ಆ್ಯಪ್ನಗರ

ಬೆಳಕಿನಡೆಗೆ ನಡೆಸುವವನೇ ನಿಜವಾದ ಗುರು

ಕತ್ತಲೆಯಿಂದ ಬೆಳಕಿನಡೆಗೆ ನಡೆಸುವವನೇ ನಿಜವಾದ ಗುರು. ತನ್ನೆಲ್ಲಾ ವಿದ್ಯೆಗಳನ್ನು ಧಾರೆ ಎರೆದು ವಿದ್ಯಾರ್ಥಿಗಳ ಭವಿಷ್ಯ ಪ್ರಜ್ವಲಿಸುವಂತೆ ಮಾಡುವ ಗುರುವನ್ನು ಸರ್ವ ಕಾಲಕ್ಕೂ ಸ್ಮರಿಸಬೇಕು ಎಂದು ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.

Vijaya Karnataka 18 Jul 2019, 5:00 am
ಹೊಸದರ್ಗ: ಕತ್ತಲೆಯಿಂದ ಬೆಳಕಿನಡೆಗೆ ನಡೆಸುವವನೇ ನಿಜವಾದ ಗುರು. ತನ್ನೆಲ್ಲಾ ವಿದ್ಯೆಗಳನ್ನು ಧಾರೆ ಎರೆದು ವಿದ್ಯಾರ್ಥಿಗಳ ಭವಿಷ್ಯ ಪ್ರಜ್ವಲಿಸುವಂತೆ ಮಾಡುವ ಗುರುವನ್ನು ಸರ್ವ ಕಾಲಕ್ಕೂ ಸ್ಮರಿಸಬೇಕು ಎಂದು ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.
Vijaya Karnataka Web the true master is the one who leads to the light
ಬೆಳಕಿನಡೆಗೆ ನಡೆಸುವವನೇ ನಿಜವಾದ ಗುರು


ತಾಲೂಕಿನ ವೇದಾವತಿ ನದಿ ಸಮೀಪದ ಕನಕ ಗುರುಪೀಠದ ಶ್ರೀ ಮಹಾಲಕ್ಷೀ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಗುರುಪೂರ್ಣಿಮೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ವಿದ್ಯೆ ಕಲಿಸಿದ ಗುರು, ಜೀವ ಕೊಟ್ಟ ತಂದೆ ತಾಯಿಗಳನ್ನು ಎಂದಿಗೂ ನೆನೆಯಬೇಕು. ಹರ ಮುನಿದರೇ ಗುರು ಕಾಯುವನು ಎನ್ನುವ ನುಡಿ ಸತ್ಯವಾದದ್ದು. ಗುರುವಾದವನು ಶಿಷ್ಯನಾದವನಿಗೆ ಎಂದಿಗೂ ಕೆಟ್ಟದನ್ನು ಬಯಸಲಾರ. ಶಿಷ್ಯರ ತಪ್ಪು ತಿದ್ದಿ, ಸಂಸ್ಕೃತಿ, ಸಂಸ್ಕಾರ ಕಲಿಸಿ ಅವರನ್ನು ಸುಂದರವಾದ ಮೂರ್ತಿಗಳನ್ನಾಗಿ ಸಮಾಜ ಮತ್ತು ದೇಶಕ್ಕೆ ಕೊಡುಗೆಯಾಗಿ ನೀಡುತ್ತಾನೆ. ಇಂಥ ಗುರುವನ್ನು ಮರೆತರೇ ನಮಗೆ ಉಳಿಗಾಲವಿಲ್ಲ ಎಂದರು.

ಪ್ರತಿವರ್ಷದಂತೆ ಈ ಬಾರಿಯೂ ಜುಲೈ 22ರಂದು ಶ್ರೀಮಠದ ಆವರಣದಲ್ಲಿ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ. ರಾಜ್ಯದ ನಾನಾ ಭಾಗಗಳಿಂದ ಬರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಕಾಗಿನೆಲೆ ಮಠದಲ್ಲಿ ಪ್ರತಿವರ್ಷ ನಡೆಯುವ ಗುರುಪೂರ್ಣಿಮೆ ಕಾರ್ಯಕ್ರಮದ ನೇತೃತ್ವವನ್ನು ಮುಂದಿನ ಬಾರಿ ಚಿತ್ರದುರ್ಗ ಜಿಲ್ಲೆಗೆ ವಹಿಸುವಂತೆ ಕಾಗಿನೆಲೆ ಶ್ರೀಗಳಲ್ಲಿ ಮನವಿ ಮಾಡಲಾಗಿದೆ ಎಂದರು.

ನಿವೃತ್ತ ಉಪವಿಭಾಗಾಕಾರಿ ರೇವಣ್ಣ ಓಡೆಯರ್‌, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ಕೆ.ಅನಂತ್‌, ಆಕ್ಸ್‌ಪರ್ಡ್‌ ಶಾಲೆಯ ಪ್ರವೀಣ್‌, ಹೊಸದುರ್ಗ ಕನಕ ಮಹಿಳಾ ಸಂಘದವರು, ಭಕ್ತರು ಭಾಗವಹಿಸಿದ್ದರು. ಓಬಳಾಪುರ ಮಹಿಳಾ ಭಜನಾ ತಂಡದವರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ