ಆ್ಯಪ್ನಗರ

ಶಾಲಾರಂಭೋತ್ಸವಕ್ಕೆ ಪೋಷಕರೇ ಹೆಚ್ಚು

ಶಾಲಾ ಪ್ರಾರಂಭೋತ್ಸವ ದಿನವಾದ ಗುರುವಾರ ನಗರದ ಕೆಲ ಶಾಲೆಗಳಲ್ಲಿ ಬೆರಳೆಣಿಕೆ ಮಕ್ಕಳ ಉಪಸ್ಥಿತಿಯಲ್ಲಿ ನಡೆಯಿತು. ನಗರದ ಜೆಸಿಆರ್‌ ಹಿರಿಯ ಪ್ರಾಥಮಿಕ ಶಾಲೆ, ಕೆಳಗೋಟೆ ಹಿರಿಯ ಪ್ರಾಥಮಿಕ ಶಾಲೆ, ಚಿತ್ರದುರ್ಗಕ್ಕೆ ನಗರಕ್ಕೆ ಸಮೀಪದ ಮುತ್ತಯ್ಯನಹಟ್ಟಿ, ಬಾರ್‌ಲೈನ್‌ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಒಂದಂಕಿ ಮೀರಿರಲಿಲ್ಲ.

Vijaya Karnataka 30 May 2019, 5:00 am
ಚಿತ್ರದುರ್ಗ : ಶಾಲಾ ಪ್ರಾರಂಭೋತ್ಸವ ದಿನವಾದ ಗುರುವಾರ ನಗರದ ಕೆಲ ಶಾಲೆಗಳಲ್ಲಿ ಬೆರಳೆಣಿಕೆ ಮಕ್ಕಳ ಉಪಸ್ಥಿತಿಯಲ್ಲಿ ನಡೆಯಿತು. ನಗರದ ಜೆಸಿಆರ್‌ ಹಿರಿಯ ಪ್ರಾಥಮಿಕ ಶಾಲೆ, ಕೆಳಗೋಟೆ ಹಿರಿಯ ಪ್ರಾಥಮಿಕ ಶಾಲೆ, ಚಿತ್ರದುರ್ಗಕ್ಕೆ ನಗರಕ್ಕೆ ಸಮೀಪದ ಮುತ್ತಯ್ಯನಹಟ್ಟಿ, ಬಾರ್‌ಲೈನ್‌ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಒಂದಂಕಿ ಮೀರಿರಲಿಲ್ಲ.
Vijaya Karnataka Web the parents are more than the schools anniversary
ಶಾಲಾರಂಭೋತ್ಸವಕ್ಕೆ ಪೋಷಕರೇ ಹೆಚ್ಚು


ಎಲ್ಲ ಶಾಲೆಗಳಲ್ಲೂ ಮಕ್ಕಳ ಸಂಖ್ಯೆಗಿಂತ ಶಿಕ್ಷಕರ ಸಂಖ್ಯೆಯೇ ಜಾಸ್ತಿ ಇತ್ತು. ಶಿಕ್ಷಕರೇನೋ ಇಲಾಖೆಯ ಆದೇಶದಂತೆ ಶಾಲಾ ಕೊಠಡಿ, ಆವರಣವನ್ನು ಪ್ರಾರಂಭೋತ್ಸವಕ್ಕೆ ಸಜ್ಜುಗೊಳಿಸಿ, ಮಕ್ಕಳ ಬರುವಿಕೆಗಾಗಿ ಕಾಯುತ್ತಿದ್ದರು. ಮಕ್ಕಳ ಆಗಮನ ಮಾತ್ರ ನಿರೀಕ್ಷಿತ ಸಂಖ್ಯೆಯಲ್ಲಿ ಇರಲಿಲ್ಲ.

ಪೋಷಕರೂ ಇಲ್ಲ:
ಮಕ್ಕಳು ಮಾತ್ರವಲ್ಲ, ಸರಕಾರಿ ಶಾಲೆಗೆ ಬಂದ ಬೆರಳೆಣಿಕೆ ಮಕ್ಕಳ ಜತೆ ಪೋಷಕರೂ ಆಗಮಿಸಿರಲಿಲ್ಲ.ಅಪವಾದ ಎಂಬಂತೆ ಕೆಳಗೋಟೆ ಹಿರಿಯ ಪ್ರಾಥಮಿಕ ಶಾಲೆಯ ಕೆಲ ಮಕ್ಕಳ ಪೋಷಕರು ಮಾತ್ರ ಬಂದಿದ್ದರು. ಉಳಿದ ಕಡೆ ಮಕ್ಕಳೇ ಏಕಾಂಗಿಗಳಾಗಿ ಶಾಲೆಗಳತ್ತ ಹೆಜ್ಜೆ ಹಾಕಿ ಬಂದಿದ್ದರು.

ಇಲಾಖೆ ಕಳೆದೆರಡು ಮೂರು ದಿನಗಳಿಂದ ಶಿಕ್ಷಣ ಇಲಾಖೆ ಶಾಲಾ ಆರಂಭಕ್ಕೆ ಸೂಕ್ತ ಸಿದ್ಧತೆ ಮಾಡಿಕೊಳ್ಳಲು ಶಿಕ್ಷಕರಿಗೆ ಸೂಚನೆ ನೀಡಿದ್ದರೂ, ನಗರ ಪ್ರದೇಶಗಳಲ್ಲಿ ಮಕ್ಕಳನ್ನು ಪ್ರಾರಂಭೋತ್ಸವದ ದಿನ ಕರೆ ತರಲು ಸಾಧ್ಯವಾಗಿಲ್ಲ.

ಖಾಸಗಿ ಶಾಲೆ ರಶ್‌: ಸರಕಾರಿ ಶಾಲೆಗಳ ಈ ಚಿತ್ರಣಕ್ಕೆ ಭಿನ್ನವಾಗಿ ಖಾಸಗಿ ಶಾಲೆಗಳಲ್ಲಿ ಶಾಲಾ ಪ್ರಾರಂಭೋತ್ಸವ ಅದ್ದೂರಿಯಾಗಿ ನಡೆಯಿತು. ಖಾಸಗಿ ಶಾಲೆಗಳ ಮುಂಭಾಗ ಮಕ್ಕಳನ್ನು ಬಿಟ್ಟು ಹೋಗಲು ಬಂದಿದ್ದ ಪೋಷಕರ ದಟ್ಟಣೆ ಜಾಸ್ತಿ ಇತ್ತು. ಕೊಠಡಿಯ ತುಂಬಾ ಮಕ್ಕಳ ಕಲರವ ಇತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ