ಆ್ಯಪ್ನಗರ

ನಿಲ್ದಾಣಗಳಲ್ಲೇ ಶೌಚಾಲಯಗಳಿಲ್ಲ

ನಗರದ ಗ್ರಾಮಾಂತರ ಠಾಣೆಯ ಎನ್‌ಎಚ್‌ 13 ಹೆದ್ದಾರಿ ಬಸ್‌ ನಿಲ್ದಾಣ, ತುರುವನೂರು ರಸ್ತೆಯ ಬಸ್‌ ನಿಲ್ದಾಣ, ಚಳ್ಳಕೆರೆ ಟೋಲ್‌ಗೇಟ್‌, ಮೆದೇಹಳ್ಳಿ ಬ್ರಿಡ್ಜ್‌, ಎಸ್‌ಜೆಎಂಐಟಿ ಸರ್ಕಲ್‌, ಹೀಗೆ ನಗರದ ಹೊರವಲಯದ ಬಹುತೇಕ ಕಡೆ ಸಾರ್ವಜನಿಕ ಶೌಚಾಲಯ ಸೌಲಭ್ಯ ಇಲ್ಲ.

Vijaya Karnataka 13 Dec 2018, 5:00 am
ಚಿತ್ರದುರ್ಗ: ನಗರದ ಗ್ರಾಮಾಂತರ ಠಾಣೆಯ ಎನ್‌ಎಚ್‌ 13 ಹೆದ್ದಾರಿ ಬಸ್‌ ನಿಲ್ದಾಣ, ತುರುವನೂರು ರಸ್ತೆಯ ಬಸ್‌ ನಿಲ್ದಾಣ, ಚಳ್ಳಕೆರೆ ಟೋಲ್‌ಗೇಟ್‌, ಮೆದೇಹಳ್ಳಿ ಬ್ರಿಡ್ಜ್‌, ಎಸ್‌ಜೆಎಂಐಟಿ ಸರ್ಕಲ್‌, ಹೀಗೆ ನಗರದ ಹೊರವಲಯದ ಬಹುತೇಕ ಕಡೆ ಸಾರ್ವಜನಿಕ ಶೌಚಾಲಯ ಸೌಲಭ್ಯ ಇಲ್ಲ.
Vijaya Karnataka Web there are no toilets at stops
ನಿಲ್ದಾಣಗಳಲ್ಲೇ ಶೌಚಾಲಯಗಳಿಲ್ಲ


ಗ್ರಾಮಾಂತರ ಠಾಣೆ ಬದಿಯ ಎನ್‌ಎಚ್‌13ನ ಸ್ಟಾಂಡ್‌ನಲ್ಲಿ ಜಗಳೂರು, ಕೊಟ್ಟೂರು, ಕೊಡ್ಲಿಗಿ, ಹೊಸಪೇಟೆ ಕಡೆಯ ಪ್ರಯಾಣಿಕರು ಇಲ್ಲಿ ಬಸ್‌ಗಳಿಗಾಗಿ ಗಂಟೆಗಟ್ಟಲೇ ಕಾಯುತ್ತಾರೆ. ಇಲ್ಲಿ ಬೆಳಗಿನಿಂದ ಸಂಜೆವರೆಗೂ ಜನ ಜಂಗುಳಿ ತಪ್ಪಿಲ್ಲ. ಇಲ್ಲಿ ಬಸ್‌ಗಾಗಿ ಕಾಯುವವರು ಟಾಯ್ಲೆಟ್‌ಗೆ ಪರದಾಡಬೇಕು.

ಪುರುಷರು ಶಾಲಾ ಕಾಂಪೌಂಡ್‌ಗೋ, ಪೊಲೀಸ್‌ ಠಾಣಾ ಕಾಂಪೌಂಡ್‌ ಕಡೆಗೋ ಮುಖ ಮಾಡಿ ನಿಂತು ಬಿಡುತ್ತಾರೆ. ಆದರೆ ಹೆಣ್ಣು ಮಕ್ಕಳ ಫಜೀತಿ ಹೇಳಬಾರದು. ಈಗ ಹೆದ್ದಾರಿ ರಸ್ತೆ ಕಾಮಗಾರಿ ಬೇರೆ ನಡೆಯುತ್ತಿದ್ದು ಅದು ಪೂರ್ತಿ ಬಟಾಬಯಲು ಜಾಗ.

ತುರುವನೂರು ಗೇಟ್‌:


ಬೆಳಗಟ್ಟ, ತುರುವನೂರು, ಮುಸ್ಟೂರು, ಹಾಯ್ಕಲ್‌, ನಾಯಕನಹಟ್ಟಿ ಮಾರ್ಗದ ಹಳ್ಳಿಗಳಿಗೆ ಹೋಗುವವರಿಗೆ ತುರುವನೂರು ಗೇಟ್‌ ಕೂಡ ಒಂದು ಬಸ್‌ ನಿಲ್ದಾಣ. ಪ್ಯಾಸೆಂಜರ್‌ ಆಟೋ ಸಹಾ ಇಲ್ಲಿಂದಲೇ ಹೊರಡುತ್ತವೆ. ಇಲ್ಲೂ ಕೂಡಾ ಬೆಳಗ್ಗೆಯಿಂದ ರಾತ್ರಿ ತನಕ ಪ್ರಯಾಣಿಕರ ಜಾತ್ರೆ ಇರುತ್ತದೆ. ಇವರಿಗೂ ಶೌಚಾಲಯದ ವ್ಯವಸ್ಥೆ ಇಲ್ಲ.

ಇಲ್ಲೂ ಅಷ್ಟೇ. ಪುರುಷರು ಹೆದ್ದಾರಿ ಸೇತುವೆ ಕಡೆ ಇಲ್ಲವೇ ಸಮೀಪದ ಗಿಡಗಳ ಪೊದೆಗಳತ್ತ ಹೋಗುತ್ತಾರೆ. ಸುತ್ತಮುತ್ತ ಮನೆಗಳು ಇದ್ದು ಕೆಲವೊಮ್ಮೆ ಪುರುಷರಿಗೂ ಕಷ್ಟ. ಮಹಿಳೆಯರದು ಅದೇ ಪಾಡು.

ಚಳ್ಳಕೆರೆ ಗೇಟ್‌:

ಚಳ್ಳಕೆರೆ ಟೋಲ್‌ಗೇಟ್‌ನಲ್ಲಿ ಈ ಸಮಸ್ಯೆ ಇನ್ನಷ್ಟು ತೀವ್ರವಾಗಿದೆ. ಇಲ್ಲಿಂದ ಚಳ್ಳಕೆರೆ, ಪಾವಗಡ, ಬಳ್ಳಾರಿ, ಹಿರಿಯೂರು, ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು, ವಿದ್ಯಾರ್ಥಿಗಳು ಈ ಗೇಟ್‌ನಲ್ಲಿ ಜಮಾಯಿಸುತ್ತಾರೆ. ಸುತ್ತಲೂ ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳಿದ್ದು ಇಡೀ ವಾತಾವರಣ ಗೌಜಿನಿಂದ ಕೂಡಿರುತ್ತದೆ.

ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಸ್ಟಾಂಡ್‌ ಹೊರತುಪಡಿಸಿದರೆ ಅತಿ ಹೆಚ್ಚು ಪ್ರಯಾಣಿಕರು ಅವಲಂಬಿಸಿರುವುದು ಇದೇ ಟೋಲ್‌ಗೇಟ್‌ ನಿಲ್ದಾಣವನ್ನೇ. ಇಲ್ಲಿ ದಶಕಗಳಿಂದ ಇದೇ ಪರಿಸ್ಥಿತಿ ಇದ್ದರೂ ನಗರಸಭೆ ಇಲ್ಲೊಂದು ಶೌಚಾಲಯ ಕಟ್ಟಲು ಮುಂದಾಗಿಲ್ಲ. ಇಲ್ಲಿನ ಪ್ರಯಾಣಿಕರ ಪರದಾಟವೂ ಸಾಮಾನ್ಯ.

ವಿಕ ಈ ಹಿಂದೆ ಕೂಡ ಇಲ್ಲಿ ಪ್ರಯಾಣಿಕರು ಎದುರಿಸುವ ಸಮಸ್ಯೆ ಕುರಿತು ಬೆಳಕು ಚೆಲ್ಲಿತ್ತು. ನಗರಸಭೆಗೆ ಮಾತ್ರ ಇಲ್ಲಿನ ಜನರ ಸಮಸ್ಯೆ ಕಣ್ಣಿಗೆ ಕಾಣುತ್ತಿಲ್ಲ.

**ಕೋಟ್‌/

ಒಂದು ಜಿಲ್ಲಾ ಕೇಂದ್ರವಾಗಿದ್ದು ಬಸ್‌ ನಿಲ್ದಾಣಗಳಲ್ಲಿ ಸೂಕ್ತ ಸೌಕರ್ಯ ಇಲ್ಲದ ನಗರವೆಂದರೆ ಚಿತ್ರದುರ್ಗ ಮಾತ್ರ. ಎಷ್ಟೊಂದು ಜನ ಸ್ಟೂಡೆಂಟ್ಸ್‌ ಇದೀವಿ. ಹೆಣ್ಣು ಮಕ್ಕಳು, ದೊಡ್ಡವರು ಎಲ್ರೂ ಇದಾರೆ. ಆದರೆ, ಶೌಚಾಲಯದ ವ್ಯವಸ್ಥೆ ಮಾತ್ರ ಇಲ್ಲ.

- ಭಾಸ್ಕರ್‌, ಪಾಲಿಟೆಕ್ನಿಕ್‌ ವಿದ್ಯಾರ್ಥಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ