ಆ್ಯಪ್ನಗರ

ಬಿಜೆಪಿ ಕಟ್ಟಿ ಹಾಕುವ ಶಕ್ತಿ ಕಮ್ಯುನಿಸ್ಟ್‌ ಪಕ್ಷ ಕ್ಕೆ ಇದೆ

ಕಮ್ಯೂನಿಷ್ಟ್‌ ಪಕ್ಷದ ಸಲಹೆ ತಿರಸ್ಕರಿಸಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡ ತಪ್ಪಿನಿಂದ ಕಾರ್ಮಿಕ ವಿರೋಧಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕೋಮುವಾದಿ ಬಿಜೆಪಿಯನ್ನು ಕಟ್ಟಿ ಹಾಕುವ ಶಕ್ತಿ ಇರುವುದು ಕಮ್ಯುನಿಸ್ಟ್‌ ಪಕ್ಷ ಕ್ಕೆ ಮಾತ್ರ ಇದೆ ಎಂದು ಸಿಪಿಐನ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್‌ ಹೇಳಿದರು.

Vijaya Karnataka 14 Jul 2019, 5:00 am
ಚಿತ್ರದುರ್ಗ : ಕಮ್ಯೂನಿಷ್ಟ್‌ ಪಕ್ಷದ ಸಲಹೆ ತಿರಸ್ಕರಿಸಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡ ತಪ್ಪಿನಿಂದ ಕಾರ್ಮಿಕ ವಿರೋಧಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕೋಮುವಾದಿ ಬಿಜೆಪಿಯನ್ನು ಕಟ್ಟಿ ಹಾಕುವ ಶಕ್ತಿ ಇರುವುದು ಕಮ್ಯುನಿಸ್ಟ್‌ ಪಕ್ಷ ಕ್ಕೆ ಮಾತ್ರ ಇದೆ ಎಂದು ಸಿಪಿಐನ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್‌ ಹೇಳಿದರು.
Vijaya Karnataka Web the communist party has the power to tear down the bjp
ಬಿಜೆಪಿ ಕಟ್ಟಿ ಹಾಕುವ ಶಕ್ತಿ ಕಮ್ಯುನಿಸ್ಟ್‌ ಪಕ್ಷ ಕ್ಕೆ ಇದೆ


ಎಪಿಎಂಸಿ ಆವರಣದಲ್ಲಿರುವ ದಲ್ಲಾಲರ ಭವನದಲ್ಲಿ ಶನಿವಾರ ನಡೆದ ಸಿಪಿಐ ಜಿಲ್ಲಾ ಮಂಡಳಿ ಸರ್ವ ಸದಸ್ಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕಮ್ಯುನಿಸ್ಟ್‌ ಪಕ್ಷ , ರೈತ ಸಂಘ ಹಾಗೂ ಬಿಎಸ್‌ಪಿಯನ್ನು ದೂರವಿಟ್ಟು ಕಾಂಗ್ರೆಸ್‌-ಜೆಡಿಎಸ್‌ ಪಕ್ಷ ಗಳು ಮಾತ್ರ ಮೈತ್ರಿ ಮಾಡಿಕೊಂಡ ಪರಿಣಾಮ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸುಲಭವಾಯಿತು. ಎಲ್ಲ ಪಕ್ಷಗಳು ಸಮಾಲೋಚನೆ ನಡೆಸಿ, ಸ್ಪರ್ದಿಸಿದ್ದಲ್ಲಿ ಬಿಜೆಪಿಗೆ ಸವಾಲಾಗುತ್ತಿತ್ತು' ಎಂದರು.

ಕಮ್ಯುನಿಸ್ಟ್‌ ಪಕ್ಷ ಚಿಕ್ಕದಿರಬಹುದು. ಸಿದ್ದಾಂತ ದೊಡ್ಡದು. ಕುಟುಂಬ ವ್ಯಾಮೋಹ ಹಾಗೂ ಪುತ್ರ ವ್ಯಾಮೋಹದಿಂದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷ ಗಳು ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಅನುಭವಿಸಬೇಕಾಯಿತು ಎಂದು ಹೇಳಿದರು.

ಕಮ್ಯುನಿಸ್ಟ್‌ ಪಕ್ಷ ಕಾರ್ಡ್‌ ನಿಮ್ಮ ಬಳಿ ಇದ್ದರೆ ಹೆಮ್ಮೆ ಗೌರವವಿರುತ್ತದೆ. ಬಡವರು, ಕಾರ್ಮಿಕರ ಪರ ಹೋರಾಡಬೇಕೆಂದರೆ ಕೈಯಲ್ಲಿ ಕೆಂಪು ಬಾವುಟ ಹಿಡಿಯಬೇಕು. ಭ್ರಷ್ಟರು ನಮ್ಮ ಕಾರ್ಡ್‌ನ್ನು ಮುಟ್ಟಲು ಆಗುವುದಿಲ್ಲ. ಇವೆಲ್ಲವನ್ನು ಜಿಲ್ಲಾ ಮಂಡಳಿ ಸದಸ್ಯರು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ತಿಳಿಸಿದರು.

ಸಿಪಿಐನ ಸಹ ಕಾರ್ಯದರ್ಶಿ ಡಾ.ಜನಾರ್ಧನ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ಶಿವಣ್ಣ, ಕಾರ್ಯದರ್ಶಿ ಸಿ.ವೈ. ಶಿವರುದ್ರಪ್ಪ, ಸಹ ಕಾರ್ಯದರ್ಶಿ ಜಿ.ಸಿ.ಸುರೇಶ್‌ಬಾಬು, ತಾಲೂಕು ಕಾರ್ಯದರ್ಶಿ ಟಿ.ಆರ್‌.ಉಮಾಪತಿ, ಎಪಿಎಂಸಿ ಹಮಾಲರ ಸಂಘದ ಮುಖಂಡ ಬಿ.ಬಸವರಾಜ್‌, ದೊಡ್ಡ ಉಳ್ಳಾರ್ತಿ ಕರಿಯಣ್ಣ, ಪಾಲವ್ವನಹಳ್ಳಿ ಪ್ರಸನ್ನಕುಮಾರ್‌, ಹೊಳಲ್ಕೆರೆ ತಾಲೂಕು ಕಾರ್ಯದರ್ಶಿ ಮಹೇಶ್ವರಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ