ಆ್ಯಪ್ನಗರ

ತಿಪ್ಪೇರುದ್ರಸ್ವಾಮಿ ಜಾತ್ರೆ ಧಾರ್ಮಿಕ ಕಾರ್ಯಗಳಿಗೆ ಚಾಲನೆ

ಕಂಕಣ ಧಾರಣೆ, ಪಂಚಕಲಶ ಸ್ಥಾಪನೆ ಮೂಲಕ ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವದ ಧಾರ್ಮಿಕ ಕಾರ್ಯಗಳಿಗೆ ಶುಕ್ರವಾರ ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಚಾಲನೆ ನೀಡಿದರು.

Vijaya Karnataka 17 Mar 2019, 5:00 am
ನಾಯಕನಹಟ್ಟಿ : ಕಂಕಣ ಧಾರಣೆ, ಪಂಚಕಲಶ ಸ್ಥಾಪನೆ ಮೂಲಕ ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವದ ಧಾರ್ಮಿಕ ಕಾರ್ಯಗಳಿಗೆ ಶುಕ್ರವಾರ ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಚಾಲನೆ ನೀಡಿದರು.
Vijaya Karnataka Web thippareddwamy fair is a religious activity
ತಿಪ್ಪೇರುದ್ರಸ್ವಾಮಿ ಜಾತ್ರೆ ಧಾರ್ಮಿಕ ಕಾರ್ಯಗಳಿಗೆ ಚಾಲನೆ


ಮಾ.22ರಂದು ಜರುಗುವ ಜಾತ್ರೆಯ ಅಂಗವಾಗಿ ಒಳಮಠದ ದೇವಾಲಯದ ಆವರಣದಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಜಿಲ್ಲಾಧಿಕಾರಿ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಮಹಾಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹವಾಹನ, ಮಂಟಪ ಪೂಜೆ, ಪಂಚಕಲಶ ಸ್ಥಾಪನೆ ಕಾರ್ಯಗಳನ್ನು ನೆರವೇರಿಸಲಾಯಿತು. ದೇವಾಲಯದ ಮಂಟಪ ಪ್ರಾಂಗಣದಲ್ಲಿ ಧಾರ್ಮಿಕ ವಿಧಿಗಳು ಜರುಗಿದವು.

ಗ್ರಾಮದ ಮುಖಂಡರು, ಆಯಾಗಾರರು ಸೇರಿದಂತೆ ರಥೋತ್ಸವದಲ್ಲಿ ಪ್ರಮುಖ ಕಾರ್ಯ ನಿರ್ವಹಿಸುವ ಜನರಿಗೆ ಕಂಕಣಧಾರಣೆ ಮಾಡಲಾಯಿತು. ಮಹಾಗಣಪತಿ ಹಾಗೂ ಪಂಚಕಲಶಗಳನ್ನು ಪ್ರತಿಷ್ಠಾಪಿಸಿ ಮಂಟಪ ಪೂಜೆ ನೆರವೇರಿಸಲಾಯಿತು. ಉತ್ಸವ ಮೂರ್ತಿಯನ್ನು ಗರ್ಭಗುಡಿಯಿಂದ ವಿಶೇಷ ಪೂಜೆಯೊಂದಿಗೆ ಹೊರತರಲಾಯಿತು. ನಂತರ ಪಲ್ಲಕ್ಕಿಯಲ್ಲಿ ಉತ್ಸವ ಮೂತಿರ್ಯಯನ್ನು ಪ್ರತಿಷ್ಠಾಪಿಸಿ ದೇವಾಲಯದ ಸುತ್ತಲೂ ಮೂರು ಬಾರಿ ಪ್ರದಕ್ಷಿಣೆ ಹಾಕಲಾಯಿತು.

ಉತ್ಸವದಲ್ಲಿ ದೇವಾಲಯದ ನಂದಿ ಧ್ವಜ, ಕರಡಿ ಮಜಲು ಸೇರಿದಂತೆ ನಾನಾ ವಾದ್ಯಗಳಿದ್ದವು. ದೇವಾಲಯವನ್ನು ಹೂವು, ಬಣ್ಣದ ವಿದ್ಯುತ್‌ ದೀಪಗಳಿಂದ ಸಿಂಗರಿಸಲಾಗಿತ್ತು. ಜಾತ್ರೆಯ ದಿನದ ವರೆಗೆ ಪ್ರತಿದಿನ ಈಶ್ವರ ದೇವಾಲಯದಿಂದ ಉತ್ಸವ ಮೂರ್ತಿಯ ಚಿಕ್ಕ ರಥೋತ್ಸವ ಜರುಗುವುದು. ಕಂಕಣಧಾರಣೆ ಕಾರ್ಯಕ್ರಮದ ನಂತರ ಜಿಲ್ಲಾಧಿಕಾರಿ ರಥವನ್ನು ವೀಕ್ಷಿಸಿ, ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ಉತ್ಸವ ವಿವರ: ಮಾ.16 ಸರ್ಪವಾಹನೋತ್ಸವ, ಮಾ.17 ಮಯೂರ ವಾಹನೋತ್ಸವ, ಮಾ.18 ರಥಕ್ಕೆ ಕಲಶ ಸ್ಥಾಪನೆ ಹಾಗೂ ಗಜ ವಾಹನೋತ್ಸವ, ಮಾ.19 ಸಿಂಹವಾಹನೋತ್ಸವ, ಮಾ.20 ಅಶ್ವವಾಹನೋತ್ಸವ, ಮಾ.21 ರಥಕ್ಕೆ ತೈಲಾಭಿಷೇಕ, ಮಾ. 22ರಂದು ಮಧ್ಯಾಹ್ನ 2.30ಕ್ಕೆ ದೊಡ್ಡ ರಥೋತ್ಸವ ಜರುಗಲಿದೆ.

ಕಂಕಣ ಧಾರಣೆ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ವಿಜಯ್‌ ಕುಮಾರ್‌, ಶಾಸಕ ಟಿ.ರಘುಮೂರ್ತಿ, ದೇವಾಲಯದ ಇಒ ಎಸ್‌.ಪಿ.ಬಿ.ಮಹೇಶ್‌, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜೆ.ಪಿ.ರವಿಶಂಕರ್‌, ವಿಧಾನ ಪರಿಷತ್‌ ಸದಸ್ಯೆ ಜಯಮ್ಮ ಬಾಲರಾಜ್‌ಸದಸ್ಯರಾದ ಗೋವಿಂದರಾಜ್‌, ರುದ್ರಮುನಿ, ಹಂಸವೇಣಿ, ಲಲಿತಮ್ಮ, ನಾಗಣ್ಣ,ಮುನಿಯಪ್ಪ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ