ಆ್ಯಪ್ನಗರ

ಜ.13ಕ್ಕೆ ಶ್ರೀ ಕೇತೆದೇವರ ಪರಿಷೆ, ಸಿದ್ಧಗೊಂಡ ಬಾರೆಮುಳ್ಳಿನ ದೇವಸ್ಥಾನ

ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಪರಶುರಾಂಪುರದ ಪುರ್ಲಹಳ್ಳಿ ಗ್ರಾಮದ ಶ್ರೀ ಕೇತೆದೇವರ ಪರಿಷೆಯು ಜನವರಿ 13ರಂದು ನಡೆಯಲಿದೆ. ಇದಕ್ಕಾಗಿ ಬಾರೆಮುಳ್ಳಿನ ದೇಗಲುವನ್ನು ಭಕ್ತರು ಬರಿಗಾಲಿನಲ್ಲಿ ನಿರ್ಮಿಸಿದ್ದಾರೆ. ಸೂರ್ಯೊದಯದ ವೇಳೆಗಾಗಲೇ ಮುಳ್ಳಿನ ದೇಗುಲ ನಿರ್ಮಾಣಗೊಂಡಿತು.

Vijaya Karnataka Web 9 Jan 2020, 11:10 am
ಪರಶುರಾಂಪುರ: ಸಮೀಪದ ಪುರ್ಲಹಳ್ಳಿ ಗ್ರಾಮ ಬಳಿಯ ವಸಲು ದಿನ್ನೆಯಲ್ಲಿ ಕಾಡುಗೊಲ್ಲರ ಆರಾಧ್ಯ ದೈವ ಶ್ರೀ ಕೇತೆದೇವರ ಪರಿಷೆ ಜ.13ರಂದು ನಡೆಯುವ ಹಿನ್ನೆಲೆಯಲ್ಲಿ ಬುಧವಾರ ಸೂರ್ಯೋದಯ ವೇಳೆ ದೇವರ ಒಕ್ಕಲಿನ ಎರಡು ಗುಂಪಿನ ಅಣ್ಣ ತಮ್ಮಂದಿರು ಭಕ್ತಿಯಿಂದ ಬರಿಗಾಲು, ಬರಿಮೈಯಲ್ಲೇ ಬಾರೆಮುಳ್ಳಿನ ದೇಗುಲವನ್ನು ಕ್ಷಣಾರ್ಧದಲ್ಲಿ ಪೈಪೋಟಿಯಿಂದ ನಿರ್ಮಿಸಿದರು.
Vijaya Karnataka Web Thorn Temple


ಸಂಪ್ರದಾಯದಂತೆ ದೇವರ ಮೂಲ ಸ್ಥಳ ಚನ್ನಮ್ಮನಾಗತಿಹಳ್ಳಿಯಿಂದ ಬೆಳಗ್ಗೆ ಪೂಜೆ ನೆರವೇರಿಸಿ, ಜಾನಪದ ವಾದ್ಯಗಳ ಮೂಲಕ ದೇವರ ಕಳಶಗಳನ್ನು ವಸಲುದಿನ್ನೆಗೆ ತರಲಾಯಿತು.

ಮುಳ್ಳಿನ ಗುಡಿ: ಗುಡಿ ನಿರ್ಮಾಣಕ್ಕೆ ಐಗಾರಲಹಳ್ಳಿಯಿಂದ ತರಲಾಗಿದ್ದ ಪೂಜಾಮರ (ಹತ್ತಿ)ವನ್ನು ದೇಗುಲ ನಿರ್ಮಾಣಕ್ಕೆ ಬಳಸಿ ಬೀಸುಗಳ ತೊಗಸೆ, ತುಗ್ಗಲಿ, ಹಾಪುಮೋರು ಹಾಗೂ ಮೇಲು ಹೊದಿಕೆಯಾಗಿ ಬಂದ್ರೆಸೊಪ್ಪು ಬಳಸಲಾಯಿತು. ಬಾರೆ ಮುಳ್ಳು ಬಳಸಿ ಗುಡಿಕಟ್ಟಿನ ಅಣ್ಣ ತಮ್ಮಂದಿರಾದ ಬೊಮ್ಮನಗೊಲ್ಲಗೌಡರು (ಗುಡಿಹಳ್ಳಿ ವಂಶದವರು) ಹಾಗೂ ಕೋಣನಗೊಲ್ಲಗೌಡರು (ಈರುಗಾರ ವಂಶದವರು) ಪ್ರಬಲ ಪೈಪೋಟಿಯಿಂದ 20-30 ನಿಮಿಷದೊಳಗೆ ಸಿನಿಮೀಯ ರೀತಿ ಮುಳ್ಳಿನ ದೇಗುಲ ನಿರ್ಮಾಣ ಮಾಡಿದರು.

ಸಾಮೂಹಿಕ ವಿವಾಹಕ್ಕೆ ದ.ಕನ್ನಡ, ಉಡುಪಿ ದೇಗುಲಗಳ ಪೌರೋಹಿತ್ಯ!

ಕಂಚಿನ ಕಳಸ: ಮುಳ್ಳಿನ ದೇಗುಲವನ್ನು ಮಡಿಯಿಂದ ಬರಿ ಮೈ ಮತ್ತು ಬರಿಗಾಲಿನಲ್ಲೇ ಸರ ಸರನೇ ಏರಿ ಗೋಪುರಕ್ಕೆ ಕಂಚಿನ ಕಳಶ ಇಟ್ಟರು. ಈ ಸನ್ನಿವೇಶವನ್ನು ನೋಡಲು ಆಗಮಿಸಿದ ನೂರಾರು ಭಕ್ತರು ಶಿಳ್ಳೆ, ಕೇಕೆ ಹೊಡೆದು ಸಂಭ್ರಮಿಸಿದರು. ನೆರೆದಿದ್ದ ಭಕ್ತರಿಗೆ ರಾಗಿಮುದ್ದೆ, ಬದನೆಕಾಯಿಭಜ್ಜಿ, ಕುಂಬಳ ಕಾಯಿ ಹುಗ್ಗಿ (ಪಾಯಸ) ನೆರೆದ ಕೆಲಭಕ್ತರಿಗೆ ಉಣಬಡಿಸಿದರು. ದೇವಸ್ಥಾನದ ಪೂಜಾರಿ ಚಂದ್ರಣ್ಣ ಹಾಗೂ ಸುತ್ತಮುತ್ತಲ ಹಳ್ಳಿಯ ಜನಪ್ರತಿನಿಧಿಗಳು, ಮುಖಂಡರು, ಅಣ್ಣತಮ್ಮಂದಿರು ಸಮುದಾಯದ ಸುತ್ತಮುತ್ತಲಿನ ಹಿರಿಯ ಮುಖಂಡರು, ಪೂಜಾರಿಗಳು ಹಾಗೂ ಗ್ರಾಮಸ್ಥರು ಇದ್ದರು.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಿಂದ ನೆರೆ ಪರಿಹಾರ ನಿಧಿಗೆ ರೂ 2 ಕೋಟಿ ರೂ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ