ಆ್ಯಪ್ನಗರ

ವಿದ್ಯುತ್‌ ಲೈನ್‌ಗೆ ಚಾಚಿದ ಮರದ ಕೊಂಬೆ

ಇಲ್ಲಿನ ಜಿಲ್ಲಾ ಒನಕೆ ಓಬವ್ವ ಕ್ರೀಡಾಂಗಣದಲ್ಲಿನ ಈಜುಕೊಳದ ಆವರಣದಲ್ಲಿ ವಿದ್ಯುತ್‌ ಲೈನ್‌ವರೆಗೆ ಬೆಳೆದಿರುವ ಮರದ ಕೊಂಬೆಗಳು ಕ್ರೀಡಾಪಟುಗಳು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿವೆ.

Vijaya Karnataka 2 Jun 2019, 5:00 am
ಚಿತ್ರದುರ್ಗ : ಇಲ್ಲಿನ ಜಿಲ್ಲಾ ಒನಕೆ ಓಬವ್ವ ಕ್ರೀಡಾಂಗಣದಲ್ಲಿನ ಈಜುಕೊಳದ ಆವರಣದಲ್ಲಿ ವಿದ್ಯುತ್‌ ಲೈನ್‌ವರೆಗೆ ಬೆಳೆದಿರುವ ಮರದ ಕೊಂಬೆಗಳು ಕ್ರೀಡಾಪಟುಗಳು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿವೆ.
Vijaya Karnataka Web the tree branch stretched to the power line
ವಿದ್ಯುತ್‌ ಲೈನ್‌ಗೆ ಚಾಚಿದ ಮರದ ಕೊಂಬೆ


ಪ್ರತಿ ದಿನ ಇಲ್ಲಿಗೆ ಬೆಳಗ್ಗೆ ಮತ್ತು ಸಂಜೆ ಬರುವ ವಾಯುವಿಹಾರಿಗಳು, ಈಜುಗಾರರು, ವಾಲಿಬಾಲ್‌, ಟೆನ್ನಿಸ್‌ ಆಟಗಾರರು, ಮಹಿಳೆಯರು, ಮಕ್ಕಳು ವಿದ್ಯುತ್‌ಲೈನ್‌ಗೆ ತಾಕುತ್ತಿರುವ ಕೊಂಬೆಗಳಿಂದ ಸಂಭವಿಸಬಹುದಾದ ವಿದ್ಯುತ್‌ ಅವಘಡ ಸಾಧ್ಯತೆ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಮಳೆಗಾಲ ಪ್ರಾರಂಭ ಆಗಿರುವುದರಿಂದ ಮಳೆ ನೀರಿಗೆ ಕೊಂಬೆಗಳು ಇನ್ನಷ್ಟು ಹುಲುಸಾಗಿ ಬೆಳೆಯಲಿವೆ. ಆದ್ದರಿಂದ ವಿದ್ಯುತ್‌ ಲೈನ್‌ಗೆ ತಾಕುವ ಕೊಂಬೆಗಳನ್ನು ತೆರವುಗೊಳಿಸಬೇಕು. ಇಲ್ಲವೇ ವಿದ್ಯುತ್‌ ಸ್ಪರ್ಶ ಆಗದಂತೆ ವೈರ್‌ಗಳಿಗೆ ಕವರಿಂಗ್‌ ಪೈಪನ್ನಾದರೂ ಅಳವಡಿಸಬೇಕು ಎಂಬುದು ಕ್ರೀಡಾಪ್ರೇಮಿಗಳ ಒತ್ತಾಯವಾಗಿದೆ.

ಕೆಲ ಮರಗಳ ಕೊಂಬೆಗಳು ವಿದ್ಯುತ್‌ ತಂತಿ ಮೇಲೆ ಬಿದ್ದಿವೆ. ಜೋರಾಗಿ ಗಾಳಿ ಬೀಸಿದರೆ ಮರಗಳ ಕೊಂಬೆ ಜತೆ ವಿದ್ಯುತ್‌ ತಂತಿ ಸಹ ಗಾಳಿಗೆ ಅಲ್ಲಾಡುತ್ತವೆ. ಕೊಂಬೆ ಜತೆ ತಂತಿ ಕೂಡ ತುಂಡಾಗಿ ಬಿದ್ದರೆ ಅವಘಢ ಕಾಯಂ. ಆದಷ್ಟು ಬೇಗ ಬೆಸ್ಕಾಂ ಇತ್ತ ಗಮನಹರಿಸಿ ಸಮಸ್ಯೆ ನಿವಾರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಾರೆ.

======ಕೋಟ್‌/

ಪ್ರತಿ ದಿನ ನಾವು ಇಲ್ಲಿ ಬರುತ್ತೇವೆ. ಮರಗಳ ಕೊಂಬೆಗಳು ವಿದ್ಯುತ್‌ ತಂತಿ ಮೇಲೆ ಬಿದ್ದಿರುವ ಕಾರಣ ಮಳೆ ಬಂದರೆ ಗ್ರೌಂಡಿಂಗ್‌ ಆಗಬಹುದು. ಅನಾಹುತ ಸಂಭವಿಸುವ ಮೊದಲು ಕೊಂಬೆಗಳನ್ನು ತೆರವುಗೊಳಿಸಬೇಕು.

-ಪಿ.ಆರ್‌.ಕನಕದಾಸ್‌, ಕ್ರೀಡಾಪಟು.

**

ಕೊಂಬೆಗಳ ತೆರವಿಗೆ ಬೆಸ್ಕಾಂ ಮನವಿ ಮಾಡಲಾಗಿದ್ದರೂ ಇತ್ತ ಗಮನ ಹರಿಸಿಲ್ಲ. ಬೆಸ್ಕಾಂನವರು ಆದಷ್ಟು ಬೇಗ ಕೊಂಬೆ ತೆರವುಗೊಳಿಸಬೇಕು.

-ಎಸ್‌.ಜಿ.ಎಸ್‌. ನಾಯ್ಡು, ಫೆಸಿಲಿಟಿ ಮ್ಯಾನೇಜರ್‌.

===

ಪ್ರತಿ ತಿಂಗಳು 1ರಿಂದ 15ನೇ ತಾರೀಖನವರೆಗೆ ಜಂಗಲ್‌ ಕಟ್ಟಿಂಗ್‌ ಮಾಡಲಾಗುತ್ತದೆ. ಈಜುಕೊಳದ ಆವರಣದಲ್ಲಿ ವಿದ್ಯುತ್‌ಲೈನ್‌ಗೆ ತಾಕುವ ಕೊಂಬೆಗಳನ್ನು ತೆರವುಗೊಳಿಸಲಾಗುವುದು.

-ಶಿವಪ್ಪ, ಎಇ, ಬೆಸ್ಕಾಂ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ