ಆ್ಯಪ್ನಗರ

ಕೆಂಡದ ಗುಂಡಿಗೆ ಬಿದ್ದ ವ್ಯಕ್ತಿಗೆ ಗಾಯ

ಕೆಂಡದ ಗುಂಡಿಯಲ್ಲಿ ಬಿದ್ದು ವ್ಯಕ್ತಿಯೊಬ್ಬ ತೀವ್ರ ಗಾಯಗೊಂಡ ಘಟನೆ ಸಮೀಪದ ಎನ್‌.ಮಹಾದೇವಪುರ ಗ್ರಾಮದಲ್ಲಿ ಭಾನುವಾರ ನಸುಕಿನಲ್ಲಿ ನಡೆದಿದೆ.

Vijaya Karnataka 24 Sep 2018, 5:00 am
ನಾಯಕನಹಟ್ಟಿ : ಕೆಂಡದ ಗುಂಡಿಯಲ್ಲಿ ಬಿದ್ದು ವ್ಯಕ್ತಿಯೊಬ್ಬ ತೀವ್ರ ಗಾಯಗೊಂಡ ಘಟನೆ ಸಮೀಪದ ಎನ್‌.ಮಹಾದೇವಪುರ ಗ್ರಾಮದಲ್ಲಿ ಭಾನುವಾರ ನಸುಕಿನಲ್ಲಿ ನಡೆದಿದೆ.
Vijaya Karnataka Web the injured man was injured
ಕೆಂಡದ ಗುಂಡಿಗೆ ಬಿದ್ದ ವ್ಯಕ್ತಿಗೆ ಗಾಯ


ಪ್ರಕಾಶ್‌ ಗಾಯಗೊಂಡ ವ್ಯಕ್ತಿ. ಭಾನುವಾರ ನಸುಕಿನ 4 ಗಂಟೆ ಸಮಯದಲ್ಲಿ ಮೊಹರಂ ಅಂಗವಾಗಿ ಕೆಂಡ ಹಾಯುವ ಕಾರ್ಯಕ್ರಮ ನಡೆಯುತ್ತಿತ್ತು. ಗುಂಡಿಗೆ ಹುಣಸೆ ಮರದ ದಿಮ್ಮಿ ಬಳಸಿ ಕೆಂಡ ಮಾಡಿ ಹಾಕಲಾಗಿತ್ತು.

ಕೆಂಡದ ಮೇಲೆ ಭಕ್ತರು ವೇಗವಾಗಿ ಓಡುತ್ತಿದ್ದರು. ಈ ವೇಳೆ ಪ್ರಕಾಶ್‌ ಕೆಂಡದ ಮೇಲೆ ಓಡುತ್ತಿದ್ದಾಗ ಆಯತಪ್ಪಿ ಕೆಂಡದ ರಾಶಿಯ ಮೇಲೆ ಬಿದ್ದಿದ್ದಾನೆ. ಇದರಿಂದ ಬೆನ್ನು ಬಹುಭಾಗ ಸುಟ್ಟಿದೆ. ತಕ್ಷ ಣ ಪಟ್ಟಣದ ಸಮುದಾಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ