ಚಿತ್ರದುರ್ಗ: ಮತದಾರರ ಪಟ್ಟಿ ಪರಿಶೀಲನೆ ಕುರಿತು ಸಾಮಾಜಿಕ ಜಾಲತಾಣಗಳಾದ ಟ್ವಿಟರ್, ವಾಟ್ಸಪ್ನಂತ ಗ್ರೂಪ್ಗಳಲ್ಲಿವ್ಯಾಪಕ ಪ್ರಚಾರ ಮಾಡಬೇಕು ಎಂದು ಮತದಾರರ ಪಟ್ಟಿ ವೀಕ್ಷಕರಾದ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಹೇಳಿದರು.
ಡಿಸಿ ಕಚೇರಿ ಸಭಾಂಗಣದಲ್ಲಿಗುರುವಾರ ಆಯೋಜಿಸಿದ್ದ ವಿಧಾನಸಭೆ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿಮಾತನಾಡಿದರು.
ತಹಸೀಲ್ದಾರ್ಗಳು ಸಂಬಂಧಪಟ್ಟ ಮತದಾನ ಕೇಂದ್ರಗಳಿಗೆ ಖುದ್ದಾಗಿ ಭೇಟಿ ನೀಡಿ, ಬಿಎಲ್ಒಗಳ ಕಾರ್ಯವೈಖರಿ ಪರಿಶೀಲಿಸಿ ವರದಿ ಸಲ್ಲಿಸಬೇಕು. ದಿನಕ್ಕೆ ಕನಿಷ್ಠ 40 ಬಿಎಲ್ಒ ಕಾರ್ಯದ ಬಗ್ಗೆ ಗಮನಹರಿಸಬೇಕು. ಬಿಎಲ್ಒ ಅವರಿಂದ ಮತದಾರರ ಮತಪಟ್ಟಿ ಪರಿಷ್ಕರಣೆ ಕುರಿತ ಅಭಿಪ್ರಾಯ ಸಂಗ್ರಹಿಸಬೇಕು ಎಂದು ತಾಕೀತು ಮಾಡಿದರು.
ಒಂದು ವಾರದಲ್ಲಿಉಪ ವಿಭಾಗಾಧಿಕಾರಿಗಳು ಜಿಲ್ಲೆಯ ಮೂರು ತಾಲೂಕುಗಳಿಗೆ ಹಾಗೂ ಅಪರ ಜಿಲ್ಲಾಧಿಕಾರಿಗಳು ಮೂರು ತಾಲೂಕುಗಳಿಗೆ ಭೇಟಿ ನೀಡಿ, ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ ಕಾರ್ಯದ ಬಗ್ಗೆ ವರದಿ ತಯಾರಿಸಬೇಕು ಎಂದರು.
ತಂತ್ರಾಂಶದಲ್ಲಿತೊಂದರೆ ಅಥವಾ ಮತದಾರರ ಪಟ್ಟಿಗೆ ಮತದಾರರನ ಹೆಸರು ನೋಂದಾಯಿಸುವ ಸಮಸ್ಯೆಗಳು ಅಥವಾ ಬಿಎಲ್ಒಗಳಿಂದ ಮತದಾರರ ಪಟ್ಟಿಗೆ ಸಂಬಂಧಿಸಿದ ಗೊಂದಲಗಳಿದ್ದರೆ ತಹಸೀಲ್ದಾರ್ಗಳು ಇದನ್ನು ಸಂಗ್ರಹಿಸಿ, ಚುನಾವಣಾ ಶಾಖೆಗೆ ನೀಡುವಂತೆ ಸೂಚಿಸಿದರು.
ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಮಾತನಾಡಿ, ಜಿಲ್ಲೆಯಲ್ಲಿ1343207 ಮತದಾರರಿದ್ದು, ನಗರ ಪ್ರದೇಶದಲ್ಲಿ276 ಹಾಗೂ ಗ್ರಾಮೀಣ ಪ್ರದೇಶದಲ್ಲಿ1372 ಮತಗಟ್ಟೆ ಸೇರಿದಂತೆ ಜಿಲ್ಲೆಯಲ್ಲಿಒಟ್ಟು 1648 ಮತಗಟ್ಟೆ ಗುರುತಿಸಲಾಗಿದೆ. ಬಿಎಲ್ಒಗಳಿಗೆ ಶಿಕ್ಷಕರು ಹಾಗೂ ಶಿಕ್ಷಕೇತರ ವೃಂದದ 1648 ಜನರನ್ನು ಆಯ್ಕೆ ಮಾಡಿ, ತರಬೇತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿಮತದಾರರ ನೋಂದಣಿ ಬಗ್ಗೆ ಜಾಗೃತಿ ಮೂಡಿಸುವಲ್ಲಿಜಿಲ್ಲಾಸ್ವೀಪ್ ಸಮಿತಿ ಮುಖ್ಯಸ್ಥರಾಗಿರುವ ಜಿಪಂ ಸಿಇಒ ಕೈಗೊಂಡಿ ರುವ ಕಾರ್ಯಕ್ರಮಗಳ ಬಗ್ಗೆ ಸಂಪೂರ್ಣ ವರದಿ ಎರಡು ದಿನಗಳ ಒಳಗಾಗಿ ಸಲ್ಲಿಕೆಯಾಗಬೇಕು ಎಂದರು.
ಸಭೆಯಲ್ಲಿಅಪರ ಜಿಲ್ಲಾಧಿಕಾರಿ ಸಂಗಪ್ಪ, ಉಪ ವಿಭಾಗಾಧಿಕಾರಿ ವಿ. ಪ್ರಸನ್ನ ಸೇರಿದಂತೆ ಜಿಲ್ಲೆಯ ಎಲ್ಲಾತಾಲೂಕಿನ ತಹಸೀಲ್ದಾರ್ಗಳು ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ಇದ್ದರು.
**
ಪಟ್ಟಿಯಿಂದ ಬಿಟ್ಟು ಹೋಗದಿರಲಿ
ಜಿಲ್ಲೆಯಲ್ಲಿ30 ರಿಂದ 39 ವಯಸ್ಸಿನ ಶೇ 24.45, 20 ರಿಂದ 29 ವಯಸ್ಸಿನವರು ಶೇ.21.31 ಹಾಗೂ 40ರಿಂದ 49 ವಯಸ್ಸಿನ ಮತದಾರರು ಶೇ.19.96ರಷ್ಟಿದ್ದಾರೆ. ಆದರೆ 18ರಿಂದ 19 ವರ್ಷ ವಯೋಮಾನದ ಮತದಾರರು ಕೇವಲ ಶೇ.1.16 ರಷ್ಟಿದೆ. ಈ ಕುರಿತು ಆಯಾ ತಾಲೂಕಿನ ತಹಸೀಲ್ದಾರರು ಪರಿಶೀಲಿಸಿ, ತಪ್ಪುಗಳಿದ್ದರೆ ತಿದ್ದಿಕೊಳ್ಳಬೇಕು. 18 ವರ್ಷ ಮೇಲ್ಪಟ್ಟ ಯಾವ ಮತದಾರರ ಪಟ್ಟಿಯಿಂದ ತಮ್ಮ ಹೆಸರು ಬಿಟ್ಟು ಹೋಗದಂತೆ ಎಚ್ಚರ ವಹಿಸಬೇಕು ಎಂದು ಮಹೇಶ್ವರ್ ರಾವ್ ಹೇಳಿದರು.
ಡಿಸಿ ಕಚೇರಿ ಸಭಾಂಗಣದಲ್ಲಿಗುರುವಾರ ಆಯೋಜಿಸಿದ್ದ ವಿಧಾನಸಭೆ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿಮಾತನಾಡಿದರು.
ತಹಸೀಲ್ದಾರ್ಗಳು ಸಂಬಂಧಪಟ್ಟ ಮತದಾನ ಕೇಂದ್ರಗಳಿಗೆ ಖುದ್ದಾಗಿ ಭೇಟಿ ನೀಡಿ, ಬಿಎಲ್ಒಗಳ ಕಾರ್ಯವೈಖರಿ ಪರಿಶೀಲಿಸಿ ವರದಿ ಸಲ್ಲಿಸಬೇಕು. ದಿನಕ್ಕೆ ಕನಿಷ್ಠ 40 ಬಿಎಲ್ಒ ಕಾರ್ಯದ ಬಗ್ಗೆ ಗಮನಹರಿಸಬೇಕು. ಬಿಎಲ್ಒ ಅವರಿಂದ ಮತದಾರರ ಮತಪಟ್ಟಿ ಪರಿಷ್ಕರಣೆ ಕುರಿತ ಅಭಿಪ್ರಾಯ ಸಂಗ್ರಹಿಸಬೇಕು ಎಂದು ತಾಕೀತು ಮಾಡಿದರು.
ಒಂದು ವಾರದಲ್ಲಿಉಪ ವಿಭಾಗಾಧಿಕಾರಿಗಳು ಜಿಲ್ಲೆಯ ಮೂರು ತಾಲೂಕುಗಳಿಗೆ ಹಾಗೂ ಅಪರ ಜಿಲ್ಲಾಧಿಕಾರಿಗಳು ಮೂರು ತಾಲೂಕುಗಳಿಗೆ ಭೇಟಿ ನೀಡಿ, ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ ಕಾರ್ಯದ ಬಗ್ಗೆ ವರದಿ ತಯಾರಿಸಬೇಕು ಎಂದರು.
ತಂತ್ರಾಂಶದಲ್ಲಿತೊಂದರೆ ಅಥವಾ ಮತದಾರರ ಪಟ್ಟಿಗೆ ಮತದಾರರನ ಹೆಸರು ನೋಂದಾಯಿಸುವ ಸಮಸ್ಯೆಗಳು ಅಥವಾ ಬಿಎಲ್ಒಗಳಿಂದ ಮತದಾರರ ಪಟ್ಟಿಗೆ ಸಂಬಂಧಿಸಿದ ಗೊಂದಲಗಳಿದ್ದರೆ ತಹಸೀಲ್ದಾರ್ಗಳು ಇದನ್ನು ಸಂಗ್ರಹಿಸಿ, ಚುನಾವಣಾ ಶಾಖೆಗೆ ನೀಡುವಂತೆ ಸೂಚಿಸಿದರು.
ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಮಾತನಾಡಿ, ಜಿಲ್ಲೆಯಲ್ಲಿ1343207 ಮತದಾರರಿದ್ದು, ನಗರ ಪ್ರದೇಶದಲ್ಲಿ276 ಹಾಗೂ ಗ್ರಾಮೀಣ ಪ್ರದೇಶದಲ್ಲಿ1372 ಮತಗಟ್ಟೆ ಸೇರಿದಂತೆ ಜಿಲ್ಲೆಯಲ್ಲಿಒಟ್ಟು 1648 ಮತಗಟ್ಟೆ ಗುರುತಿಸಲಾಗಿದೆ. ಬಿಎಲ್ಒಗಳಿಗೆ ಶಿಕ್ಷಕರು ಹಾಗೂ ಶಿಕ್ಷಕೇತರ ವೃಂದದ 1648 ಜನರನ್ನು ಆಯ್ಕೆ ಮಾಡಿ, ತರಬೇತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿಮತದಾರರ ನೋಂದಣಿ ಬಗ್ಗೆ ಜಾಗೃತಿ ಮೂಡಿಸುವಲ್ಲಿಜಿಲ್ಲಾಸ್ವೀಪ್ ಸಮಿತಿ ಮುಖ್ಯಸ್ಥರಾಗಿರುವ ಜಿಪಂ ಸಿಇಒ ಕೈಗೊಂಡಿ ರುವ ಕಾರ್ಯಕ್ರಮಗಳ ಬಗ್ಗೆ ಸಂಪೂರ್ಣ ವರದಿ ಎರಡು ದಿನಗಳ ಒಳಗಾಗಿ ಸಲ್ಲಿಕೆಯಾಗಬೇಕು ಎಂದರು.
ಸಭೆಯಲ್ಲಿಅಪರ ಜಿಲ್ಲಾಧಿಕಾರಿ ಸಂಗಪ್ಪ, ಉಪ ವಿಭಾಗಾಧಿಕಾರಿ ವಿ. ಪ್ರಸನ್ನ ಸೇರಿದಂತೆ ಜಿಲ್ಲೆಯ ಎಲ್ಲಾತಾಲೂಕಿನ ತಹಸೀಲ್ದಾರ್ಗಳು ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ಇದ್ದರು.
**
ಪಟ್ಟಿಯಿಂದ ಬಿಟ್ಟು ಹೋಗದಿರಲಿ
ಜಿಲ್ಲೆಯಲ್ಲಿ30 ರಿಂದ 39 ವಯಸ್ಸಿನ ಶೇ 24.45, 20 ರಿಂದ 29 ವಯಸ್ಸಿನವರು ಶೇ.21.31 ಹಾಗೂ 40ರಿಂದ 49 ವಯಸ್ಸಿನ ಮತದಾರರು ಶೇ.19.96ರಷ್ಟಿದ್ದಾರೆ. ಆದರೆ 18ರಿಂದ 19 ವರ್ಷ ವಯೋಮಾನದ ಮತದಾರರು ಕೇವಲ ಶೇ.1.16 ರಷ್ಟಿದೆ. ಈ ಕುರಿತು ಆಯಾ ತಾಲೂಕಿನ ತಹಸೀಲ್ದಾರರು ಪರಿಶೀಲಿಸಿ, ತಪ್ಪುಗಳಿದ್ದರೆ ತಿದ್ದಿಕೊಳ್ಳಬೇಕು. 18 ವರ್ಷ ಮೇಲ್ಪಟ್ಟ ಯಾವ ಮತದಾರರ ಪಟ್ಟಿಯಿಂದ ತಮ್ಮ ಹೆಸರು ಬಿಟ್ಟು ಹೋಗದಂತೆ ಎಚ್ಚರ ವಹಿಸಬೇಕು ಎಂದು ಮಹೇಶ್ವರ್ ರಾವ್ ಹೇಳಿದರು.