ದುರ್ಗದಲ್ಲಿ ಪುರಾತನ ವೀರಗಲ್ಲು ಪತ್ತೆ
Vijaya Karnataka 23 Jul 2019, 5:00 am
ಚಿತ್ರದುರ್ಗ : ತಾಲೂಕಿನ ಹಿರೇಗುಂಟನೂರು ಗ್ರಾಮದ ಜಮೀನೊಂದರಲ್ಲಿ ಕ್ರಿ.ಶ. 12-13ನೇ ಶತಮಾನದ ಹೊಯ್ಸಳರ ಕಾಲದ ಪುರಾತನ ವೀರಗಲ್ಲು ಪತ್ತೆಯಾಗಿದ್ದು, ರಂಗಯ್ಯನ ಬಾಗಿಲು ಬಳಿಯಿರುವ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಹಸ್ತಾಂತರಿಸಲಾಗಿದೆ.
ಮೂರು ಪಟ್ಟಿಕೆಗಳಿಂದ ಕೂಡಿರುವ ವೀರಗಲ್ಲಿನ ಮಧ್ಯಭಾಗದಲ್ಲಿ ಐದು ಸಾಲುಗಳ ಶಾಸನವಿದೆ. ಮೊದಲ ಪಟ್ಟಿಕೆಯಲ್ಲಿ ರಣರಂಗದಲ್ಲಿ ವೀರನು ವೀರಾವೇಶದಿಂದ ಹೋರಾಡುವ ಚಿತ್ರ. ತನ್ನ ಎರಡು ಕೈಯಲ್ಲಿರುವ ಭರ್ಚಿಗಳಿಂದ ಎಡ ಮತ್ತು ಬಲಭಾಗದ ವೈರಿಗಳಿಗೆ ಇರಿದಿರುವುದು. ಮತ್ತೊಬ್ಬ ವೈರಿಯ ತಲೆ ತುಂಡಾಗಿರುವ ಚಿತ್ರಗಳಿವೆ.
ಎರಡನೆ ಪಟ್ಟಿಕೆಯಲ್ಲಿ ದೇವತಾ ಸ್ತ್ರೀಯರು, ಅಪ್ಸರೆಯರು ವೀರನನ್ನು ಸ್ವರ್ಗ ಲೋಕಕ್ಕೆ ಕರೆದೊಯ್ಯುತ್ತಿರುವ ಚಿತ್ರ. ಮೂರನೆ ಪಟ್ಟಿಕೆಯಲ್ಲಿ ವೀರ ಮರಣದ ಚಿತ್ರ. ಒಬ್ಬ ಯತಿ ಶಿವನನ್ನು ಆರಾಧಿಸುತ್ತಿರುವ, ವೀರನು ಧ್ಯಾನಸ್ಥನಾಗಿ ಕುಳಿತಿರುವುದು. ಆಕಳು ಮತ್ತು ಕರು ಶಿವಲಿಂಗ ಸೂರ್ಯ ಮತ್ತು ಚಂದ್ರ ಚಿತ್ರಗಳೂ ಇವೆ.
ಮಹಾ ಸಾಮಂತಾಧಿಪತಿ ಮಾಚನಾಯಕನ ಕಾಲದಲ್ಲಿ ಆಶ್ವೀಜ ಶುದ್ಧ ವಿಜಯ ದಶಮಿಯಂದು ಹುತಾತ್ಮ ವೀರನ ಪರಿವಾರಕ್ಕೆ ನೀಡುವ ಭೂಮಿ ದಾನದ ಉಲ್ಲೇಖವಿದೆ. ಪಟ್ಟಿಕೆಯ ಮಧ್ಯ ಭಾಗದಲ್ಲಿರುವ ಶಾಸನದ ಅಕ್ಷ ರಗಳು ಅಲ್ಲಲ್ಲಿ ಅಳಿಸಿ ಹೋಗಿದ್ದು, ಶಿವಮೊಗ್ಗದ ಇತಿಹಾಸ ಸಂಶೋಧಕ ಡಾ.ಜಗದೀಶ್ ಶಾಸನ ಓದಲು ಸಹಕರಿಸಿದರು ಎಂದು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಸಹಾಯಕ ನಿರ್ದೇಶಕ ಜಿ.ಪ್ರಹ್ಲಾದ್ ತಿಳಿಸಿದ್ದಾರೆ.
ಮೂರು ಪಟ್ಟಿಕೆಗಳಿಂದ ಕೂಡಿರುವ ವೀರಗಲ್ಲಿನ ಮಧ್ಯಭಾಗದಲ್ಲಿ ಐದು ಸಾಲುಗಳ ಶಾಸನವಿದೆ. ಮೊದಲ ಪಟ್ಟಿಕೆಯಲ್ಲಿ ರಣರಂಗದಲ್ಲಿ ವೀರನು ವೀರಾವೇಶದಿಂದ ಹೋರಾಡುವ ಚಿತ್ರ. ತನ್ನ ಎರಡು ಕೈಯಲ್ಲಿರುವ ಭರ್ಚಿಗಳಿಂದ ಎಡ ಮತ್ತು ಬಲಭಾಗದ ವೈರಿಗಳಿಗೆ ಇರಿದಿರುವುದು. ಮತ್ತೊಬ್ಬ ವೈರಿಯ ತಲೆ ತುಂಡಾಗಿರುವ ಚಿತ್ರಗಳಿವೆ.
ಎರಡನೆ ಪಟ್ಟಿಕೆಯಲ್ಲಿ ದೇವತಾ ಸ್ತ್ರೀಯರು, ಅಪ್ಸರೆಯರು ವೀರನನ್ನು ಸ್ವರ್ಗ ಲೋಕಕ್ಕೆ ಕರೆದೊಯ್ಯುತ್ತಿರುವ ಚಿತ್ರ. ಮೂರನೆ ಪಟ್ಟಿಕೆಯಲ್ಲಿ ವೀರ ಮರಣದ ಚಿತ್ರ. ಒಬ್ಬ ಯತಿ ಶಿವನನ್ನು ಆರಾಧಿಸುತ್ತಿರುವ, ವೀರನು ಧ್ಯಾನಸ್ಥನಾಗಿ ಕುಳಿತಿರುವುದು. ಆಕಳು ಮತ್ತು ಕರು ಶಿವಲಿಂಗ ಸೂರ್ಯ ಮತ್ತು ಚಂದ್ರ ಚಿತ್ರಗಳೂ ಇವೆ.
ಮಹಾ ಸಾಮಂತಾಧಿಪತಿ ಮಾಚನಾಯಕನ ಕಾಲದಲ್ಲಿ ಆಶ್ವೀಜ ಶುದ್ಧ ವಿಜಯ ದಶಮಿಯಂದು ಹುತಾತ್ಮ ವೀರನ ಪರಿವಾರಕ್ಕೆ ನೀಡುವ ಭೂಮಿ ದಾನದ ಉಲ್ಲೇಖವಿದೆ. ಪಟ್ಟಿಕೆಯ ಮಧ್ಯ ಭಾಗದಲ್ಲಿರುವ ಶಾಸನದ ಅಕ್ಷ ರಗಳು ಅಲ್ಲಲ್ಲಿ ಅಳಿಸಿ ಹೋಗಿದ್ದು, ಶಿವಮೊಗ್ಗದ ಇತಿಹಾಸ ಸಂಶೋಧಕ ಡಾ.ಜಗದೀಶ್ ಶಾಸನ ಓದಲು ಸಹಕರಿಸಿದರು ಎಂದು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಸಹಾಯಕ ನಿರ್ದೇಶಕ ಜಿ.ಪ್ರಹ್ಲಾದ್ ತಿಳಿಸಿದ್ದಾರೆ.