ಆ್ಯಪ್ನಗರ

ಟ್ರ್ಯಾಕ್ಟರ್‌ ಪಲ್ಟಿ: ಮಹಿಳೆ ಸಾವು-16 ಜನರಿಗೆ ಗಾಯ

ದೊಡ್ಡಹೊಟ್ಟೆ ರಂಗನಾಥಸ್ವಾಮಿ ದೇವಸ್ಥಾನದಿಂದ ವಾಪಾಸ್‌ ಬರುತ್ತಿದ್ದ ಟ್ರ್ಯಾಕ್ಟರ್‌ ಪಲ್ಪಿಯಾಗಿ ಒಬ್ಬ ಮಹಿಳೆ ಸಾವನ್ನಪ್ಪಿದ್ದು, 16 ಜನರಿಗೆ ಗಾಯಗೊಂಡಿರುವ ಘಟನೆ ತಾಲೂಕಿನ ಲೋಕದೊಳಲು-ಗುಡ್ಡದಸಾಂತೇನಹಳ್ಳಿ ಮಧ್ಯೆ ಶನಿವಾರ ರಾತ್ರಿ ಸಂಭವಿಸಿದೆ.

Vijaya Karnataka 4 Mar 2019, 5:00 am
ಹೊಳಲ್ಕೆರೆ : ದೊಡ್ಡಹೊಟ್ಟೆ ರಂಗನಾಥಸ್ವಾಮಿ ದೇವಸ್ಥಾನದಿಂದ ವಾಪಾಸ್‌ ಬರುತ್ತಿದ್ದ ಟ್ರ್ಯಾಕ್ಟರ್‌ ಪಲ್ಪಿಯಾಗಿ ಒಬ್ಬ ಮಹಿಳೆ ಸಾವನ್ನಪ್ಪಿದ್ದು, 16 ಜನರಿಗೆ ಗಾಯಗೊಂಡಿರುವ ಘಟನೆ ತಾಲೂಕಿನ ಲೋಕದೊಳಲು-ಗುಡ್ಡದಸಾಂತೇನಹಳ್ಳಿ ಮಧ್ಯೆ ಶನಿವಾರ ರಾತ್ರಿ ಸಂಭವಿಸಿದೆ.
Vijaya Karnataka Web tractor palty womans death 16 people wounded
ಟ್ರ್ಯಾಕ್ಟರ್‌ ಪಲ್ಟಿ: ಮಹಿಳೆ ಸಾವು-16 ಜನರಿಗೆ ಗಾಯ


ಹೊಸದುರ್ಗ ತಾಲೂಕಿನ ಕಬ್ಬಳ ಗ್ರಾಮದ ಹನುಮಮ್ಮ(70) ತೀವ್ರ ಗಾಯಗೊಂಡು ಮೃತಪಟ್ಟಿದ್ದಾರೆ. ಗಾಯಗೊಂಡ ಇವರಿಗೆ ಹೊಳಲ್ಕೆರೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆಂದು ದಾವಣಗೆರೆ ಚಿಗಟೇರಿ ಆಸ್ಪತ್ರೆ ಕರೆದೊಯ್ಯಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಹನುಮಮ್ಮ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಗಾಯಗೊಂಡ ರುದ್ರಪ್ಪ, ಜಯಪ್ಪ, ಸುಶೀಲಮ್ಮ, ಯಶೋದ, ಸುಶೀಲಮ್ಮ, ಸುಧಾ, ಶ್ರೀನಿವಾಸ, ತಿಪ್ಪೇಶ, ರತ್ನಮ್ಮ, ಗೀತಾ, ಶೇಖರಪ್ಪ, ಮಾನ್ಯ, ಆನಂದ, ರಾಮಚಂದ್ರ, ಇಂದ್ರಮ್ಮ, ಗಿರೀಶ್‌, ಟ್ಯಾಕ್ಟರ್‌ ಚಾಲಕ ಪ್ರಹ್ಲಾದ ಸೇರಿದಂತೆ 16 ಜನರನ್ನು ಚಿತ್ರದುರ್ಗ, ಹೊಳಲ್ಕೆರೆ, ದಾವಣಗೆರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಲೂಕಿನ ಎನ್‌.ಜಿ.ಹಳ್ಳಿ ಬಳಿಯ ಮೇಗಳಕೊಟ್ಟಿಗೆ ಗ್ರಾಮದ ಆನಂದ್‌ ಎಂಬವರು ತಮ್ಮ ಮಗಳ ಜವಳ ಕಾರ್ಯಕ್ಕೆ ಟ್ರ್ಯಾಕ್ಟರ್‌ನಲ್ಲಿ ಸ್ನೇಹಿತರು, ಸಂಬಂಧಿಕರೊಂದಿಗೆ ಶನಿವಾರ ಬೆಳಗ್ಗೆ ಲೋಕದೊಳಲು ಬಳಿಯ ದೊಡ್ಡಹೊಟ್ಟೆ ಶ್ರೀರಂಗನಾಥಸ್ವಾಮಿ ಬೆಟ್ಟಕ್ಕೆ ತೆರಳಿದ್ದರು. ಅಲ್ಲಿ ಜವಳ ಕಾರ್ಯ ಮುಗಿಸಿಕೊಂಡು ರಾತ್ರಿ ಊರಿಗೆ ವಾಪಾಸ್‌ ಬರುವ ವೇಳೆ ಲೋಕದೊಳಲು-ಗುಡ್ಡದಸಾಂತೇನಹಳ್ಳಿ ಮಧ್ಯೆ ಈ ಘಟನೆ ಸಂಭವಿಸಿದೆ. ಸ್ಥಳಕ್ಕೆ ಪಿಎಸ್‌ಐ ಮಹೇಶ್‌, ಸಿಬ್ಬಂದಿ ಭೇಟಿ ನೀಡಿದ್ದು, ಹೊಳಲ್ಕೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ