬದಲಾಗಿ ಸಾಮಾಜಿಕ ಕಳಕಳಿ ಇರುತ್ತೆ. ಈ ಹಿನ್ನೆಲೆಯಲ್ಲಿ ಅವರು, ಜನಪ್ರತಿನಿಧಿಗಳಿಗೆ ಸೂಚನೆ ನೀಡಿ ಕೆಲಸ ಮಾಡಿಸುತ್ತಾರೆ. ಸಾಹಿತ್ಯ, ನಾಟಕಗಳಲ್ಲಿನ ಉತ್ತಮ ಸಂದೇಶಗಳು ಜನರಿಗೆ ತಲುಪಬೇಕಾದರೇ, ನಿರಂತರವಾಗಿ ಕಾರ್ಯಕ್ರಮ ನಡೆಯುತ್ತಿರಬೇಕು. ಇದರಿಂದ ಜನರಲ್ಲಿನ ಜಡತ್ವ ಹೊಡೆದೊಡಿಸಿ ಜಂಗಮತ್ವವನ್ನು ತರಬಹುದಾಗಿದೆ ಎಂದರು.

ಗುರು ಸುಜ್ಞಾನಿಯಾಗಿದ್ದರೇ ಮಾತ್ರ ಸಮಾಜಮುಖಿ ಕೆಲಸಗಳು ಆಗಲಿಕ್ಕೆ ಸಾಧ್ಯ. ಚುನಾಯಿತ ಪ್ರತಿನಿಧಿಯೂ ಮತ ಹಾಕಿದ ಮತ್ತು ಹಾಕದೇ ಇರುವ ಇಬ್ಬರೂ ಮತದಾರರನ್ನು ಸಮಾನವಾಗಿ ಕಾಣುವುದರ ಜತೆಗೆ ಅವರನ್ನು ಪ್ರೀತಿಸುವ ಗುಣ ಹೊಂದಿರಬೇಕು. ಆಯ್ಕೆಯಾದ ಜನಪ್ರತಿನಿಧಿ ಪಾರದರ್ಶಕವಾಗಿ ಕೆಲಸ ಮಾಡಿದಾಗ ಮಾತ್ರ ಉತ್ತಮ ನಾಡನ್ನು ಕಟ್ಟಲಿಕ್ಕೆ ಸಾಧ್ಯ. ಕನ್ನಡ ಭವನದ ಮುಂದಿನ ಅಭಿವೃದ್ಧಿ ಯೋಜನೆಗಳಿಗೆ ತಾಲೂಕಿನಲ್ಲಿರುವ ಎಲ್ಲಾ ಮಠಗಳಿಂದ ತಲಾ 1 ಲಕ್ಷ ರೂ. ನೀಡಲಾಗುವುದು ಎಂದರು.

ಭಗೀರಥ ಮಠದ ಡಾ. ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ, ಶಾಸ್ತ್ರಿಯ ಸ್ಥಾನಮಾನ ಹೊಂದಿರುವ ಪ್ರಾಚೀನ ಕನ್ನಡ ಭಾಷೆ ಸೋರಗುತ್ತಿದೆ ಎನ್ನುವ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದೆ. ಸರಕಾರದ ನಿಯಮಗಳಿಂದ ಗ್ರಾಮೀಣ ಪ್ರದೇಶದ ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿಗೆ ತಲುಪಿವೆ. ಸಾಹಿತ್ಯಕ್ಕೆ ಜಾತಿ, ಧರ್ಮ ಎಂಬ ಭೇದವಿಲ್ಲ. ಈ ಕ್ಷೇತ್ರದಲ್ಲಿರುವ ಎಲ್ಲರೂ ತಾರತಮ್ಯವಿಲ್ಲದೆ ಕನ್ನಡ ಭಾಷೆಯನ್ನು ಮತ್ತಷ್ಟು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.

ಆರೋಗ್ಯ ಮತ್ತು ಶಿಕ್ಷ ಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಅನಂತ್‌ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಎಲ್ಲರೂ ಒಗ್ಗೂಡಿ ಕೆಸಲ ಮಾಡಬೇಕಿದೆ. ಹಿಂದಿನ ಶಾಸಕ ಬಿ.ಜಿ.ಗೋವಿಂದಪ್ಪ ಕನ್ನಡ ಭವನ ನಿರ್ಮಾಣಕ್ಕೆ 10 ಲಕ್ಷ ರೂ ಅನುದಾನ ನೀಡಿದ್ದರು ಎಂದರು.

ತಾಪಂ ಅಧ್ಯಕ್ಷೆ ಪ್ರೇಮಾ ರವೀಂದ್ರ, ಕಸಾಪ ಮಾಜಿ ಅಧ್ಯಕ್ಷ ಕೆ.ಎಸ್‌.ಕಲ್ಮಠ್‌, ಮಾಜಿ ಗೌರವ ಕಾರ್ಯದರ್ಶಿಗಳಾದ ಮಹಮದ್‌ ಇಸ್ಮಾಯಿಲ್‌, ಬಿ.ವಿ.ಲವಕುಮಾರ್‌, ಹೊಳಲ್ಕೆರೆ ತಾಪಂ ಇಓ ಮಹಂತೇಶ್‌ರನ್ನು ಸನ್ಮಾನಿಸಲಾಯಿತು.

ನಿವೃತ್ತ ಪ್ರಾಂಶುಪಾಲ ಲೋಕೇಶ್ವರಪ್ಪ, ಕಸಾಪ ಗೌರವ ಕಾರ್ಯದರ್ಶಿ ಜಿ.ಗುರುಮೂರ್ತಿ ಮಾತನಾಡಿದರು. ಕಸಾಪ ಅಧ್ಯಕ್ಷ ಧನಂಜಯ ಮೆಂಗಸಂದ್ರ ಅಧ್ಯಕ್ಷ ತೆ ವಹಿಸಿದ್ದರು. ಗೌರವಾಧ್ಯಕ್ಷ ಬಿ.ಜಿ.ವೆಂಕಟೇಶ್‌, ಜಿಪಂ ಸದಸ್ಯರಾದ ಅಜ್ಜಪ್ಪ, ಚೇತನಾ, ಈ ಹಿಂದಿನ ಸಮ್ಮೇಳನಾಧ್ಯಕ್ಷ ರಾದ ಬಾ.ಮೈಲಾರಪ್ಪ, ಬಾಗೂರು ನಾಗರಾಜಪ್ಪ ಮತ್ತಿತರರಿದ್ದರು.

======

ಬಾಕ್ಸ್‌

ಎಲ್ಲರೂ ಸರಕಾರಿ ಶಾಲೆಯತ್ತ ಮುಖ ಮಾಡಬೇಕು


ಕಾರ್ಯಕ್ರಮದಲ್ಲಿ ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಯಾವುದೇ ವ್ಯಕ್ತಿಯ ಸಾಧನೆ, ಅಭಿವೃದ್ಧಿ ಕೆಲಸ ಬಗ್ಗೆ ಸಂಕುಚಿತ ಭಾವನೆ ಇಟ್ಟುಕೊಳ್ಳದೇ, ಸಾರ್ವಜನಿಕವಾಗಿ ಅದನ್ನು ಮುಕ್ತವಾಗಿ ಹೇಳಿಕೊಳ್ಳುವಂತ ವಿಶಾಲ ಹೃದಯವನ್ನು ಎಲ್ಲರೂ ಹೊಂದಬೇಕು. ಕನ್ನಡ ಭವನ ವಿಚಾರವಾಗಿ ಯಾರು ರಾಜಕೀಯ ಮಾಡಬೇಡಿ, ಭವನದ ಮುಂದುವರೆದ ಕಾಮಗಾರಿಗಳಿಗೆ ಎಲ್ಲಾ ಜನಪ್ರತಿನಿಧಿಗಳಿಂದ ಅನುದಾನ ಪಡೆದು ಕೆಲಸ ಮಾಡುವಂತ ಔದಯ್ರ್ಯತೆ ಬೆಳೆಸಿಕೊಳ್ಳಬೇಕಿದೆ. ಸಾಣೇಹಳ್ಳಿ ಶ್ರೀಗಳ ಸಲಹೆಯಂತೆ ಶ್ರೀಮಠದಿಂದ 1 ಲಕ್ಷ ರೂ. ಹಣ ನೀಡಲಾಗುವುದು. ಇವತ್ತು ಸಾಹಿತಿ, ರಾಜಕಾರಣಿಗಳ ಮಕ್ಕಳೇ ಇಂಗ್ಲಿಷ್‌ ಶಾಲೆಗೆ ಹೋಗುತ್ತಾರೆ. ಶಾಲೆಗಳ ಪುನಶ್ಚೇತನವಾಗಬೇಕಾದರೇ, ಮೊದಲು ಸರಕಾರಿ ಶಾಲೆಯತ್ತ ಎಲ್ಲರೂ ಮುಖ ಮಾಡಬೇಕು ಎಂದರು.

ಚಾಮರಾಜ ನಗರದ ಸುಳವಾಡಿ ಮಾರಮ್ಮ ದೇವಾಲಯದಲ್ಲಿನ ವಿಷ ಪ್ರಸಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಷಾದ ವ್ಯಕ್ತಪಡಿಸಿದ ಶ್ರೀಗಳು, ಇಂಥ ಘಟನೆಗಳಿಂದ ಮಠ ಹಾಗೂ ದೇವಾಸ್ಥಾನ ಪ್ರಸಾದ ಪರೀಕ್ಷೆ ಮಾಡುವಂತ ಪರಿಸ್ಥಿತಿ ಬಂದೊದಗಿದೆ. ದ್ವೇಷ, ಅಸೂಯೆಗಳಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗದು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ