ಆ್ಯಪ್ನಗರ

ಅಲೆಮಾರಿ, ಸುಡುಗಾಡು ಸಿದ್ಧರ ಧರಣಿ

ಅಲೆಮಾರಿ ಹಾಗೂ ಸುಡುಗಾಡು ಸಿದ್ಧರ ಸಮುದಾಯದವರಿಗೆ ಜಾತಿ ಪ್ರಮಾಣ ಪತ್ರ ನೀಡಬೇಕು, ನಿವೇಶನ ಹಾಗೂ ಮನೆ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಿದರು.

Vijaya Karnataka 19 Oct 2019, 9:02 pm
ಚಿತ್ರದುರ್ಗ: ಅಲೆಮಾರಿ ಹಾಗೂ ಸುಡುಗಾಡು ಸಿದ್ಧರ ಸಮುದಾಯದವರಿಗೆ ಜಾತಿ ಪ್ರಮಾಣ ಪತ್ರ ನೀಡಬೇಕು, ನಿವೇಶನ ಹಾಗೂ ಮನೆ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಿದರು.
Vijaya Karnataka Web tramp dharani
ಅಲೆಮಾರಿ, ಸುಡುಗಾಡು ಸಿದ್ಧರ ಧರಣಿ


ಅಲೆಮಾರಿ, ಅರೆಅಲೆಮಾರಿ ಸಮುದಾಯ ಸಮಸ್ಯೆ ಚರ್ಚಿಸಲು ಜಿಲ್ಲಾಧಿಕಾರಿ ಅವರು ಸಭೆ ನಡೆಸಬೇಕು. ಸುಡುಗಾಡು ಸಿದ್ದರು ಮತ್ತು ಅಲೆಮಾರಿ ಜನಾಂಗಕ್ಕೆ ಸಾಮಾಜಿಕ ಅಧ್ಯಯನದ ಪ್ರಕಾರ ಆಯಾ ಜಾತಿಗಳಿಗೆ ಪ್ರಮಾಣ ಪತ್ರ ನೀಡಬೇಕು, ಅಲೆಮಾರಿ ಕಾಲೋನಿಗಳಿಗೆ ಕುಡಿಯುವ ನೀರು, ಚರಂಡಿ, ರಸ್ತೆ, ವಿದ್ಯುತ್‌ ದೀಪ ಸೇರಿದಂತೆ ಮತ್ತಿತರೆ ನಾಗರಿಕ ಮೂಲ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯ ಎಲ್ಲನಗರ, ಪಟ್ಟಣಗಳಲ್ಲಿನೂರಾರು ವರ್ಷಗಳಿಂದ ವಾಸ್ತವ್ಯ ಮಾಡಿರುವ ಅಲೆಮಾರಿ, ಸುಡುಗಾಡು ಸಿದ್ದರು, ಶಿಳ್ಯಕ್ಯಾತರು, ಮುಂಡಾಲರು, ದೊಂಬಿದಾಸರು, ಚನ್ನದಾಸರು, ಕಿನ್ನರಿಜೋಗಿ, ಜೋಗಿ ಮುಂತಾದ ಅಲೆಮಾರಿ ಜನಾಂಗ ಯಾವುದೇ ನಾಗರಿಕ ಮೂಲ ಸೌಕರ್ಯ ಪಡೆದುಕೊಳ್ಳುವಲ್ಲಿಸಾಧ್ಯವಾಗಿಲ್ಲ, ನಿವೇಶನ ಮನೆಗಳಿಲ್ಲ, ಜಾತಿ ಪ್ರಮಾಣ ಪತ್ರವಿಲ್ಲದೇ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಲು ಸಾಧ್ಯ ಆಗುತ್ತಿಲ್ಲ, ಸರಕಾರದ ಪರವಾಗಿ ಬರುವಂತ ಯಾವುದೇ ಭರವಸೆಗಳು ಈಡೇರಿಲ್ಲ. ಕಳೆದ ಒಂದೆರೆಡು ವರ್ಷಗಳಿಂದ ಅಲೆಮಾರಿ, ಅರೆಅಲೆಮಾರಿ ಬುಡಕಟ್ಟು ಎಸ್‌ಸಿ, ಎಸ್‌ಟಿ ಮಹಾಸಭಾ ಹಾಗೂ ವಿಮುಕ್ತಿ ವಿದ್ಯಾಸಂಸ್ಥೆ, ಚಿತ್ರದುರ್ಗ ಮತ್ತು ಕರ್ನಾಟಕ ಶಾಂತಿ ಸೌಹಾರ್ದ ವೇದಿಕೆ ನೇತೃತ್ವದಲ್ಲಿಬುಡಕಟ್ಟು ಕಾಡುಸಿದ್ದರ ನಾಗರಿಕ ಮೂಲ ಸೌಲಭ್ಯಗಳಿಗಾಗಿ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಆದಾಗ್ಯೂ ಯಾವುದೇ ಪ್ರಯೋಜನ ಆಗಿಲ್ಲಎಂದು ಧರಣಿನಿರತರು ಅಳಲು ತೋಡಿಕೊಂಡರು.

ಅಲೆಮಾರಿ, ಅರೆಅಲೆಮಾರಿ ಬುಡಕಟ್ಟು ಎಸ್‌ಸಿ, ಎಸ್‌ಟಿ ಮಹಾಸಭಾ ಜಿಲ್ಲಾಧ್ಯಕ್ಷ ಕೆ.ಎಂ.ನಾಗರಾಜ್‌, ವಿಮುಕ್ತಿ ವಿದ್ಯಾಸಂಸ್ಥೆ ನಿರ್ದೇಶಕ ಆರ್‌.ವಿಶ್ವಸಾಗರ್‌, ಕರ್ನಾಟಕ ಶಾಂತಿ ಮತ್ತು ಸೌಹಾರ್ದತ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್‌ಕುಮಾರ್‌, ಶಿಳ್ಯಕ್ಯಾತರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಪ್ಪ, ಬುಡ್ಗ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಗುರುಮೂರ್ತಿ, ಚನ್ನದಾಸರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ರಂಗಪ್ಪ, ವಿಮುಕ್ತ ವಿದ್ಯಾಸಂಸ್ಥೆ ಸಂಯೋಜಕ ಕುಮಾರ್‌, ಸುಡುಗಾಡು ಸಿದ್ದರ ಸಂಘದ ಉಪಾಧ್ಯಕ್ಷ ಜಯಣ್ಣ, ಟಿ.ಬಾಬು, ಜಿ.ನಾಗರಾಜ, ಟಿ.ಮಂಜುನಾಥ, ಮಹಾನಂದಿ, ದುರುಗಪ್ಪ, ಗೋವಿಂದ, ಬಾಲು, ರೆಡ್ಡಿ, ಗಂಗಣ್ಣ, ಶಿವಮ್ಮ, ರಮೇಶ, ವೆಂಕಟೇಶ, ಮಹಂತೇಶ, ಜಯಲಕ್ಷಿತ್ರ್ಮ, ಲತಾ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ