ಆ್ಯಪ್ನಗರ

ಹೊಂಡದಲ್ಲಿ ಬಿದ್ದು ಯುವಕರಿಬ್ಬರ ಸಾವು

ಸಮೀಪದ ಹೆಗಡೇಹಾಳು ಗ್ರಾಮದ ಜಮೀನೊಂದರ ಕೃಷಿ ಹೊಂಡದಲ್ಲಿ ಬಿದ್ದು ವಿಜಯ್‌ (21), ಸಚಿನ್‌ (20) ಬುಧವಾರ ಮೃತಪಟ್ಟಿದ್ದಾರೆ.

Vijaya Karnataka 14 Feb 2019, 8:31 pm
ಭರಮಸಾಗರ: ಸಮೀಪದ ಹೆಗಡೇಹಾಳು ಗ್ರಾಮದ ಜಮೀನೊಂದರ ಕೃಷಿ ಹೊಂಡದಲ್ಲಿ ಬಿದ್ದು ವಿಜಯ್‌ (21), ಸಚಿನ್‌ (20) ಬುಧವಾರ ಮೃತಪಟ್ಟಿದ್ದಾರೆ.
Vijaya Karnataka Web the death of two young men fell into the pond
ಹೊಂಡದಲ್ಲಿ ಬಿದ್ದು ಯುವಕರಿಬ್ಬರ ಸಾವು


ಜಮೀನಿನ ಬೆಳೆಗೆ ಕ್ರಿಮಿನಾಶಕ ಸಿಂಪಡಿಸಲು ಹೊಂಡದಲ್ಲಿ ನೀರು ತುಂಬಿಕೊಂಡು ಬರಲು ಹೋಗಿದ್ದಾಗ ಆಕಸ್ಮಿಕ ಕಾಲು ಜಾರಿ ಬಿದ್ದಿದ್ದಾರೆ. ನಂತರ ಯುವಕರು ಕಾಣದೆ ಸ್ಥಳೀಯರು ಹೊಂಡದಲ್ಲಿ ಪರಿಶೀಲಿಸಿದಾಗ ಮೃತಪಟ್ಟಿರುವುದು ಕಂಡುಬಂದಿದೆ.

ಸ್ಥಳಕ್ಕೆ ತಹಸೀಲ್ದಾರ್‌ ಕಾಂತರಾಜ್‌, ಸಹಾಯಕ ಕೃಷಿ ನಿರ್ದೇಶಕಿ ಭಾರತಿ, ಪೊಲೀಸ್‌ ವೃತ್ತ ನಿರೀಕ್ಷ ಕ ಗಿರೀಶ್‌, ಎಎಸ್‌ಐ ಪ್ರಕಾಶ್‌, ವಿಎ ನಾಗರಾಜ್‌ , ಜಿಪಂ ಸದಸ್ಯ ಡಿ.ವಿ.ಶರಣಪ್ಪ, ಕಲ್ಲೇಶ್‌, ಶಶಿಪಾಟೀಲ್‌, ವೀರಭದ್ರಪ್ಪ, ಪ್ರವೀಣ್‌ ತೆರಳಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಭರಮಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ