ಆ್ಯಪ್ನಗರ

ಕೃಷಿ ಹೊಂಡದಲ್ಲಿ ಬಾಲಕ ಬಿದ್ದು ಸಾವು

ತಾಲೂಕಿನ ಭರಮಸಾಗರ ಹೋಬಳಿ ಎಮ್ಮೆಹಟ್ಟಿ ಗ್ರಾಮದ ಕೃಷಿ ಹೊಂಡದಲ್ಲಿ ಬಾಲಕನೊಬ್ಬ ಬಿದ್ದು ಭಾನುವಾರ ಮೃತಪಟ್ಟಿದ್ದಾನೆ.

Vijaya Karnataka 28 Jan 2019, 8:32 pm
ಚಿತ್ರದುರ್ಗ: ತಾಲೂಕಿನ ಭರಮಸಾಗರ ಹೋಬಳಿ ಎಮ್ಮೆಹಟ್ಟಿ ಗ್ರಾಮದ ಕೃಷಿ ಹೊಂಡದಲ್ಲಿ ಬಾಲಕನೊಬ್ಬ ಬಿದ್ದು ಭಾನುವಾರ ಮೃತಪಟ್ಟಿದ್ದಾನೆ.
Vijaya Karnataka Web the boy fell and died in a farm pond
ಕೃಷಿ ಹೊಂಡದಲ್ಲಿ ಬಾಲಕ ಬಿದ್ದು ಸಾವು


ಎಮ್ಮೆಹಟ್ಟಿ ಗ್ರಾಮದ ದೇವೇಂದ್ರಪ್ಪ ಮತ್ತು ಕರಿಬಸಮ್ಮ ದಂಪತಿ ಪುತ್ರ ರಂಜನ್‌ (12) ಮೃತಪಟ್ಟ ಬಾಲಕ. ತನ್ನ ಸ್ನೇಹಿತನೊಂದಿಗೆ ಆಟವಾಡುವಾಗ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಬಳಿಯಿರುವ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಪಕ್ಕದಲ್ಲಿನ ಕೃಷಿ ಹೊಂಡದಲ್ಲಿ ನೀರು ಕುಡಿಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ. ಈ ಬಗ್ಗೆ ಭರಮಸಾಗರ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ