ಆ್ಯಪ್ನಗರ

ವೈಜಂಕ್ಷ ನ್‌ ನಾಲಾ ಕಾಮಗಾರಿ ಸೇತುವೆ ವೀಕ್ಷಣೆ

ಹಿರಿಯೂರು ವಾಣಿವಿಲಾಸ ಸಾಗರಕ್ಕೆ ನೀರು ಹರಿಸುವ ಭದ್ರಾ ಮೇಲ್ದಂಡೆ ಕಾಮಗಾರಿ ಯೋಜನೆಯ ಅಜ್ಜಂಪುರ ಬಳಿ ರೈಲ್ವೆ ಕ್ರಾಸಿಂಗ್‌ ಬಳಿ ಕುಸಿದಿರುವ ವೈಜಂಕ್ಷ ನ್‌ ನಾಲಾ ಕಾಮಗಾರಿಯ ಸೇತುವೆ ಸ್ಥಳಕ್ಕೆ ಚಿತ್ರದುರ್ಗ ಸಂಸದ ಎ. ನಾರಾಯಣಸ್ವಾಮಿ ಮಂಗಳವಾರ ಭೇಟಿ ನೀಡಿ ವೀಕ್ಷಿಸಿದರು.

Vijaya Karnataka 24 Jul 2019, 5:00 am
ಚಿತ್ರದುರ್ಗ : ಹಿರಿಯೂರು ವಾಣಿವಿಲಾಸ ಸಾಗರಕ್ಕೆ ನೀರು ಹರಿಸುವ ಭದ್ರಾ ಮೇಲ್ದಂಡೆ ಕಾಮಗಾರಿ ಯೋಜನೆಯ ಅಜ್ಜಂಪುರ ಬಳಿ ರೈಲ್ವೆ ಕ್ರಾಸಿಂಗ್‌ ಬಳಿ ಕುಸಿದಿರುವ ವೈಜಂಕ್ಷ ನ್‌ ನಾಲಾ ಕಾಮಗಾರಿಯ ಸೇತುವೆ ಸ್ಥಳಕ್ಕೆ ಚಿತ್ರದುರ್ಗ ಸಂಸದ ಎ. ನಾರಾಯಣಸ್ವಾಮಿ ಮಂಗಳವಾರ ಭೇಟಿ ನೀಡಿ ವೀಕ್ಷಿಸಿದರು.
Vijaya Karnataka Web view of vyjakshan nala works bridge
ವೈಜಂಕ್ಷ ನ್‌ ನಾಲಾ ಕಾಮಗಾರಿ ಸೇತುವೆ ವೀಕ್ಷಣೆ


ಈ ಕುರಿತು ಎಂಜಿನಿಯರ್‌ ಜತೆ ಚರ್ಚಿಸಿದ ಸಂಸದರು, ಎರಡೂವರೆ ಮೀಟರ್‌ ಅಗಲದ ಪೈಪ್‌ ಅಳವಡಿಸಿ ಕೂಡಲೇ ನೀರು ಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಯಾವುದೇ ಕಾರಣಕ್ಕೂ ಕಾಮಗಾರಿ ನಿಲ್ಲಿಸುವುದು ಬೇಡ. ಪರ್ಯಾಯವಾಗಿ ಸಮರೋಪಾದಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ನೀರು ಹರಿಸಬೇಕಾಗಿದೆ ಎಂದು ಹೇಳಿದರು.

ತೋಟಗಾರಿಕೆ ಬೆಳೆಗಳಿಗೆ ಹೆಸರಾಗಿರುವ ಹಿರಿಯೂರು ತಾಲೂಕಿನ ರೈತರು ಮಳೆಯಿಲ್ಲದೆ ಕಂಗಾಲಾಗಿದ್ದಾರೆ. ಹಾಗಾಗಿ ಭದ್ರಾ ಮೇಲ್ದಂಡೆ ಯೋಜನೆಯ ನೀರು ಹರಿಸುವುದೊಂದು ಉಳಿದಿರುವ ಏಕೈಕ ಮಾರ್ಗ. ಹಾಗಾಗಿ ಕಾಮಗಾರಿ ಚುರುಕುಗೊಳಿಸಿ ನೀರು ಹರಿಸಬೇಕು ಎಂದು ಸೂಚಿಸಿದರು.

ಎಂಜಿನಿಯರ್‌ ಪಾಳೆಗಾರ್‌, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಿ.ಎಚ್‌. ಮೋಹನ್‌ ಕುಮಾರ್‌, ಸತ್ಯನಾರಾಯಣ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ